MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಬುಧವಾರ, ಅಕ್ಟೋಬರ್ 27, 2010

ಬದುಕಿನಲ್ಲಿ ದಿಡೀರ್ ಹಣ ಬಂದು ಶ್ರೀಮಂತರಾಗಿ ನಂತರ ಭಿಕಾರಿಗಳಾದವರ ನೈಜ ಕಥೆ

ಏಯ್ ! ಗುರು ನಾನು ನಿಜವಾಗಿಯೂ ಹೇಳುತ್ತೇನೆ , ನೀನು ಇವತ್ತಲ್ಲ ನಾಳೆ ನೆಟ್ ವರ್ಕ್ ಮಾರ್ಕೆಟಿಂಗ್ ಗೆ ಬಂದೆ ಬರುತ್ತಿಯ . ನೀನು ಶ್ರೀಮಂತ ನಾಗುತ್ತಿಯ , ಬೇರೆಯವರನ್ನು ಶೀಮಂತರನ್ನಾಗಿ ಮಾಡುತ್ತಿಯ .!

ಈ ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ನ ಸಿದ್ದಾಂತ.

ಮನುಷ್ಯನಿಗೆ ದುಡಿಯದೆ , ಕಷ್ಟಪಡದೇ ಹಣ ಮಾಡುವುದು ಎಂದರೆ ತುಂಬಾ ಇಷ್ಟ, ಈ ರೀತಿ ಇಷ್ಟ ಪಟ್ಟು ಕಷ್ಟ ಪಡದೆ ದುಡ್ಡು ಮಾಡಲು ಹೋಗಿ, ದುಡ್ಡು ಮಾಡಿ ಜೈಲು ಸೇರಿದವರು, ಕೊಲೆ ಆದವರು, ಭಿಕಾರಿ ಆದವರು ಬಹಳಷ್ಟು ಜನ ಸಿಗುತ್ತಾರೆ . ಅಂತ ಜನರ ಕೆಲವು ಅನುಭವಗಳು ಇಲ್ಲಿವೆ.

ವಿಲ್ಲಿಯಮ್ ಪೋಸ್ಟ್ ಒಂದು ಸಾವಿರದ ಒಂಬತ್ತು ನೂರ ಎಂಬತ್ತೆನ್ಟರಲ್ಲಿ ಪೆನ್ಸಿಲ್ವೇನಿಯಾ ಲಾಟರಿಯಲ್ಲಿ ಸುಮಾರು ಅರವತ್ತೈದು ಕೋಟಿ ರೂಪಾಯಿಗಳನ್ನು ಗೆದ್ದ ಅದೃಷ್ಟಶಾಲಿ . ಕೆಲವೇ ವರ್ಷಗಳಲ್ಲಿ ಸರಕಾರದ ನಿರಾಶ್ರೀತ ವೇತನದಲ್ಲಿ ಬದುಕುವನ್ತಾದರು . ಅವರೇ ಹೇಳಿದ ಅವರ ದುರಂತ ಕಥಾನಕ ಇದು. "ಬಹುಮಾನ ಗಳಿಸಿದ್ದೊಂದು ದುಸ್ವಪ್ನ ! ಬಹುಮಾನ ಬಂದಾಕ್ಷಣ ನನ್ನ ಮಾಜಿ ಪತ್ನಿ ದಾವೆ ಹೂಡಿ ದೊಡ್ಡ ಪಾಲು ಕಿತ್ತುಕೊಂಡಳು . ನಾನು ಸತ್ತರೆ ನನ್ನ ಹಣವೆಲ್ಲ ಅವನಿಗೆ ಸಿಗುತ್ತದೆಂಬ ದುರಾಸೆಯಿಂದ ನನ್ನ ಸ್ವಂತ ತಮ್ಮ ಸುಪಾರಿ ಕೊಲೆಗಾರರನ್ನು ನೇಮಿಸಿ ನನ್ನನ್ನು ಕೊಲ್ಲಿಸಲು ಯತ್ನಿಸಿ ಸೆರೆಮನೆ ಸೇರಿದ. ಪ್ರಾಣರಕ್ಷಣೆಗೆ ಬಾಡಿಗೆ ಅಂಗರಕ್ಷಕರನ್ನು ನೇಮಿಸಿಕೊಂಡು ಬಹಳಷ್ಟು ಹಣ ಕಳೆದುಕೊಂಡೆ . ನಂತರ ಇನ್ನೊಬ್ಬ ಸೋದರ ಹಳೆ ಕಾರುಗಳನ್ನು ಕೊಂದು ಮಾರುವ ವ್ಯಾಪಾರಕ್ಕೆ, ಮತ್ತೊಬ್ಬ ಸೋದರ ದುಬಾರಿ ಹೋಟೆಲ್ ವ್ಯವಹಾರಕ್ಕೆ ನನ್ನನ್ನು ಪ್ರೇರೇಪಿಸಿದರು. ಇವೆರಡೂ ವಹಿವಾಟಿಗೆ ನನ್ನಲ್ಲಿದ್ದ ಹಣ ಸಾಕಾಗಲಿಲ್ಲ. ಸಾಲ ಮಾಡಿದೆ . ನನಗೆ ವ್ಯವಹಾರಗಳಲ್ಲಿ ಏನೂ ಅನುಭವವಿರಲಿಲ್ಲ. ಅಪಾರ ನಷ್ಟವಾಯಿತು. ಅವರಿಬ್ಬರೂ ಓಡಿಹೋದರು . ಸಾಲದ ಹೊರೆಯಿಂದ ಪಾರಾಗಲು ದಿವಾಳಿ ಚೀಟಿ ಪಡೆದೆ. ನನಗೀಗ ಅರವತ್ತೈದು ವರ್ಷ. ಅನಾರೋಗ್ಯ , ಹೃದಯಬೇನೆ , ದಣಿದಿದ್ದೇನೆ, ದಿನ ನೂಕುತ್ತಿದ್ದೇನೆ , ಲಾಟರಿ ಗೆಲ್ಲುವುದಕ್ಕೆ ಮುಂಚೆಯೇ ಚೆನ್ನಾಗಿದ್ದೆ " ಎಂದು ನಿಟ್ಟುಸಿರು ಬಿಡುತ್ತಾರೆ.

ಕೆನ್ ಪ್ರಾಕ್ಸ್ ಎಂಬ ಬಡ ಮೆಕ್ಯಾನಿಕ್ ಗೆ ನಾಲ್ಕು ಕೋಟಿ ರೂಪಾಯಿಗಳ ಲಾಟರಿ ಹೊಡೆಯಿತು .ದೊಡ್ಡ ವ್ಯಾಪಾರ ಪ್ರಾರಂಭಿಸಿದರು . ಕೈಯಲ್ಲಿ ಕಾಸಿತ್ತು. ಸಲಹೆಗಾರರು ಬಂದರು. ಬಂಧುಗಳು ಬಂದರು . ಬಂದವರೆಲ್ಲ ತಿಂದರು. ಕೆನ್ ಕೈ ಖಾಲಿ ಆಯಿತು. ಅವರ ಮಗ ರಿಕ್ "ಮೂರ್ನಾಲ್ಕು ವರ್ಷ ಬಹಳ ಚೆನ್ನಾಗಿತ್ತು. ಮನೆ ತುಂಬಾ ಜನರಿದ್ದರು . ಈಗ ಎಲ್ಲ ಖಾಲಿ. ನಾನು, ನಮ್ಮಪ್ಪ ಇದ್ದೇವೆ. ಈಗ ಹೆಲಿಕಾಪ್ಟರಿನಲ್ಲಿ ಹಾರುವ ಮಾತುಗಳಿಲ್ಲ. ನಮ್ಮಪ್ಪ ಈಗ ಮತ್ತೆ ಮೆಕ್ಯಾನಿಕ್ ಕೆಲಸ ಮಾಡುತ್ತಿದ್ದಾರೆ."ಎನ್ನುತ್ತಾರೆ.

ಮತ್ತೊಬ್ಬರು ಜನಿಟ್ ಲೀ ಒಂದು ಸಾವಿರದ ಒಂಭತ್ತು ನೂರ ತೊಂಭಾತ್ತ್ಮೂರರಲ್ಲಿ ಲಾಟರಿಯಲ್ಲಿ ಎಪ್ಪತ್ತೆರಡು ಕೋಟಿ ರೂಪಾಯಿ ಗೆದ್ದರು. ಎಲ್ಲರೂ ಅವರನ್ನು ನಿಮ್ಮಂತಹವರು ಇದುವರೆಗೂ ಹುಟ್ಟಿರಲಿಲ್ಲ.ಎಂದು ಹೊಗಳುತ್ತಿದ್ದರು. ಲೀಯವರಿಗೆ ಹೊಗಳಿಕೆ ಬಹಳ ಹಿಡಿಸುತ್ತಿತ್ತು. ಧಾರಾಳವಾಗಿ ರಾಜಕಾರಣಿಗಳಿಗೆ , ಸಂಘ ಸಂಸ್ಥೆಗಳಿಗೆ ಹಿಂದೆಮುಂದೆ ನೋಡದೆ ದಾನ ಮಾಡುತ್ತ ಹೋದರು. ಎರಡು ಸಾವಿರದ ಒಂದರಲ್ಲಿ ದಿವಾಳಿತನ ಘೋಷಿಸಿ ಕೊಳ್ಳಬೇಕಾಯಿತು . ಏಕೆಂದರೆ ಅವರ ಬಳಿ ಕೇವಲ ಏಳು ಸಾವಿರ ರೂಪಾಯಿ ಮಾತ್ರ ಉಳಿದಿತ್ತು.

ಇದರ ಜತೆಗೆ ನೀವೂ ಚೀಟಿ ಹಾಕಿ ಚೀಟಿ ಹಣ ಕಟ್ಟಿಸಿಕೊಂಡು ರಾತ್ರೋ ರಾತ್ರಿ ಓಡಿಹೋದವರು , ಸಾಲ ತೆಗೆದುಕೊಂಡು ಸಾಲ ಕೊಟ್ಟೆ ಇಲ್ಲ ಎಂದು ಯಾಮಾರಿಸಿದವರು. ಇತ್ಯಾಧಿ ಮುಟ್ಟಾಳ ರ ಬಗ್ಗೆ ನಮಗೆ ಬರೆದು ಕಳುಹಿಸಿ. ಅದನ್ನು ಮತ್ತೊಂದು ದಿನ ಬರೆದು ವಿಶ್ವಕ್ಕೆ ಅನುಭವದ ಕಾಣಿಕೆ ನೀಡೋಣ.

ಇಂತಹ ಉದಾಹರಣೆಗಳು ಪ್ರಪಂಚದ ತುಂಬಾ ನೂರಾರಿವೆ . ಅಮೇರಿಕಾದಲ್ಲಿ ದಿಢೀರ್ ಶ್ರೀಮಂತರಿಗೆ ಸಲಹೆ ಕೊಡಲೆಂದೇ "ಸಡನ್ ಮಣಿ ಇನ್ ಸ್ಟಿಟ್ಯೂಟ್ " ಎಂಬಿತ್ಯಾದಿ ಸಂಸ್ಥೆ ಗಳು ಪ್ರಾರಂಭವಾಗಿ ಒಳ್ಳೆಯ ಕಾರ್ಯ ನಿರ್ವಹಿಸುತ್ತಿವೆ. ಅನೇಕ ಪರಿಣತರೂ ಇದ್ದಾರೆ. ಗೆದ್ದ ಹಣ ಕಳೆದು ಕೊಳ್ಳುವ ಕಾರಣಗಳನ್ನು ಅವರು ಅಧ್ಯಯನ ಮಾಡಿದ್ದಾರೆ. ಅವು ಹೀಗಿವೆ. ದೊಡ್ಡ ಮನೆಗೆ , ದುಬಾರಿ ಕಾರುಗಳಿಗೆ ಹಣ ಸುರಿಯುವುದು . ಅನುಭವವಿಲ್ಲದ ವ್ಯವಹಾರಗಳನ್ನು ಪ್ರಾರಂಭಿಸುವುದು . ಹೊಗಳಿಕೆಗೆ ಮರುಳಾಗಿ ಹೇರಳವಾಗಿ ದಾನ -ಧರ್ಮ ಮಾಡುವುದು. ಸಂಬಂಧ ಹೇಳಿಕೊಂಡು ಬರುವವರಿಗೆಲ್ಲ ಮನೆ ಹಾಕುವುದು . ಮತ್ತು ಕಷ್ಟಕಾಲ ಬರುವುದೇ ಇಲ್ಲವೆಂದು ಭಾವಿಸುವುದು.

ಅವರು ಬಹುಮಾನ ಬಂದ ಒಂದು ವರ್ಷ ಬಾಡಿಗೆ ಮನೆಯಲ್ಲಿದ್ದು ಏನನ್ನೂ ಮಾಡದೆ ಎಲ್ಲವನ್ನು ಅಧ್ಯಯನ ಮಾಡಿ ಎನ್ನುತ್ತಾರೆ. ನಿಮ್ಮ ಅನಿಸಿಕೆ ಬರೆದು ಕಳುಹಿಸಿ ನೋಡೋಣ.

ನದ ಯಾವುದೇ ವೇಳೆಯಲ್ಲಿ ನಿಮ್ಮ ಅವಕಾಶದ ವಿಡಿಯೋ ಗಳನ್ನೂ ವೀಕ್ಷಿಸಿ ನೋಡಿ
ಉತ್ತರ; ದಯವಿಟ್ಟು ಈ ಕೆಳಗಿನ ಲಿಂಕ್ ಗಳನ್ನೂ ಸೆಲೆಕ್ಟ್ , ಕಾಪಿ, ಸರ್ವರ್ ಪ್ಲೇಸ್ ನಲ್ಲಿ ಪೇಸ್ಟ್ ಮಾಡಿ ಎಂಟರ್ ಮಾಡಿ

http://sunnaturalflash.freeppcleads.com/

http://sunnaturalflash.freeppcleads.com/letter.php

ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ.
ಎ.ಟಿ. ನಾಗರಾಜ
ವ್ಯಕ್ತಿತ್ವ ವಿಕಾಸನ ತರಭೇತಿ ಗಾರರು , ಹಾಗೂ ನೇರ ಮಾರುಕಟ್ಟೆ

ಪ್ರತಿನಿಧಿ
.http ;//www .sunnaturalflash .com /
sunnaturalflash @gmail .com

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ