ಎಲ್ಲರೂ ಮಹಾತ್ಮಾ ರಾಗದಿರಲೂ ಕಾರಣವೇನು ?
ನಾನು ಬಹಳ ದಿನದಿಂದಲೂ ಬಹಳ ಯೋಚಿಸುತ್ತಿದ್ದೆ , ನಾವು ಶಾಲಾ - ಕಾಲೇಜು ಗಳಲ್ಲಿ ದೊಡ್ಡ ದೊಡ್ಡ ಸಭೆ ಸಮಾರಂಭ ಗಳಲ್ಲಿ ಮಹಾತ್ಮರ ಬಗ್ಗೆ , ಅವರ ಜೇವನ ಕ್ರಮದ ಬಗ್ಗೆ , ಅವರು ನಡೆದು ಬಂದ ದಾರಿಯ ಬಗ್ಗೆ , ಅವರ ಪ್ರಾಮಾಣಿಕತೆಯ ಬಗ್ಗೆ ಹೇಳುತ್ತೇವೆ , ಆದರೆ ಹೆಚ್ಚಿನ ಜನರು ಮಹಾತ್ಮ ರಾಗದಿರಲೂ ಮುಖ್ಯ ಕಾರಣ ಅದರಲ್ಲೂ ನೈಜ ಕಾರಣ ನನಗೆ ಹೊಳೆದಿದೆ . "ಹಲಾವಾರು ಮಹಾತ್ಮರು (ಹುತಾತ್ಮರು ) ಸಜೀವ ದಹನಕ್ಕೆ ಒಳಗಾದವರೆ !",
ರಾಷ್ಟ್ರಪಿತ ಮಹಾತ್ಮ ಗಾಂಧೀ ನಾತ ರಾಮ್ ಗೂಡ್ಸ್ ರವರ ಗುಂಡಿಗೆ ಬಲಿಯಾದರು !, ಇಂದಿರಾ ಗಾಂಧೀ ಮಾನವ ಹತ್ಯೆ ಬಾಂಬ್ಗೆ ಬಲಿಯಾದರು . ರಾಜೀವ ಗಾಂಧೀ ಅವರು ಮಾನವ ಹತ್ಯೆ ಬಾಂಬ್ ಗೆ ಬಲಿಯಾದರು !, ಈ ಎಲ್ಲಾ ಕಾರಣ ಗಳ ಹಿಂದೆ ಶಾಂತಿ ವಾದ ಅಡಗಿದೆ .
ಒಂದೆಡೆ ಅರವಿಂದ ಕೆಜ್ರಿವಾಲ ಹೀಗೆ ಹೇಳಿದ್ದಾರೆ "ಸಾರ್ವಜನಿಕವಾಗಿ ಗುರುತಿಸಿಕೊಂಡ ಮೇಲೆ ಜವಾಬ್ದಾರಿಯ ಜತೆಗೆ ಆಪತ್ತನ್ನೂ ಕಟ್ಟಿ ಕೊಳ್ಳಬೇಕಾಗುತ್ತದೆ . ಎಷ್ಟೋ ಬಾರಿ ಪ್ರಾಣ -ಅಪಾಯದ ಸಂಧರ್ಭಗಳೂ ಎದುರಾಗುವುದು ಉಂಟು" !..
ಹಾಗೆಯೇ ಮಾನ್ಯ ಯಡಿಯೂರಪ್ಪ ಒಂದೆಡೆ ಹೇಳಿದ್ದಾರೆ "ಆಕ್ರಮಣ ಮಾಡುವುದು ಗೊತ್ತು . ಆಪತ್ತಿನಿಂದ ಪಾರಾಗುವುದು ಗೊತ್ತು "!. ಅಂದರೆ ಇದೆಲ್ಲ ಒಬ್ಬ ಇಂದೋ , ನಿನ್ನೆಯೋ ಹುಟ್ಟಿದ , ಲೋಕ ಪರಿಜ್ಞಾನ ವಿಲ್ಲದ ವ್ಯಕ್ತಿಗಳು ಹೇಳಿದ್ದರೆ ನಾವು ಅನುಮಾನ ಪಡಬಹುದು , ಆದರೆ ಇವರ ಜೀವಮಾನ ವಿಡಿ ಸಮಾಜ ಸೇವೆಗಾಗಿಯೇ ಸವೆದವರು.
ಅಂದರೆ ಇದಕ್ಕೆಲ್ಲ ಪರಿಹಾರ ವೇನು ? ಎಲ್ಲಿಂದ ಪ್ರಾರಂಭ ವಾಗಬೇಕು ? ಪರಿವರ್ತನೆ ? . ಇದಕ್ಕೆ ನಮ್ಮ ನಿಮ್ಮೆಲ್ಲರ ನೆಚ್ಚಿನ ಮದರ್ ತೆರೇಸಾ ಸ್ಪಷ್ಟವಾಗಿ ಹೇಳಿದ್ದಾರೆ ." ಅವರವರ ಮನೆ ಮುಂದೆ ಸ್ವಚ್ಹ ಮಾಡಿಕೊಂಡರೆ ಇಡಿ ವಿಶ್ವವೇ ಸ್ವಚ್ಹ ವಾಗುತ್ತದೆ ".
ಅಂದರೆ ಇದರ ಅರ್ಥ ನಮಗೆ ನಾವು ಪ್ರಾಮಾಣಿಕರಾಗಿ ಇರಬೇಕು ಎಂದರ್ಥ ವಲ್ಲವೇ !
ಆತ್ಮಿಯರೇ ಈ ಲೇಖನಕ್ಕೆ ಸಂಭದಪಟ್ಟ ನಿಮ್ಮ ಅಭಿಪ್ರಾಯ ,ಅನಿಸಿಕೆ ,ಟೀಕೆ ,ಟಿಪ್ಪಣಿ ನಮಗೆ ಬರೆದು ಕಳುಹಿಸಿ .
ಪ್ರೀತಿ ಹಾಗೂ ವಿಶ್ವಾಸಗಳೊಂದಿಗೆ
ನಿಮ್ಮೊಂದಿಗೆ ನಿಮ್ಮ ನೆಟ್ ನಾಗ