MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಶುಕ್ರವಾರ, ಜನವರಿ 7, 2011

ಪವಾಡಸದೃಶ ಪರಿವರ್ತನೆ

ಏಯ್ ! ಗುರು ನಾನು ನಿಜವಾಗಿಯೂ ಹೇಳುತ್ತೇನೆ , ನೀನು ಇವತ್ತಲ್ಲ ನಾಳೆ ನೆಟ್ ವರ್ಕ್ ಮಾರ್ಕೆಟಿಂಗ್ ಗೆ ಬಂದೆ ಬರುತ್ತಿಯ . ನೀನು ಶ್ರೀಮಂತ ನಾಗುತ್ತಿಯ , ಬೇರೆಯವರನ್ನು ಶೀಮಂತರನ್ನಾಗಿ ಮಾಡುತ್ತಿಯ .! ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ನ ಸಿದ್ದಾಂತ.

ಜೂಲಿಯನ್ ನ ಬದಲಾದ ಹೊಸ ವ್ಯಕ್ತಿತ್ತ್ವವನ್ನು ಕಂಡು ನಾನು ದಂಗಾಗಿಹೋದೆ.

'ಕೆಲವೇ ವರ್ಷಗಳ ಹಿಂದೆ ಸುಸ್ತಾದ ಮುದುಕನಂತಿದ್ದ ಮನುಷ್ಯ ಈಗ ಉತ್ಸಾಹಭರಿತ ಯುವಕನಂತಾಗಲು ಹೇಗೆ ಸಾಧ್ಯ?' ಎಂದು ನನ್ನೊಳಗೆ ಅಂದುಕೊಂಡೆ. ಆತ ನವತಾರುನ್ಯ ನೀಡುವ ಯಾವುದೋ ಮಾಂತ್ರಿಕ ಔಷಧ ವನ್ನು ಕುಡಿದಿರಬಹುದೇ? ಇಂಥ ಆಶ್ಚರ್ಯಕರ ಪರಿವರ್ತನೆಯ ರಹಸ್ಯವೇನು ? ಎಂದು ಯೋಚಿಸಿದೆ. ಅಷ್ಟರಲ್ಲೇ ಆತ ಮಾತಾಡತೊಡಗಿದ. ವೃತ್ತಿಯ ಅತಿಸ್ಪರ್ಧೆಯ ಅಸಹನೀಯ ಒತ್ತಡಗಳು ದೈಹಿಕ, ಮಾನಸಿಕ ಆಧ್ಯಾತ್ಮಿಕ ಅಸ್ತಿತ್ವವನ್ನೇ ಹಾಳುಗೆಡಹಿದ್ದನ್ನು ಹೇಳಿದ. ಅವುಗಳಿಂದಾಗಿ ಆತನ ದೇಹ ಬಸವಳಿದಿತ್ತು. ಮನಸ್ಸು ಭಗ್ನವಾಗಿತ್ತು. ಆಗಿದ್ದ ಹೃದಯಾಘಾತ ಆತನ ಆಳದಲ್ಲಿದ್ದ ಗಂಭೀರ ಸಮಸ್ಯೆಯ ಒಂದು ಲಕ್ಷಣವಾಗಿತ್ತಷ್ಟೇ. ಅಂತರಾಷ್ಟ್ರೀಯ ಮಟ್ಟದ ಕ್ರಿಮಿನಲ್ ಲಾಯರ್ ಎಂಬ ಪ್ರಸಿದ್ಧಿ ಪಡೆಯಲು ಆತ ಪಟ್ಟ ಅಪಾರ ಶ್ರಮ, ಅಸಹನೀಯ ಒತ್ತಡಗಳು ಅವನ ಅಮೂಲ್ಯ ಅಂತ ಶ್ಯಕ್ತಿಯನ್ನೇ ಕೆಡವಿಬಿಟ್ಟಿದ್ದವು . ಹೃದಯಾಘಾತದ ನಂತರ ಡಾಕ್ಟರು "ಒಂದೋ ವೃತ್ತಿಯನ್ನು ಬಿಡಬೇಕು ಅಥವಾ ಪ್ರಾಣ ಬಿಡಬೇಕು "ಎನ್ನುವ ಸವಾಲನ್ನು ಎಸೆದಾಗ ಜೂಲಿಯನ್ ತನ್ನಲ್ಲಿ ತಾರುಣ್ಯಾದಲ್ಲಿದ್ದು ಕ್ರಮೇಣ ಕುಂದಿಹೊಗಿದ್ದ ಅಂತಶ್ಯಕ್ತಿಯನ್ನು ಪುನ; ಜಾಗೃತಗೊಳಿಸಲು ಇದೊಂದು ಸುವರ್ಣ ಅವಕಾಶವೆಂದು ಭಾವಿಸಿದ್ದ.

ಜೂಲಿಯನ್ ಎಲ್ಲವನ್ನೂ ನನಗೆ ವಿವರವಾಗಿ ಹೇಳತೊಡಗಿದ. ಪ್ರಾಚೀನ ಸಂಸ್ಕೃತಿಗೆ ಹೆಸರಾದ ಭಾರತದ ಬಗ್ಗೆ ಅವನಲ್ಲಿದ್ದ ಅದಮ್ಯ ಆಕರ್ಷಣೆ , ಅಲ್ಲಿಗೆ ಹೋಗಲು ಸಂಕಲ್ಪಿಸಿದ್ದು, ತನ್ನ ಎಲ್ಲ ಆಸ್ತಿ ಪಾಸ್ತಿಗಳನ್ನು ಮಾರಾಟಮಾಡಿದ್ದು. ಇತ್ಯಾದಿ. "ಭಾರತದ ಮೂಲೆಗಳಲ್ಲಿ ಸಂಚರಿಸಿದೆ . ಒಮ್ಮೊಮ್ಮೆ ಕಾಲ್ನಡಿಗೆಯಲ್ಲಿ , ಒಮ್ಮೊಮ್ಮೆ ರೈಲಿನಲ್ಲಿ , ನನ್ನ ಪಯಣ ಸಾಗಿತ್ತು. ಭಾರತೀಯರ ಸಂಪ್ರದಾಯಗಳನ್ನು ಕಲಿಯುತ್ತಾ , ಅವರ ಮುಗ್ಧ ಮಾನವ ಪ್ರೇಮ, ಸರಳತೆ, ನವೀನ ಜೀವನ ದೃಷ್ಟಿಕೋನಗಳನ್ನು ಮೆಚ್ಚಿಕೊಳ್ಳುತ್ತಾ , ಕಾಲಾತೀತ ದೃಶ್ಯಗಳನ್ನು ವೀಕ್ಷಿಸುತ್ತಾ ನನ್ನ ಯಾತ್ರೆ ಮುಂದುವರೆದಿತ್ತು . ಅಲ್ಲಿ ಬಡವರೂ ತಮ್ಮ ಮನೆ, ಮನೆಗಳನ್ನು ಈ ವಿದೇಶೀ ಯಾತ್ರಿಕನಿಗಾಗಿ ತೆರೆದಿದ್ದರು. ಹೀಗೆ ಈ ರಮ್ಯ ವಾತಾವರಣದಲ್ಲಿ ದಿನಗಳುರುಳಿದವು. ವಾರಗಳೂ ,ತಿಂಗಳುಗಳೂ ಕಳೆದವು. ಕ್ರಮೇಣ ನನ್ನಲ್ಲಿ ಜೀವಂತಿಕೆ ಮೊಳೆಯತೊಡಗಿತು - ಆಗ ತಾನೇ ಹುಟ್ಟಿದ್ದ ಮಗುವಿನಂತೆ , ಸ್ವಾಭಾವಿಕ ಕುತೂಹಲ ಸೃಜನಶೀಲತೆಯ ಕಿಡಿ, ಜೀವನೋತ್ಸಾಹಗಳು ಮರಳಿ ಬರತೊಡಗಿದವು . ನನ್ನೊಳಗೆ ಶಾಂತಿ , ಆನಂದದ ಅನುಭವ ಆಗತೊಡಗಿತು. ನಾನು ಪುನ; ನಗಲಾರಂಭಿಸಿದೆ."

ಭಾರತದ ರಮ್ಯ ಭೂಮಿಯಲ್ಲಿ ಪ್ರತಿಕ್ಷಣವನ್ನೂ ಅನುಭವಿಸುತ್ತಿದ್ದರೂ, ಈ ಯಾತ್ರೆ ಕೆಲಸದಿಂದ ಸುಸ್ತಾಗಿ ವಿಶ್ರಾಂತಿ ಬಯಸುವ ವ್ಯಕ್ತಿಯ ಮಾಮೂಲಿ ಪ್ರವಾಸವಾಗಿರಲಿಲ್ಲ. ಜೂಲಿಯನ್ ಹೇಳುವಂತೆ ಅದೊಂದು ಅಂತರಾತ್ಮದ ಆಧ್ಯಾತ್ಮಿಕಯಾತ್ರೆಯಾಗಿತ್ತು . ಕಾಲ ಮಿಂಚಿ ಹೋಗುವ ಮೊದಲೇ ತನ್ನ ನಿಜ ಸ್ವರೂಪವೇನು , ತನ್ನ ಜೀವನದ ಅರ್ಥ-ಉದ್ದೇಶಗಳೇನು ಎನ್ನುವುದನ್ನು ಕಂಡುಕೊಳ್ಳುವುದು ಅವನ ನಿರ್ಧಾರವಾಗಿತ್ತು. ಅದಕ್ಕಾಗಿ ಧನ್ಯತೆಯನ್ನೂ ಕಂಡುಕೊಳ್ಳುವುದು ಅವನ ನಿರ್ಧಾರವಾಗಿತ್ತು. ಅದಕ್ಕಾಗಿ ಧನ್ಯತೆಯನ್ನೂ ಪೂರ್ಣತೆಯನ್ನೂ , ಸಾಕ್ಷಾತ್ಕಾರವನ್ನೂ ನೀಡುವ ಪ್ರಾಚೀನ ಜ್ಞಾನಭಂಡಾರ ದೊಂದಿಗೆ ಸಂಬಂಧ ಜೋಡಿಸಿಕೊಳ್ಳುವುದೂ ಅತಿ ಮುಖ್ಯವಾಗಿತ್ತು.

ಆತ ಹೇಳಿದ್ದ " ಜಾನ್ , ನಾನು ತೀರ ತತ್ವಜ್ಞಾನಿಯ ಭಾಷೆಯಲ್ಲಿ ಮಾತಾಡಬಯಸುತ್ತಿಲ್ಲ. ಆದರೂ ಹೇಳುತ್ತೇನೆ . ಅದೊಂದು ಅಂತರಾತ್ಮದ ಕರೆಯಾಗಿತ್ತು. ನಾನು ಕಳೆದುಕೊಂಡಿದ್ದ ಅಂತ;ಶಕ್ತಿಯ ಕಿಡಿಯನ್ನು ಪುನ; ಉದ್ದೀಶಿಸುವಂತೆ ಮಾಡಲು ಅವಶ್ಯವಾಗಿದ್ದ ಆಧ್ಯಾತ್ಮಿಕಯಾತ್ರೆ ಕೈ ಕೊಳ್ಳಬೇಕೆಂಬ ಪ್ರೇರಣೆಯಾಗಿತ್ತು. ಆ ಯಾತ್ರೆ ನನ್ನ ಪಾಲಿಗೆ ಒಂದು ಅಧ್ಬುತ ಬಿಡುಗಡೆಯ ಅನುಭವವಾಗಿತ್ತು."

ಯಾತ್ರೆ ಸಾಗಿದಂತೆ ಆತ ಅನೇಕ ಸಾಧು-ಸಂತರನ್ನೂ , ಯೋಗಿಗಳನ್ನೂ , ಸನ್ಯಾಸಿಗಳನ್ನೂ ನೋಡಿದ. ಅವರಲ್ಲಿ ಕೆಲವರು ನೂರು ವರ್ಷ ದಾಟಿದ್ದರೂ, ಯೌವನದ ಕಾಂತಿ, ಚೈತನ್ಯಗಳನ್ನು ಉಳಿಸಿಕೊಂಡಿದ್ದರು . ಅವರೆಲ್ಲ ಯೋಗಸಾಧನೆಯಿಂದ ಮನೋನಿಗ್ರಹವನ್ನೂ , ಅಧ್ಯಾತ್ಮಿಕ ಜಾಗೃತಿಯನ್ನೂ ಸಾಧಿಸಿಕೊಂಡಿದ್ದರು . ನೋಡಿದಷ್ಟೂ ಅವರಲ್ಲಿ ಅವನ ಆಸಕ್ತಿ ಬೆಳೆಯಿತು. ಮನುಷ್ಯ ಸ್ವಭಾವದ ಈ ಅದ್ಭುತ ಪವಾಡಗಳ ಹಿಂದಿನ ರಹಸ್ಯಗಳನ್ನು ತಿಳಿದುಕೊಳ್ಳಬೇಕು . ತನ್ನ ಜೀವನದರ್ಶನಕ್ಕೆ ಅವುಗಳನ್ನು ಅಳವಡಿಸಿಕೊಳ್ಳಬೇಕು ಎಂಬ ಬಯಕೆ ತೀವ್ರವಾಯಿತು.

ಯಾತ್ರೆಯ ಮೊದಲ ಹಂತದಲ್ಲಿ ಜೂಲಿಯನ್ ಪ್ರಸಿದ್ಧರೂ , ಗೌರವಾನ್ವಿತರೂ ಆಗಿದ್ದ ಸಾಧು ಸಂತರ ಭೇಟಿಯಾಗಿದ್ದ . ಅವರೆಲ್ಲರೂ ತೆರೆದ ಹೃದಯದಿಂದ ಅವನನ್ನು ಸ್ವಾಗತಿಸಿದ್ದರು. ತಾವು ಜೀವನವಿಡೀ ತಪಸ್ಸು ಮಾಡಿ ಪಡೆದುಕೊಂಡ ಜ್ಞಾನ ರತ್ನಗಳನ್ನು ಹಂಚಿಕೊಂಡಿದ್ದರು. ಇದರೊಂದಿಗೆ, ಆತ ಭಾರತದ ಉದ್ದಗಲಕ್ಕೂ ಹರಡಿ ಇದ್ದ ನೂರಾರು ಸುಂದರ ದೇವಾಲಯಗಳನ್ನು ಸಂದರ್ಶಿಸಿದ್ದ ಅವುಗಳ ಪವಿತ್ರ ಸಾನ್ನಿಧ್ಯ , ಪ್ರಶಾಂತ ವಾತಾವರಣ ಅವನ ಮನಸ್ಸನ್ನು ಸೂರೆಗೊಂಡಿತ್ತು . ಯುಗಯುಗಗಳ ಆಧ್ಯಾತ್ಮಿಕ ಜ್ಞಾನಕ್ಕೆ ಮಹಾದ್ವಾರಗಳಿದ್ದಂತೆ ಇವು ಕಾಣಿಸಿದ್ದವು.

"ಇದೊಂದು ವಿಚಿತ್ರ ಜಾನ್ . ನಾನೊಬ್ಬ ದುಡಿದು ಸುಸ್ತಾಗಿದ್ದ ಹಿರಿಯ ಲಾಯರ್, ರೇಸ್ ಕುದುರೆಯಿಂದ ಹಿಡಿದು ರೋಲೆಕ್ಸ್ ವಾಚಿನವರೆಗೆ ಎಲ್ಲ ಸೊತ್ತುಗಳನ್ನೂ ಮಾರಾಟಮಾಡಿ , ಉಳಿದದ್ದನ್ನು ಗಂಟುಕಟ್ಟಿಕೊಂಡು ಪೂರ್ವದ ಈ ಸುದೀರ್ಘ ಪರಂಪರೆಯ ಯಾತ್ರೆಗೆ ಹೊರಟಿದ್ದೆ "

"ಬಿಟ್ಟು ಹೋಗುವಾಗ ತುಂಬಾ ಸಂಕಟವಾಯಿತೆ?" ನಾನು ಕೇಳಿದೆ.

"ಇಲ್ಲ . ನಿಜ ಹೇಳಬೇಕೆಂದರೆ ಅದು ಅತ್ಯಂತ ಸುಲಭದ ಕೆಲಸವಾಗಿತ್ತು. ಆ ಹೊತ್ತಿಗೆ ವೃತ್ತಿಯನ್ನೂ , ಸಂಪತ್ತನ್ನು ತ್ಯಜಿಸುವುದು ನನಗೆ ಸ್ವಾಭಾವಿಕ ವೆನಿಸಿಬಿಟ್ಟಿತ್ತು. ಆಲ್ಬರ್ಟ್ ಕಾಮು ಹೇಳುತ್ತಾನಲ್ಲ ;“Real generosity towards future lies in giving all to the present” ನನ್ನಲ್ಲಿ ಆಗ ಇದ್ದ ಭಾವನೆ ಅದೇ . ನಾನು ಬದಲಾಗಬೇಕೆಂದು ನಿರ್ಧರಿಸಿದ್ದೆ . ಅದಕ್ಕಾಗಿ ನನ್ನ ಹೃದಯದ ಮಾತನ್ನು ಕೇಳಿದೆ. ಅದನ್ನು ನಾಟಕೀಯವಾಗಿ ಮಾಡಲು ನಿರ್ಧರಿಸಿದೆ." ಗತಕಾಲದ ಆ ದೊಡ್ಡ ಹೊರೆಯ ಭಾರವನ್ನಿಳಿಸಿದಾಕ್ಷಣ ಬದುಕು ಸರಳವಾಯಿತು. ಹಗುರವಾಯಿತು. ಬದುಕಿನ ಬಾರೀ ಸುಖಭೋಗಗಳನ್ನು ಬೆನ್ನಟ್ಟುವುದನ್ನು ಕೈಬಿಟ್ಟ ಬಳಿಕ ಚಿಕ್ಕ ಪುಟ್ಟ ಸಹಜ ಸುಂದರ ವಸ್ತುಗಳನ್ನು ಆನಂದಿಸತೊಡಗಿದೆ. ಬೆಳದಿಂಗಳ ರಾತ್ರಿಗಳು, ಆಗಸದಲ್ಲಿ ಮಿನುಗುವ ತಾರೆಗಳು , ಮುಂಜಾನೆಯ ಹೊಂಬಿಸಿಲು ಮುಂತಾದವು ನನಗೆ ಖುಷಿನೀಡತೊಡಗಿದವು . ಭಾರತದ ವಾತಾವರಣ ಅದೆಷ್ಟು ಬೌದ್ಧಿಕವಾಗಿ ಸೂರ್ತಿದಾಯಕವಾಗಿದೆಯೆಂದರೆ , ನಾನು ಬಿಟ್ಟು ಹೋದುದರ ಬಗ್ಗೆ ಒಂದು ಕ್ಷಣವೂ ಯೋಚಿಸಲಿಲ್ಲ ".

ವಿದ್ವಾಂಸರೂ , ಜ್ಞಾನಿಗಳೂ ಆಗಿದ್ದ ಸಾಧು ಸಂತರ ಮೊದಲ ಭೇಟಿಗಳಿಂದ ಮನಸ್ಸಿನ ಮೇಲೆ ನಿಗೂಢ ಪ್ರಭಾವ ಉಂಟಾದರೂ , ನಾನು ಯಾವುದರ ಹುಡುಕಾಟ ನಡೆಸುತ್ತಿದ್ದೇನೋ ಅದು ದೊರೆತಿರಲಿಲ್ಲ. ಜೀವನದ ಸ್ವರೂಪವನ್ನು ಅಮೂಲಾಗ್ರ ಪರಿವರ್ತನೆಗೆ ಈಡುಮಾಡುವ ತಾತ್ವಿಕತೆಯನ್ನಾಗಲೀ , ಅದರ ಅನುಷ್ಠಾನ ವಿಧಾನಗಳಾಗಲೀ ಆರಂಭದ ದಿನಗಳಲ್ಲಿ ನನ್ನ ಕೈವಶವಾಗಲಿಲ್ಲ . ಸುಮಾರು ಏಳು ತಿಂಗಳ ನಂತರ ನಿಜವಾದ ಪ್ರಥಮ ಸೋಪಾನ ಗೋಚರಿಸಿತು.

ಅದು ಸಂಭವಿಸಿದ್ದು ಹಿಮಾಲಯದ ತಪ್ಪಲಲ್ಲಿ ತಣ್ಣಗೆ ಮಲಗಿದ್ದ ಕಾಶ್ಮೀರದಲ್ಲಿ ; ಯೋಗಿ ಕೃಷ್ಣನ್ ಎಂಬ ಸಾಧುವಿನ ಭೇಟಿಯಲ್ಲಿ, ತೆಳ್ಳಗಿನ ಶರೀರದ, ಬೋಳುತಲೆಯ ಆ ಸಾಧು "ಹಿಂದಿನ ಅವತಾರದಲ್ಲಿ ನಾನೂ ಸಹ ಒಬ್ಬ ಲಾಯರಾಗಿದ್ದೆ " ಎಂದು ನಗುತ್ತ ಹೇಳಿದ್ದ. ದಿಲ್ಲಿಯ ಒತ್ತಡ ಭರಿತ ಜೀವನದಿಂದ ಬೇಸರಗೊಂಡು ಅವನೂ ಎಲ್ಲ ಸಂಪತ್ತನ್ನೂ ತ್ಯಜಿಸಿ , ಸರಳ ಸಾಧು ಜೀವನದ ಕಡೆ ಹೊರಳಿದ್ದನಂತೆ. ಸಮೀಪದ ಹಳ್ಳಿಯೊಂದರ ಗುಡಿಯಲ್ಲಿ ಅರ್ಚಕನಾಗಿ ಸಾಧನೆ ಮಾಡುತ್ತಾ ವಿಶ್ವಾತ್ಮಕ ಹಿನ್ನೆಲೆಯಲ್ಲಿ ಆತ್ಮಜ್ಞಾನವನ್ನು ಪಡೆದುಕೊಂಡಿದ್ದ.

"ಬಾಂಬರ್ ವಿಮಾನದ ದೀರ್ಘ ಅಭ್ಯಾಸದಂತೆ ಉದ್ವೆಗಭರಿತವಾಗಿದ್ದ ನನ್ನ ಬದುಕು ನನಗೆ ಬೇಸರ ಬರಿಸಿತ್ತು. ಅನ್ಯರ ಸೇವೆಮಾಡುತ್ತಾ , ಈ ಪ್ರಪಂಚವನ್ನು ಸ್ವಲ್ಪವಾದರೂ ಸುಧಾರಿಸುವುದೇ ನನ್ನ ಜೀವನದ ಉದ್ದೆಶವಾಗಬೇಕೆಂದು ನಾನು ಮನಗಂಡಿದ್ದೆ. ನಾನೀಗ ಅನ್ಯರಿಗೆ ನೀಡುವುದಕ್ಕಾಗಿಯೇ ಬದುಕಿದ್ದೇನೆ . ನಾನು ಈ ಗುಡಿಯಲ್ಲಿಯೇ ಹಗಲು ರಾತ್ರಿ ಕಳೆಯುತ್ತೇನೆ. ವಿರಕ್ತ ಜೀವನ ನಡೆಸುತ್ತಿದ್ದೇನೆ. ಇಲ್ಲಿಗೆ ಬರುವ ಜಿಜ್ಞಾಸು ಗಳೊಡನೆ ನಾನು ಪಡೆದಿರುವ ಜ್ಞಾನವನ್ನು ಹಂಚಿಕೊಳ್ಳುತ್ತೇನೆ. ದೀನರಿಗೆ ನನ್ನಿಂದಾದ ಸಹಾಯ ಮಾಡುತ್ತೇನೆ. ನಾನಿಲ್ಲಿ ಕೇವಲ ಪೂಜಾರಿಯಲ್ಲ. ನಾನು ನನ್ನ ಸ್ವರೂಪವನ್ನು ಪಡೆದುಕೊಂಡವನಷ್ಟೇ ". ಎಂದು ಕೃಷ್ಣನ್ ಹೇಳಿದ್ದ.

ನಾನು ನನ್ನ ಕತೆಯನ್ನು ಅವನಿಗೆ ಹೇಳಿದೆ. ಸಂಪತ್ತಿನ ದಾಹ, ದುಡಿಮೆಯ ಗೀಳು , ಭೋಗ ವೈಭವಗಳ ಅದಮ್ಯ ಆಕಾಂಕ್ಷೆ -ಇವು ನನ್ನಲ್ಲಿ ಭುಗಿಲೆಬ್ಬಿಸಿದ್ದ ತಳಮಳ. ಅಂತರಂಗದ ಆಘಾತಗಳು ನನ್ನ ಜೀವನದ ಸಮತೋಲನವನ್ನೇ ಕೆಡಿಸಿ, ಜೀವಚೈತನ್ಯವನ್ನೇ ಕುಂದಿಸುತ್ತಿದ್ದ ದಾರುಣ ಸ್ಥಿತಿಯ ಬಗ್ಗೆ ಭಾವುಕವಾಗಿ ತೋಡಿಕೊಂಡೆ. ಅದಕ್ಕೆ ಕೃಷ್ಣನ್ ಹೀಗೆಂದಿದ್ದ. "ಗೆಳೆಯಾ, ನಾನು ಒಮ್ಮೆ ಇದೆ ದಾರಿಯಲ್ಲಿ ನಡೆದಿದ್ದೆ. ನೀನು ಅನುಭವಿಸಿದ ನೋವುಗಳನ್ನೂ , ನಾನು ಅನುಭವಿಸಿದ್ದೇನೆ . ಆದರೂ ಪ್ರತಿಯೊಂದು ಘಟನೆಗೂ ಒಂದು ಕಾರಣವಿರುತ್ತದೆ. ಪ್ರತಿ ಘಟನೆಯ ಹಿಂದೆಯೂ ಒಂದು ಉದ್ದೇಶವಿರುತ್ತದೆ. ಪ್ರತಿ ಸೋಲಿನಲ್ಲೂ ಒಂದು ಪಾಠ ವಿರುತ್ತದೆ. ಸೋಲು ವೈಯಕ್ತಿಕವಾಗಿರಲಿ , ವ್ರುತ್ತಿಯದಾಗಿರಲಿ, ಆಧ್ಯಾತ್ಮಿಕವಾಗಿರಲಿ , ವ್ಯಕ್ತಿತ್ವದ ವಿಕಾಸಕ್ಕೆ ಅವಶ್ಯ ಎಂಬುದು ನನ್ನ ಭಾವನೆ, ಆದರಿಂದ ನಾವು ಆಂತರಿಕವಾಗಿ ಬೆಳೆಯುತ್ತೇವೆ. ಆದರಿಂದ ಅನೇಕ ಮಾನಸಿಕ ಲಾಭಗಳಿವೆ. ಗತಕಾಲದ ಬಗ್ಗೆ ಪಶ್ಕಾತ್ತಾಪ ಬೇಡ. ಅದನ್ನು ಗುರುವೆಂದು ಸ್ವೀಕರಿಸು.

ಇದನ್ನು ಕೇಳಿದ ಮೇಲೆ ನನಗೆ ತುಂಬಾ ಸಮಾಧಾನವಾಯಿತು. ಯೋಗಿ ಕೃಷ್ಣನ್ ನಲ್ಲಿ ಬಹುಶ; ನಾನು ಹುಡುಕುತ್ತಿದ್ದ ಗುರು ದೊರಕಿದ್ದ. ತನ್ನಂತೆ ಹಿಂದೆ ಲಾಯರ್ ಆಗಿದ್ದು, ಆಧ್ಯಾತ್ಮಿಕ ಸಾಧನೆಯಿಂದ ಉತ್ತಮ ಜೀವನ ವಿಧಾನವನ್ನು ಪಡೆದುಕೊಂಡಿರುವ ವ್ಯಕ್ತಿಗಿಂತ ಒಳ್ಳೆಯ ಗುರು ಬೇರೆ ಯಾರು ? ಸಮತೋಲದ , ಆನಂದದ ಆಹ್ಲಾದದ ಜೀವನಶೈಲಿಯ ರಹಸ್ಯಗಳನ್ನು ಇವನೇ ಕಲಿಸಬಲ್ಲ ಎಂದೆನಿಸಿತು .

ಆತ ಹೇಳಿದ. "ನಿನಗೆ ಬೇಕಾಗಿರುವ ಸಹಾಯ ಮಾಡಲು ನನಗೆ ಹೆಮ್ಮೆಯೆನಿಸುತ್ತದೆ . ಆದರೆ ಒಂದು ಸಲಹ "

"ಹೇಳು "

"ನಾನು ಬಂದಾಗಿನಿಂದಲೂ ಹಿಮಾಲಯದ ಉನ್ನತ ಪರ್ವತ ಗಳಲ್ಲಿರುವ ನಿಗೂಢ ಸಾಧುವರ್ಗದ ಬಗ್ಗೆ ಪಿಸುಮಾತುಗಳನ್ನು ಕೇಳುತ್ತಿದ್ದೇನೆ. ಈ ಸಾಧುಗಳು ಬದುಕಿನಲ್ಲಿ ಮಹಾನ್ ಪರಿವರ್ತನೆಯನ್ನು ಮಾಡುವ ಯಾವುದೋ ಒಂದು ವಿಧಾನವನ್ನು ಕಂಡು ಹಿಡಿದಿರುವರಂತೆ . ಪರಿವರ್ತನೆಯೆಂದರೆ ಕೇವಲ ಶಾರೀರಿಕವಾದುದಕ್ಕೆ ಸೀಮಿತವಲ್ಲ. ಶರೀರ, ಮನಸ್ಸು, ಆತ್ಮ ಈ ಮೂರನ್ನು ವಿಕತ್ರಗೊಳಿಸುವ ಸಾರ್ವಕಾಲಿಕ ಅನ್ವಯದ ಸಮಗ್ರ ಸೂತ್ರ ಹಾಗೂ ಸಾರ್ವಕಾಲಿಕ ತಂತ್ರಗಳ ಸಮುಚ್ಚಯ "

ನನ್ನಲ್ಲಿ ಕುತೂಹಲ ಮೂಡಿತು. ಅದೊಂದು ಪರಿಪೂರ್ಣ ವಿಧಾನವೆನಿಸಿತು.

"ಆ ಸಾಧುಗಳು ಇರುವ ಸ್ಥಳ ಯಾವುದು "?

"ಯಾರಿಗೂ ಸರಿಯಾಗಿ ತಿಳಿದಿಲ್ಲ. ನನಗೂ ಈಗ ವಯಸ್ಸಾಗಿರುವುದರಿಂದ ಹುಡುಕುತ್ತಾ ಹೋಗಲು ಸಾಧ್ಯವಿಲ್ಲ . ಆದರೂ ಒಂದು ಮಾತು ಹೇಳುತ್ತೇನೆ. ಅನೇಕರು ಅವರನ್ನು ಹುಡುಕಲು ಯತ್ನಿಸಿ ದುರಂತಕ್ಕೆ ಈಡಾಗಿದ್ದಾರೆ. ಹಿಮಾಲಯದ ಅತ್ತ್ಯುನ್ನತ ಸ್ತರಗಳು ತುಂಬಾ ಅಪಾಯಕಾರಿ. ಸಾಕಷ್ಟು ಅನುಭವವಿರುವ ಪರ್ವತರೋಹಿಗಳೂ ಅದರ ಅನಿರೀಕ್ಷಿತ ಅಪಾಯಗಳನ್ನು ಎದುರಿಸಲಾರರು. ನೀನು ಹುಡುಕುತ್ತಿರುವ
ಆರೋಗ್ಯ , ಆನಂದ ಹಾಗೂ ಸಾರ್ಥಕತೆಗಳನ್ನು ನೀಡುವ ಚೈತನ್ಯ ನನ್ನಲ್ಲಿಲ್ಲ . ಆದರೆ ಆ ಸಾಧುಗಳಲ್ಲಿದೆ."

ನಾನು ಸುಲಭವಾಗಿ ನನ್ನ ಛಲ ಬಿಡುವವನಲ್ಲ . ಯೋಗಿ ಕೃಷ್ಣನನ್ನು ನಾನು ಒತ್ತಾಯಿಸಿದೆ. "ನಿಜವಾಗಿಯೂ ನಿಮಗೆ ಆ ಸಾಧುಗಳಿರುವ ಜಾಗ ತಿಳಿದಿಲ್ಲವೇ ?"ಎಂದು ಕೇಳಿದೆ.

"ನನಗೆ ಗೊತ್ತಿರುವುದು ಇಷ್ಟೇ. ಅಲ್ಲಿನ ಜನ ಅವರನ್ನು ಶಿವನ ಸಾಧುಗಳೆಂದು ಕರೆಯುತ್ತಾರೆ. ಅವರ ಪುರಾಣಗಳ ಪ್ರಕಾರ "ಶಿವನ" ಎಂದರೆ "ಸಾಕ್ಷಾತ್ಕಾರದ ಓಯಸಿಸ್ "ಎಂದರ್ಥ. ಆ ಸಾಧುಗಳನ್ನು ದೈವಾಂಶ ಸಂಭೂತರೆಂದೆ ಭಾವಿಸುತ್ತಾರೆ. ಅವರು ಎಲ್ಲಿರುವರೆಂದು ನನಗೆ ತಿಳಿದಿದ್ದರೆ ಅದನ್ನು ನಿಮಗೆ ತಿಳಿಸುವುದು ನನ್ನ ಕರ್ತವ್ಯ . ಆದರೆ ಪ್ರಾಮಾಣಿಕವಾಗಿ ಹೇಳುತ್ತೇನೆ. ನನಗೆ ಅದು ತಿಳಿದಿಲ್ಲ. ಬಹುಶ; ಯಾರಿಗೂ ತಿಳಿದಿಲ್ಲ ".

ಮುಂದಿನ ಮುಂಜಾನೆ ಪೂರ್ವದಿಗಂತದಲ್ಲಿ ಸೂರ್ಯ ವರ್ತಿಸುತ್ತಿದ್ದಂತೆ ನಾನು ಯಾರೂ ತಿಳಿಯದ "ಶಿವಸ್ಥಾನಕ್ಕೆ ನಡೆಯಲಾರಂಭಿಸಿದೆ . ಮೊದಲು ಸಹಾಯಕ್ಕೆ ಒಬ್ಬ ಶೆರ್ಪಾನನ್ನು ಜತೆಗೆ ಕರೆದುಕೊಂಡು ಹೋಗಬಯಸಿದ್ದೆ. ಆದರೆ ಅನಂತರ ಅದೇಕೋ ಬೇಡವೆನಿಸಿತು. ಈ ಮಹಾಯಾತ್ರೆಯನ್ನು ನಾನೊಬ್ಬನೇ ಏಕಾಕಿಯಾಗಿ ಕೈಕೊಳ್ಳಬೇಕೆನಿಸಿತು. ಬದುಕಿನಲ್ಲಿ ಮೊದಲ ಬಾರಿ ನಾನು ತರ್ಕಬುದ್ಧಿಯ ಬಂಧನವನ್ನು ತ್ಯಜಿಸಿ ಅಂತರಾತ್ಮದ ವಾಣಿಯಲ್ಲಿ ಶ್ರದ್ಧೆಯಿರಿಸಿದೆ. ನನಗೇನೋ ತೊಂದರೆಯಾಗದೆನ್ದೆನಿಸಿತು. ನಾನು ಹುಡುಕುತ್ತಿದ್ದುದು ನನಗೆ ಖಂಡಿತ ದೊರೆಯುವುದೆಂಬ ಭಾವನೆ ಹೇಗೋ ನನ್ನೊಳಗೆ ಮೂಡಿತ್ತು. ನಾನು ಚಲಬಿಡದೆ ಮೇಲೆರತೊಡಗಿದೆ.

ಆರಂಭದ ಕೆಲವು ದಿನಗಳಲ್ಲಿ ಎಲ್ಲ ಸುಲಭವಾಗಿತ್ತು. ಒಮ್ಮೊಮ್ಮೆ ಬೆಟ್ಟದ ತಪ್ಪಲಿನ ಹಳ್ಳಿಯಿಂದ ಕಾಲು ದಾರಿಯಲ್ಲಿ ನಡೆದು ಹೋಗುತ್ತಿದ್ದ ವಿರಳ ಪಥಿಕರೊಂದಿಗೆ ಸೇರಿನಡೆಯುವುದು . ಅಂಥವರಲ್ಲಿ ಕೆಲವರು ಯಾವುದೋ ಮರದ ತುಂಡನ್ನು ಹುಡುಕಿ ಒಯ್ಯುವವರು . ಇನ್ನು ಕೆಲವರು ಈ ಉನ್ನತ ಅಲೌಕಿಕ ತಾಣದಲ್ಲಿ ಶಾಂತಿಯ ಆಸರೆಯ ಅನ್ವೇಷಣೆ ಯಲ್ಲಿರುವವರು. ಕೆಲವೊಮ್ಮೆ ನಾನು ಬದುಕಿನಲ್ಲಿ ನಡೆದು ಬಂದ ದಾರಿಯನ್ನೂ , ಈಗ ನಡೆಯುತ್ತಿರುವ ದಾರಿಯನ್ನು ಕುರಿತು ಯೋಚಿಸುತ್ತಾ , ವಿಮರ್ಶಿಸುತ್ತಾ ಏಕಾಕಿಯಾಗಿ ನಡೆಯುತ್ತಿದ್ದೆ.

ಕೆಲವೇ ದಿನಗಳಲ್ಲಿ ನಾನು ಏರಿದ ಎತ್ತರದಿಂದ ನೋಡಿದಾಗ ಕೆಳಗಿದ್ದ ಹಳ್ಳಿಗಳ ನಿಸರ್ಗದ ಬೃಹತ್ ಕ್ಯಾನ್ವಾಸ್ನಲ್ಲಿ ಬಿಡಿಸಿದ ಸುಂದರ ಚಿಕ್ಕಿಗಳಂತೆ ಕಾಣಿಸಿದವು. ಹಿಮಾಚ್ಛಾದಿತ ಹಿಮಾಲಯ ಶಿಖರಗಳ ಸಾಲುಗಳ ಅಧ್ಬುತ ರಮ್ಯ ನೋಟ ಕೆಲಕಾಲ ಉಸಿರು ಕಟ್ಟಿಸಿದಂತಾಯಿತು . ಎದೆ ನಡುಗಿಸುವಂತಾಯಿತು . ಹಳೆಯ ಅಪ್ತಮಿತ್ರರು ತಮ್ಮ ಆತ್ಮೀಯ ಭಾವನೆಗಳನ್ನು ಹಂಚಿಕೊಳ್ಳುತ್ತಾ , ನಗೆಹನಿಗಳನ್ನು ಕೇಳಿ, ಕೇಳಿಸಿ ಖುಷಿಪಡುತ್ತಾ ದಿನಗಳೆದಂತೆ , ಆ ದಿವ್ಯವಾತಾವರಣದಲ್ಲಿ ನಾನು ಒಂದಾಗಿ ಹೋದೆ. ಉನ್ನತ ಪರ್ವತಗಳಲ್ಲಿ ಬೀಸುತ್ತಿದ್ದ ಗಾಳಿ ನನ್ನ ಮನಸ್ಸನ್ನು ಶುದ್ಧಗೊಳಿಸಿತು . ಚೈತನ್ಯಕ್ಕೆ ಶಕ್ತಿ ನೀಡಿತು. ಅನೇಕ ಬಾರಿ ಪ್ರಪಂಚ ಪರ್ಯಟನೆ ಮಾಡಿದ್ದ ನನಗೆ ಎಲ್ಲವನ್ನೂ ನೋಡಿಯಾಗಿದೆ ಎಂಬ ಭಾವನೆಯಿದ್ದಿತು. ಆದರೆ ಈಗ ಕಾಣುತ್ತಿರುವ ಅದ್ಭುತ ಸೌಂದರ್ಯ ವನ್ನು ಹಿಂದೆಂದೂ ನೋಡಿರಲಿಲ್ಲ. ಈ ಮಾಂತ್ರಿಕ ಕ್ಷಣಗಳಲ್ಲಿ ನನಗಾದ ಭವ್ಯದರ್ಶನ ಪ್ರಕೃತಿಯ ಅಲೌಕಿಕ ಸಂಗೀತಕ್ಕೆ ಅಮೂಲ್ಯ ಕಾಣಿಕೆಯಂತೆ ಇತ್ತು. ನಾನು ಆನಂದ, ಉತ್ಸಾಹಗಳಿಂದ ಹಾಯಾಗಿ ಮುಂದುವರಿದೆ. ಸಾಮಾನ್ಯ ಜನಜೀವನದಿಂದ ಎತ್ತರದಲ್ಲಿದ್ದ ಈ ಸ್ಥಳದಲ್ಲಿ ಸಾಮಾನ್ಯತೆಯ ಕೋಶವನ್ನು ಒಡೆದು ಅಸಾಮಾನ್ಯತೆಯ ಅನ್ವೇಷಣೆಯ ಕಡೆ ಜಿಗಿಯತೊಡಗಿದೆ.

ಈಗ ನನ್ನ ಮನಸ್ಸಿನಲ್ಲಿ ತುಡಿಯುತ್ತಿದ್ದ ವಿಚಾರವನ್ನು ಈಗಲೂ ಮರೆತಿಲ್ಲ. ಬದುಕೆಂದರೆ ಅಂತಿಮವಾಗಿ ಆಯ್ಕೆಗಳಿಗೆ ಸಂಭಂಧಿಸಿದ್ದು . ಅದೃಷ್ಟವು ನಾವು ಮಾಡುವ ಆಯ್ಕೆಗಳನ್ನು ಹೊಂದಿಕೊಂಡಿದೆ. ನಾನೀಗ ಸರಿಯಾದ ಆಯ್ಕೆಯನ್ನೇ ಮಾಡಿದ್ದೇನೆ ಎಂಬ ಭಾವನೆಯುಂಟಾಯಿತು. ನಾನಿನ್ನು ಹಿಂದಿನಂತಿರಲು ಸಾಧ್ಯವಿಲ್ಲ. ಅಧ್ಭುತವಾದ ಪವಾಡ ಸದ್ರುಶವಾದುದೇನೋ ನನ್ನ ಜೀವನದಲ್ಲಿ ಸಂಭವಿಸಲಿದೆ ಎಂಬ ಅಚ್ಚರಿಯ ಅರಿವು ಉಂಟಾಯಿತು.

ಇನ್ನೂ ಎತ್ತರದ ವಿರಳ ವಾತಾವರಣದಲ್ಲಿ ಸಾಗುತ್ತಿದ್ದಾಗ ಒಂದು ಬಗೆಯ ಆತಂಕದ ಭಾವನೆಯೂ ಮೂಡುತ್ತಿತ್ತು. ಆದರೆ ಅದು ಕೂಡ ಹಿಂದೆ ನಾನು ಕೋರ್ಟು ಕೇಸುಗಳನ್ನು ವಾದಿಸುತ್ತಿದ್ದಾಗ, ಮಾಧ್ಯಮಗಳು ನನ್ನನ್ನು ಬೆನ್ನಟ್ಟಿದಾಗ ಅನುಭವಿಸುಸುತ್ತಿದ್ದ ಆತಂಕದಂತೆಯೇ ಇತ್ತು. ನನ್ನ ಕೈಯಲ್ಲಿ ಯಾವುದೇ ನಕ್ಷೆಯಿರಲಿಲ್ಲ. ಆದರೂ ಒಂದು ತೆಳ್ಳಗಿನ ಕಾಲುದಾರಿ ಆ ಭಯಾನಕ ಪರ್ವತಗಳ ಮೈಯಲ್ಲೂ ಕಾಣುತ್ತಿತ್ತು. ನನ್ನೊಳಗೆ ಇದ್ದ ಅದೃಶ್ಯ ದಿಕ್ಸೂಚಿಯಂತೆ ಅದು ನನ್ನನ್ನು ಮುಂದೆ ತಳ್ಳುವಂತಿತ್ತು . ಆ ಹೊತ್ತಿನಲ್ಲಿ ಬಹುಶ; ನಾನು ಮನಸ್ಸು ಮಾಡಿದ್ದರೂ ಮೇಲೇರುವುದನ್ನು ನಿಲ್ಲಿಸಲು ಸಾಧ್ಯವಾಗುತ್ತಿರಲಿಲ್ಲ.

ಹೀಗೆ ಶಿವನ ಸ್ಥಾನವನ್ನು ಸೇರಬೇಕೆಂದು ಮನದಲ್ಲೇ ಪ್ರಾರ್ಥಿಸುತ್ತಾ ಮುಂದುವರಿಯುತಿದ್ದಂತೆ ನನ್ನ ಮನಸ್ಸಿನಲ್ಲಿ ಆಗಾಗ ನನ್ನ ಜೀವನದ ಹಳೆಯ ನೆನಪುಗಳು ಮೂಡುತ್ತಿದ್ದವು . ಈಗ ನಾನೇನೋ ಮಾನಸಿಕ ಒತ್ತಡ, ಉದ್ವೇಗಗಳಿಂದ ಮುಕ್ತನಾಗಿರುವೆನಾದರೂ , ಹಿಂದೆ ಒಗ್ಗಿಕೊಂಡಿದ್ದ ವೃತ್ತಿಜೀವನದ ಬೌದ್ಧಿಕ ಸವಾಲುಗಳನ್ನೆದುರಿಸುವ ಅವಕಾಶವಿಲ್ಲದೆ ಕಳೆಯಲು ಮುಂದೆ ಸಾಧ್ಯವಾದೀತೆ ಎಂದೂ ಒಮ್ಮೊಮ್ಮೆ ಅನ್ನಿಸುತ್ತಿತ್ತು. ಆ ಗಗನಚುಂಬಿ ಸೌಧದಲ್ಲಿದ್ದ ನನ್ನ ಸುಂದರ ಆಫೀಸಿನ ನೆನಪಾಗುತ್ತಿತ್ತು. ಬೆಲೆಬಾಳುವ ಪೀತೊಪಕರಣ ಗಳಿಂದ ಅಲಂಕೃತವಾಗಿದ್ದ ಆ ಭವ್ಯ ಆಫೀಸನ್ನು ಪುಡಿಕಾಸಿಗೆ ಮಾರಾಟ ಮಾಡಿದ್ದೆ. ವಿಲಾಸಿ ಹೊಟೇಲುಗಳಲ್ಲಿ ಸೇರುತ್ತಾ ಸರಸ ಸಲ್ಲಾಪ ಗೈಯುತ್ತಿದ್ದ ಗೆಳೆಯ ಗೆಳತಿಯರೂ ನೆನಪಾಗುತ್ತಿದ್ದರು . ನನ್ನ ಮೆಚ್ಚಿನ ಫೆರಾರಿ ಕಾರಿನ ಎಂಜಿನ್ ಸ್ಟಾರ್ಟ್ ಮಾಡಿ ಅದರ ಘರ್ಜನೆ ಯೊಡನೆ ಜಿಗಿದಾಗ ಉಂಟಾಗುತ್ತಿದ್ದ ಹುಮ್ಮಸ್ಸೂ ಒಮ್ಮೊಮ್ಮೆ ಮನಸ್ಸಿನಲ್ಲಿ ಮರುಕಳಿಸುತ್ತಿತ್ತು.

ಅಷ್ಟರಲ್ಲಿ ನನ್ನ ಹಳೆಯ ನೆನಪುಗಳ ಮೆರವಣಿಗೆ ಹಠತ್ತನೆ ನಿಲ್ಲುವಂತ ಘಟನೆ ನಡೆಯಿತು. ಸ್ವಲ್ಪದೂರದಲ್ಲಿ ಒಂದು ವಿಚಿತ್ರ ಮಾನವಾಕೃತಿ ಗೋಚರಿಸಿತು . ಆತ ಕೆಂಪು ಬಣ್ಣದ ಉದ್ದನೆಯ ನಿಲುವಂಗಿ ಧರಿಸಿದ್ದ. ತಲೆಯ ಮೇಲೆ ನೀಲಿ ಟೊಪ್ಪಿಯೂ ಇತ್ತು. ಇಂಥ ನಿರ್ಜನ , ಭಯಾನಕ ಪ್ರದೇಶದಲ್ಲಿ ಇವನೆಲ್ಲಿಂದ ಬಂದ ಎಂದು ನನಗೆ ಆಶ್ಚರ್ಯವಾಯಿತು . ನನ್ನ ಗುರಿ ಎಲ್ಲೆದೆಯೆಂದು ನನಗೆ ತಿಳಿಯದಿದ್ದುದ್ದರಿಂದ ಈ ವ್ಯಕ್ತಿಯಿಂದಲಾದರೂ ಸಹಾಯವಾದೀತೇ ಎಂಬ ಭಾವನೆಯಿಂದ ನಾನು ಅವನಿಗೆ ಕೇಳಿಸುವಂತೆ ಕೂಗುಹಾಕಿದೆ.
ಆದರೆ ಆ ನಿಗೂಢವ್ಯಕ್ತಿ ನನ್ನ ಕಡೆ ಹಿಂದಿರುಗಿ ನೋಡಲೂ ಇಲ್ಲ. ನನ್ನ ಕರೆಗೆ ಸ್ಪಂದಿಸಲೂ ಇಲ್ಲ . ತನ್ನ ದಾರಿಯಲ್ಲಿ ಮತ್ತಷ್ಟು ಜೋರಾಗಿ ನಡೆಯತೊಡಗಿದ. ನಾನು ನೋಡುತ್ತಿದ್ದಂತೆಯೇ ಆತ ಓಡಲಾರಂಭಿಸಿದ, ಆತ ಧರಿಸಿದ್ದ ಸಡಿಲಾದ ಕೆಂಪು ನಿಲುವಂಗಿ ಬಾವುಟದಂತೆ ಹಿಂದುಗಡೆ ಹಾರಾಡುತ್ತಿತ್ತು.

"ಸ್ವಾಮೀ , ಶಿವನ ಸ್ಥಾನ ತಲುಪಲು ನನಗೆ ಸಹಾಯ ಮಾಡುತ್ತೀರಾ "

ನಾನು ಕಳೆದ ಏಳು ದಿನಗಳಿಂದ ಅನ್ನ ನೀರಿಲ್ಲದೆ ನಡೆಯುತ್ತಿದ್ದೇನೆ "ಎಂದು ನಾನು ಪುನ; ಕೂಗಿಕೊಂಡೆ .

ಆಶ್ಚರ್ಯ ! ಆ ವ್ಯಕ್ತಿ ತಕ್ಷಣ ನಿಂತ. ನಾನು ನಿಧಾನವಾಗಿ ಆತನ ಬಳಿ ಸಾಗಿದೆ. ಆತ ಮೌನವಾಗಿ ಸ್ಥಿರವಾಗಿ ನಿಂತಿದ್ದ . ಆತನ ತಲೆಯಾಗಲಿ , ಕೈಕಾಲುಗಳಾಗಲೀ ಸ್ವಲ್ಪವೂ ಚಲಿಸಲಿಲ್ಲ. ಟೋಪಿಯ ಮುಂಭಾಗ ಬಹುತೇಕ ಮುಚ್ಚಿದುದ್ದರಿಂದ ಅವನ ಮುಖವನ್ನು ಸರಿಯಾಗಿ ನೋಡಲಾಗಲಿಲ್ಲ. ಆದರೆ ಆತನ ಕೈಯಲ್ಲಿ ಒಂದು ಬುಟ್ಟಿಯಿತ್ತು. ಅದರಲ್ಲಿ ನಾನು ಹಿಂದೆಂದೂ ಕಂಡಿರದ ಅತ್ಯಂತ ಸುಂದರ ಹೂವುಗಳು ತುಂಬಿದ್ದವು. ನನ್ನನ್ನು ಕಂಡ ಕೂಡಲೇ ಆತ ಹೂಬುಟ್ಟಿ ಯನ್ನು ಅವುಚಿಕೊಂಡ . ಅದು ಅವನಿಗೆ ಅದರ ಬಗೆಗಿನ ಮಮತೆಯನ್ನೂ , ನನ್ನಂಥ ಅಪರಿಚಿತ ವಿದೇಶಿಯ ಬಗೆಗಿನ ಸಂದೆಹವನ್ನೂ ಸೂಸುತ್ತಿತ್ತು.

ನಾನೀಗ ಆತನ ಕಡೆ ಕುತೂಹಲದಿಂದ ನೋಡಿದೆ. ಅಂತ ಮನುಷ್ಯನನ್ನು ನಾನು ಈವರೆಗೆ ನೋಡಿರಲಿಲ್ಲ . ಆತನಿಗೆ ಸುಮಾರು ನನ್ನಷ್ಟೇ ವಯಸ್ಸಾಗಿದ್ದಿರಬಹುದು . ಆದರೆ ಅವನ ಮುಖವನ್ನು ನೋಡಿದಾಗ ನಾನೆಷ್ಟು ಮಂತ್ರಮುಗ್ಧನಾದೆನೆಂದರೆ ಆನಂತಕಾಲದವರೆಗೂ ನೋಡುತ್ತಲೇ ಇರೋಣ ಎಂಬ ಭಾವನೆ ಉಂಟಾಯಿತು. ಆತನ ಕಣ್ಣಿನಲ್ಲಿದ್ದ ವಿಲಕ್ಷಣ ತೇಜಸ್ಸು ಎಷ್ಟು ಪ್ರಖರವಾಗಿತ್ತೆಂದರೆ ನಾನು ನನ್ನ ಕಣ್ಣನ್ನು ಬೇರೆಡೆ ತಿರುಗಿಸಬೇಕಾಯಿತು. ಆತನ ಚರ್ಮ ನಯವಾಗಿತ್ತು. ಶರೀರ ಬಲಿಷ್ಟವಾಗಿತ್ತು. ಆತನ ಕೈಗಳನ್ನು ನೋಡುವಾಗ ಸಾಕಷ್ಟು ವಯಸ್ಸಾಗಿರುವಂತೆ ಕಂಡರೂ, ಆತನ ವ್ಯಕ್ತಿತ್ವ ಬೀರುತ್ತಿದ್ದ ತಾರುಣ್ಯದ ತೇಜಸ್ಸು , ವೀರ್ಯವನ್ತಿಕೆಯ ವರ್ಚಸ್ಸು ಎಷ್ಟು ಪ್ರಖರವಾಗಿತ್ತೆಂದರೆ ನಾನು ಇಂದ್ರಜಾಲಕನ ಚಮತ್ಕಾರಗಳನ್ನು ಮೊದಲಬಾರಿಗೆ ಕಂಡ ಬಾಲಕನಂತೆ ಮಂತ್ರ ಮುಗ್ಧನಾಗಿದ್ದೆ.

ಓಹೋ . ಇವನೇ ಶಿವನ ಸ್ಥಾನದ ಓರ್ವ ಮಹಾಯೋಗಿಯಾಗಿರಬೇಕು ಎಂದು ಸಂತೋಷ ತಡೆಯಲಾರದೆ ನನ್ನೊಳಗೆ ಹೇಳಿಕೊಂಡೆ.

"ನನ್ನ ಹೆಸರು ಜೂಲಿಯನ್ ಮ್ಯಾನ್-ಟಾಲ್ . ಶಿವನ ಸ್ಥಾನದ ಯೋಗಿಗಳನ್ನು ಕಾಣಲು ಬಂದಿದ್ದೇನೆ. ಅವರು ಎಲ್ಲಿ ಸಿಗುವರೆಂದು ತಿಳಿಸುವಿರಾ ?" ನಾನೆಂದೆ.

ಅಪರಿಚಿತ ವಿದೇಶಿಯನನ್ನು ಆತ ಯೋಚನಭರಿತ ದೃಷ್ಟಿಯಿಂದ ನೋಡಿದ. ಅವನ ಗಾಂಭೀರ್ಯ ಪೂರ್ಣ ನಿಲುವು, ಪ್ರಶಾಂತ ಮುಖಭಾವಗಳು ದೇವತೆಯ ಅಲೌಕಿಕತೆಯನ್ನು ಬಿಂಬಿಸುತ್ತಿದ್ದವು. ಆತ ಅತ್ಯಂತ ಮೃದುವಾದ ದನಿಯಲ್ಲಿ ಕೇಳಿದ;

"ಗೆಳೆಯ ನಿನಗೇಕೆ ಸಾಧುಗಳ ಸಂಗ ?"

ನಾನು ಈವರೆಗೂ ಹುಡುಕುತ್ತಿದ್ದ ವ್ಯಕ್ತಿ ಇವನೇ ಎಂದು ನನ್ನ ಹೃದಯ ಕೂಗಿ ಹೇಳಿತು. ನಾನು ಅವನಲ್ಲಿ ನನ್ನ ಬದುಕಿನ ಕಥೆಯನ್ನು ತೋಡಿಕೊಂಡೆ. ನನ್ನ ವೃತ್ತಿ ಜೀವನದ ಅಗಾಧ ಹೋರಾಟ , ಭೋಗ ವಿಳಾಸಗಳಿಗೆ ತೆತ್ತ ಬೆಲೆ, ಅನುಭವಿಸಿದ ಆಧ್ಯಾತ್ಮಿಕ ಆಘಾತ, ಕಳೆದುಕೊಂಡ ಆರೋಗ್ಯ , "ವೇಗದ ಬದುಕು, ವೇಗದ ಸಾವು " ಶೈಲಿಯ ಜೀವನದ ತೃಪ್ತಿಗಾಗಿ , ಹಣಕ್ಕಾಗಿ ಆತ್ಮವನ್ನೇ ಮಾರಿಕೊಂದದ್ದು, ಅನಂತರ ಎಲ್ಲವನ್ನೂ ತ್ಯಜಿಸಿ ಹಿಮಾಲಯಕ್ಕೆ ಬಂದದ್ದು . ತನ್ನಂತೆ ಹಿಂದೆ ಲಾಯರಾಗಿದ್ದು , ಅತ್ಮಶಾಂತಿಗಾಗಿ ಎಲ್ಲವನ್ನೂ ತ್ಯಾಗಮಾಡಿದ್ದ ಯೋಗಿ ಕೃಷ್ಣನ್ ನನ್ನು ಭೇಟಿಯಾದದ್ದು ಎಲ್ಲವನ್ನೂ ಹೇಳಿದೆ.

ಅತ ನಿಶ್ಚಲವಾಗಿ, ಮೌನವಾಗಿ ನಿಂತಿದ್ದ. ನಾನು ಆತ್ಮಸಾಕ್ಷಾತ್ಕಾರದ ದಿವ್ಯಜೀವನದ ಪುರಾತನ ಆರ್ಷೇಯ ತತ್ವಗಳನ್ನು ತಿಳಿಯಲೆಬೇಕೆಂಬ ಅದಮ್ಯ ಆಕಾಂಕ್ಷೆಯಿಂದ ಸಾಹಸಯಾತ್ರೆಯನ್ನು ಕೈಕೊಂಡಿರುವುದು ಅವನಿಗೆ ಮನದಟ್ಟಾದ ನಂತರವೇ ಆತ ಮಾತಾಡತೊಡಗಿದ. ನನ್ನ ಹೆಗಲಮೇಲೆ ತನ್ನ ಹೈಯನ್ನು ಇಟ್ಟು ಮೃದುವಾಗಿ ಹೇಳಿದ; "ದಿವ್ಯ ಜೀವನ ವಿವೇಕವನ್ನು ತಿಳಿಯಲು ನನ್ನಲ್ಲಿ ನಿಜವಾದ ಆಸಕ್ತಿಯಿದ್ದರೆ , ನಿನಗೆ ನೆರವಾಗುವುದು ನನ್ನ ಕರ್ತವ್ಯ . ನಿಜ- ನೀನು ವರೆಗೆ ಹುಡುಕುತ್ತಾ ಬಂದಿರುವ ಸಾಧುಗಳಲ್ಲಿ ನಾನೂ ಒಬ್ಬ. ಎಷ್ಟೋ ವರ್ಷಗಳ ನಂತರ ನನ್ನನ್ನು ಕಾಣಲು ಬಂದ ಪ್ರಥಮ ವ್ಯಕ್ತಿ ನೀನು . ಅಭಿನಂದನೆಗಳು . ನಿನ್ನ ಛಲ ನನಗೆ ಮೆಚ್ಚಿಗೆಯಾಯಿತು. ನಿನ್ನ ಜಿಗುಟುತನವನ್ನು ಕಂಡರೆ ನೀನು ನಿಜವಾಗಿಯೂ ಒಳ್ಳೆಯ ಲಾಯರಾಗಿದ್ದಿರಬೇಕು ಎಂದೆನಿಸುತ್ತದೆ."

ಒಂದು ಕ್ಷಣ ಮುಂದೇನು ಮಾಡಬೇಕು ಎಂದು ಯೋಚಿಸುವಂತೆ ಕಂಡ ಬಳಿಕ ಆತ ಹೇಳಿದ; "ನಿನಗೆ ಇಷ್ಟವಾದರೆ ನನ್ನ ಜತೆ ನಮ್ಮ ದೇವಸ್ಥಾನಕ್ಕೆ ಬರಬಹುದು. ಅದು ಇನ್ನೂ ನಾಲ್ಕಾರು ತಾಸು ನಡೆಯ ದೂರದಲ್ಲಿ ಬೆಟ್ಟಗಳ ನಡುವೆ ಅಡಗಿಕೊಂಡಿದೆ . ನೀನು ಬಂದರೆ ನನ್ನ ಸೋದರ- ಸೋದರಿಯರು ನಿನ್ನನ್ನು ತೆರೆದ ತೋಳುಗಳಿಂದ ಸ್ವಾಗತಿಸುವರು. ನಾವೆಲ್ಲಾ ಸೇರಿ ನಮ್ಮ ಹಿರಿಯರು ಪರಂಪರಾಗತವಾಗಿ ನಮಗೆ ಕಲಿಸಿದ ಪ್ರಾಚೀನ ತತ್ವಜ್ಞಾನ ಹಾಗೂ ಅನುಷ್ಠಾನ ತಂತ್ರಗಳನ್ನು ನಿನಗೆ ಕಲಿಸುತ್ತೇವೆ.."

"ಆದರೆ ನಮ್ಮ ರಹಸ್ಯ ಜಗತ್ತಿಗೆ ಒಯ್ದು , ಬದುಕಿನ ಆನಂದ ಉತ್ಸಾಹಗಳನ್ನು ವರ್ಧಿಸುವ ಸನಾತನ ತತ್ವಗಳನ್ನು ನಿನ್ನೊಡನೆ ಹಂಚಿಕೊಳ್ಳುವ ಮೊದಲು ನೀನೊಂದು ವಚನ ಕೊಡಬೇಕು. ಸನಾತನ ಸತ್ಯಗಳನ್ನು ಕಲಿತುಕೊಂಡ ಬಳಿಕ ನಿನ್ನ ದೇಶಕ್ಕೆ ಮರಳಿ, ಇದರ ಅವಶ್ಯಕತೆಯಿರುವವರಿಗೆಲ್ಲ ಹಂಚಬೇಕು. ನಾವು ಇಲ್ಲಿನ ಪ್ರಶಾಂತ ಜಗತ್ತಿನಲ್ಲಿದ್ದರೂ , ನೀವಿರುಅವ ಪ್ರಕ್ಷುಬ್ಧ ಜಗತ್ತಿನ ತವಕ-ತಲ್ಲಣಗಳೂ ನಮಗೆ ತಿಳಿದಿವೆ. ಅಲ್ಲಿ ಸಜ್ಜನರು ದಾರಿತಪ್ಪುತ್ತಿದ್ದಾರೆ. ನೀನು ಅವರಿಗೆ ಅವಶ್ಯವಾಗಿರುವ ಭರವಸೆಯನ್ನು ನೀಡಬೇಕು. ಅದಕ್ಕಿಂತಲೂ ಮುಖ್ಯವಾಗಿ ಅವರ ಕನಸುಗಳನ್ನು ನನಸಾಗಿಸಲು ಬೇಕಾದ ಸಾಧನಗಳನ್ನು ನೀಡಬೇಕು. ನಾನು ನಿನ್ನಿಂದ ಬಯಸುವುದು ಇಷ್ಟೇ."

ನಾನು ಶರತ್ತನ್ನು ತಕ್ಷಣ ಒಪ್ಪಿಕೊಂಡು ಅವರ ಅಮೂಲ್ಯ ಸಂದೇಶಗಳನ್ನು ಪಶ್ಚಿಮದಲ್ಲಿ ಹರಡುವುದಾಗಿ ವಚನ ನೀಡಿದೆ. ಸರಿ, ನಾವಿಬ್ಬರೂ ಶಿವನ ಸ್ಥಾನದ ಕಡೆ ಏರುತ್ತಿದ್ದಂತೆ, ಹಿಮಾಲಯದ ಸೂರ್ಯ ನಿಧಾನವಾಗಿ , ದಿನವಿಡೀ ಬೆಳಗಿ ಆಯಾಸ ಗೊಂಡವನಂತೆ ಕೆಂಪಾಗಿ ಆಸ್ತಾಲದ ಕಡೆ ಇಳಿಯತೊಡಗಿದ. ಕ್ಷಣ ನನ್ನ ಪಾಲಿಗೆ ನನ್ನ ಬದುಕಿನಲ್ಲೇ ಅವಿಸ್ಮರಣೀಯ ಕ್ಷಣವಾಗಿತ್ತು . ಓರ್ವ ಕಾಲಾತೀತ ಭಾರತೀಯ ಸಾಧುವಿನೊಂದಿಗೆ , ಅವನ ಸೋದರ ಪ್ರೇಮದ ನೆರಳಿನಲ್ಲಿ ನನ್ನ ಕನಸಿನ ಅಲೌಕಿಕ ಲೋಕದ ಕಡೆಗೆ ನಮ್ಮ ನಿಗೂಢಯಾತ್ರೆ ಸಾಗಿತು.

ಕೆಲವು ಮಹತ್ವಪೂರ್ಣ ಕ್ಷಣಗಳ ಪರಿಮಿತಿಗೆ ನನ್ನ ಬದುಕು ಸಂದಿತ್ತು. ಕ್ಷಣ ನನ್ನ ಮುಂದಿನ ಜೀವನದ ಪ್ರಥಮಕ್ಷಣ. ಅದು ಹಿಂದೆಂದಿಗಿಂತಲೂ ಸತ್ವಪೂರ್ಣವಾಗಲಿದೆ ಎಂಬ ಭಾವನೆ ಮನಸ್ಸಿನಲ್ಲಿ ಮಿಂಚಿತು.


ನೀವು ಹೆಚ್ಚಿನ ಫಲಿತಾಂಶ ಪಡೆಯಬೇಕಾದರೆ ನಮ್ಮಲ್ಲಿನ ಯಾವುದಾದರೂ ಅವಕಾಶಗಳನ್ನು ಉಪಯೋಗಿಸಿಕೊಂಡು ಬದುಕಿನಲ್ಲಿ ಪ್ರಯತ್ನಪಟ್ಟು ಮೇಲೆ ಬನ್ನಿ, ನೀವು ಬದುಕಿ , ಬೇರೆಯವರನ್ನು ಬದುಕಿನಲ್ಲಿ ಮೇಲೆತ್ತಿ. ಅವಾಗ ನಿಮ್ಮ ಜೀವನ ಸಾರ್ಥಕ.

/sunnaturalflash.magneticsponsoringonline.com/letter_1.php


ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ.
ಎ.ಟಿ.ನಾಗರಾಜ
http://www.sunnaturalflash.com/
---------------------------------------------------------------------------------------------
ನಿಮಗೆ ನನ್ನ ಜತೆ ನೇರವಾಗಿ ಮಾತನಾಡಬೇಕೆಂದು ಅನಿಸಿದರೆ, ನಿಮ್ಮ ಅನುಭವಗಳನ್ನು ,ಅನಿಸಿಕೆಗಳನ್ನು ನೇರವಾಗಿ ನನ್ನ ಜತೆಗೆ ಹಂಚಿ ಕೊಳ್ಳಬೇಕೆನಿಸಿದರೆ ನಿಮ್ಮ ಹೆಸರು, ನಿಮ್ಮ ಈ ಮೇಲ್ ವಿಳಾಸ, ನಿಮ್ಮ ಮೊಬೇಲ್ ದೂರವಾಣಿ ಸಂಖ್ಯೆ ಜತೆಗೆ ನೀವು ಕರೆಯನ್ನು ಸ್ವೀಕರಿಸುವ ಸಮಯ ಬರೆದು ಕೆಳಗಿನ ಈ ಮೇಲ್ ವಿಳಾಸಕ್ಕೆ ಕಳುಹಿಸಿ . ನಾನು ನಿಮ್ಮ ಕೋರಿಕೆಯ ಇಪ್ಪತ್ತು ನಾಲ್ಕು ಗಂಟೆಯ ಯಿಂದ ನಲವತ್ತೆಂಟು ಗಂಟೆಯ ಒಳಗೆ ನಿಮ್ಮೊಂದಿಗೆ ಸಂಭಾಷಣೆಯಲ್ಲಿ ಇರುತ್ತೇನೆ.sunnaturalflash@gmail.com

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ