ಮಳೆಯ ಬಗ್ಗೆ ಒಂದೆರಡು ಮಾತು
ನನ್ನ ದೂರದ ಸ್ನೇಹಿತ ಒಬ್ಬ ಮಳೆಯ ಬಗ್ಗೆ ಒಂದೆರಡು ಮಾತು ನಿನ್ನ ನೆಟ್ ನಾಗದಲ್ಲಿ ಬರೆ ಎಂದು ಇ-ಮೇಲ್ ಕಳುಹಿಸಿದ್ದಾನೆ. ನನಗೆ ಅರೆ ಮಲೆನಾಡಿನಲ್ಲಿ ಬೆಳೆದವನಿಗೆ ಈ ಮಳೆ ಹೊಸದೇನಲ್ಲ!. ಬೆಂಗಳೂರಿನಂಥ ಬಾರೀ ನಗರಗಳಲ್ಲಿ ನೀರಿಗಾಗಿ ಹಾಹಾಕಾರ ಪ್ರಾರಂಭವಾಗಿದೆ. ಹಾಗೆಯೇ ಅರ್ಜಿ , ಗ್ರಾಹಕರ ಸೇವಾ ಕೇಂದ್ರ, ಕಂಪ್ಲೇಂಟ್ ಇವೆಲ್ಲ ತಲೆ ನೋವಿನವು , ಕಾರ್ಯಕ್ಕೆ ಬಾರದವು ಎಂದು ತಿಳಿದ ಸಾರ್ವಜನಿಕರು ಜಲಮಂಡಳಿಯ ಅಧಿಕಾರಿಗಳನ್ನು ನೇರ ನೇರ ತರಾಟೆಗೆ ತೆಗೆದುಕೊಳ್ಳುವುದು . ಮಾಧ್ಯಮ ದವರ ಎದುರಿಗೆ ಯೋಗ್ಯ ಹಾಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸುವಂತೆ ಮಾಡುವುದು ಮಾಡುತ್ತಿದ್ದಾರೆ. ಒಂದೆರಡು ಜನರಿಗೆ ಒಂದೆರಡು ಕಡೆ ಒದೆಗಳು ಬಿದ್ದುದ್ದರಿಂದ , ಅಧಿಕಾರಿಗಳೆಲ್ಲರೂ ದೇವರಲ್ಲಿ ಮೊರೆ ಹೋಗಿರಬೇಕು .:" ಓ ದೇವರೇ , ನಮಗೆ ಇಡೀ ಬೆಂಗಳೂರು ನಗರಕ್ಕೆ ಎಲ್ಲ ಏರಿಯಾಕ್ಕೆ ನೀರು ಸರಬರಾಜು ಮಾಡುವಷ್ಟು ನೀರು ದೊರಕಿಸು. ಇಲ್ಲವಾದರೆ ನಮಗೂ ಒದೆ ಗಳನ್ನೂ ಸಾರ್ವಜನಿಕರು ಹೇಳದೆ ಕೇಳದೆ ತಿನ್ನಲಾರದಷ್ಟು ಕೊಡುತ್ತಾರೆ . ಹಾಗಾಗಿ ದೇವರು ಇವರ ಪ್ರಾರ್ಥನೆಯನ್ನು ಈಡೇರಿಸಿ ಕೊಟ್ಟಿರಬೇಕು.
ವಂದನೆಗಳೊಂದಿಗೆ
ಎ.ಟಿ.ನಾಗರಾಜ
ನೇರ ಮಾರುಕಟ್ಟೆ ಪ್ರತಿನಿಧಿ ಮತ್ತು ವ್ಯಕ್ತಿತ್ವ ವಿಕಾಸನ ತರಭೇತಿಗಾರ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ