ಈ ಪ್ರಪಂಚದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗ್ಗಿನ ವಂದನೆಗಳು .
"ಎಲ್ಲರೂ ದುಡಿಯಬೇಕು " ಇದು ಸನ್ ನ್ಯಾಚುರಲ್ ಫ್ಲಾಶ್ ನ ಸಿದ್ದಾಂತ .
ಭಾರ ಎತ್ತುವಿಕೆಯಲ್ಲಿ ನಾಲ್ಕು ಬಾರಿ ವಿಶ್ವಚಾಂಪಿಯನ್ ಎತ್ತಿದ ತೂಕ ಐದು ನೂರ ಎಪ್ಪತ್ತು ಪೌಂಡ್ . ಸಾವಿರದ ಒಮ್ಬತ್ತುನೂರತೊಂಬತ್ತ ಆರರಲ್ಲಿ ಆರು ಸಾವಿರದ ಇನ್ನೂರು ಮೈಲಿ ಉದ್ದದ ಸೈಕಲ್ ಸ್ಪರ್ಧೆಯಲ್ಲಿ ಪ್ರಶಸ್ತಿ . ಎರಡು ಸಾವಿರದ ಮೂರರಲ್ಲಿ ಲಾಸ್ಎಂಜಲೀಸ್ ಸ್ಪರ್ಧೆಯಲ್ಲಿ ಮ್ಯಾರಥಾನ್ ಪ್ರಶಸ್ತಿ. ಸಾವಿರದ ಒಮ್ಭಾತ್ತುನೂರ ಎಂಬತ್ತ ಒಂಬತ್ತರಲ್ಲಿ "ಅತ್ಯಂತ ಸ್ಪೂರ್ತಿದಾಯಕವ್ಯಕ್ತಿ ", ಅಮೇರಿಕಾದ "ಆರು ಜನ ಅತ್ಯಂತ ಆಶ್ಚ್ಯರ್ಯ ಕರ ವ್ಯಕ್ತಿ ಗಳಲ್ಲಿ ಒಬ್ಬರು "ಪ್ರಶಸ್ತಿ. ಇಡೀ ಅಮೆರಿಕಾದ ಉದ್ದವನ್ನುಎರಡು ಬಾರಿ ನಡೆದ ಹೆಗ್ಗಳಿಕೆ. ಇದನ್ನು ಓದಿ "ಯಾರು ಬೇಕಾದರೂ ಮಾಡಬಹುದು. ಇದರಲ್ಲೇನು ಮಹತ್ವ ?"ಎನಿಸಬಹುದು. ಇಲ್ಲಿನ ಮಹತ್ವವೆಂದರೆ ಇದೆಲ್ಲ ಸಾಧಿಸಿದಾಗ ಬಾಬ್ ರವರಿಗೆ ಎರಡೂ ಕಾಲುಗಳಿರಲಿಲ್ಲ. ವಿಯೆಟ್ನಾಂ ಯುದ್ಧದಲ್ಲಿ ಭಾಗವಹಿಸಿದ್ದಾಗತನ್ನ ಸಹ ಸೈನಿಕ ಒಬ್ಬನನ್ನು ಉಳಿಸುವ ಪ್ರಯತ್ನದಲ್ಲಿ ಆಕಸ್ಮಿಕವಾಗಿ ಭೂಗತ ಸ್ಪೋಟಕವೊಂದರ ಮೇಲೆ ಕಾಲಿಟ್ಟರು . ದೇಹಚಿದ್ರಗೊಂಡಿತು.
ರಕ್ತಮಯವಾಗಿ ಚಿದ್ರಗೊಂಡಿದ್ದ ಬಾಬ್ ರವರ ದೇಹವನ್ನು ಆಸ್ಪತ್ರೆಗೆ ತಂದಾಗ ನೋಡಿದ ವೈದ್ಯರು "ಬರುವಾಗಲೇ ಸತ್ತುಹೋಗಿದ್ದಾರ ?" ಎಂದರಂತೆ. ಆದರೆ ಮಾಂಸದ ಮೂಟೆಯಾಗಿದ್ದ ಬಾಬ್ ದೃಢ ಧ್ವನಿಯಲ್ಲಿ "ಬರುವಾಗ ಬದುಕಿದ್ದೇನೆ ಎಂದರಂತೆ. ಬಾಬ್ ರವರು ದೀರ್ಘ ಚಿಕಿತ್ಸೆಯ ನಂತರ ಅಮೆರಿಕಕ್ಕೆ ಮರಳಿದರು. ಯುದ್ಧಕ್ಕೆ ಹೋಗುವಾಗ ಇನ್ನೂರು ಪೌಂಡ್ತೂಕವಿದ್ದ ಅವರು ಯುದ್ಧದಿಂದ ಬರುವಾಗ ಕೇವಲ ನೂರು ಪೌಂಡ್ ತೂಕವಿದ್ದರು. ಏಕೆಂದರೆ ಅವರ ಎರಡೂ ಕಾಲುಗಳನ್ನು ತೆಗೆದುಹಾಕಲಾಗಿತ್ತು. ನಗುನಗುತ್ತಲೇ ನಾನು ನನ್ನ ಕಾಲುಗಳನ್ನು ಕಳೆದುಕೊಂಡಿದ್ದೇನೆ . ನನ್ನ ಹೃದಯವನ್ನಲ್ಲ " ಎಂಬ ಉದ್ಗಾರದೊಂದಿಗೆ ಮತ್ತೆ ಚಟುವಟಿಕೆಯ ಜೀವನಕ್ಕೆ ಮರಳಿದ ಅವರು ಭಾರ ಎತ್ತುವ ಸ್ಪರ್ಧೆಗಳಲ್ಲಿ ಭಾಗವಹಿಸತೊಡಗಿದರು. ನಾಲ್ಕು ಬಾರಿವಿಶ್ವ ಚಾಂಪಿಯನ್ ಆದರು.
ಚಾಂಪಿಯನ್ ಸ್ಪರ್ಧೆಯ ನಿಯಮಗಳಲ್ಲಿ ಪಾದಕ್ಕೆ ಷೂಸ್ ಧರಿಸಬೇಕೆಂಬ ಒಂದು ನಿಯಮ ಜಾರಿಗೆ ಬಂತು. ಇವರಿಗೆ ಷೂಸ್
ಇತ್ತು. ಆದರೆ ಧರಿಸಲು ಪಾದಗಳೇ ಇರಲಿಲ್ಲ. ಮುಂದೆ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಸಿಗಲಿಲ್ಲ. ಬಾಬ್ ಧೈರ್ಯಕಳೆದುಕೊಳ್ಳಲಿಲ್ಲ. ಕೈಗಳಿಗೆ ರಬ್ಬರ್ ಕವಚಗಳನ್ನು ಧರಿಸಿ ಕೈಗಳನ್ನು ಉಪಯೋಗಿಸಿ ನಡೆಯುವ ಅಭ್ಯಾಸ ಮಾಡಿದರು. ಮ್ಯಾರಥಾನ್ ಸ್ಪರ್ಧೆಗಳಲ್ಲಿ ಭಾಗವಹಿಸಿದರು. ಅಲ್ಲಿಯೂ ವಿಜೇತರಾದರು. ಇಡೀ ಅಮೆರಿಕಾದ ಉದ್ದವನ್ನು ಮೂರು ವರ್ಷ ಎಂಟುತಿಂಗಳು ಆರು ದಿನಗಳಲ್ಲಿ ಕೈಗಳನ್ನು ಉಪಯೋಗಿಸಿಯೇ ನಡೆದರು. ಇದಾದ ನಂತರ ಮೂರು ಚಕ್ರಗಳ ಟ್ರೈಸಿಕಲ್ಲಿನ ಅಭ್ಯಾಸಮಾಡಿದರು. ಸಾವಿರದ ಒಂಬತ್ತು ನೂರ ತೊಂಬತ್ತಾ ಆರರಲ್ಲಿ ಆರು ಸಾವಿರದ ಎರಡು ನೂರು ಮೈಲಿ ಉದ್ದದ ಸ್ಪರ್ಧೆಯಲ್ಲಿಪ್ರಶಸ್ತಿ ಪಡೆದರು. ತಮ್ಮ ವಿಕಲಚೇತನತೆ ಯನ್ನು ದೂಷಿಸದೆ ಅವರು ಒಂದರ ನಂತರ ಮತ್ತೊಂದು ಸಾಧನೆಯನ್ನು ಮಾಡುತ್ತಿದ್ದಾರೆ . ಕಾಲ್ಚೆಂಡಾಟದ ಕೋಚ್ ಆಗಿದ್ದಾರೆ. ಇದೀಗ ಅವರು ಅತ್ಯಂತ ಸ್ಪೂರ್ತಿದಾಯಕ ಉಪನ್ಯಾಸಕರಾಗಿ ಸಾವಿರಾರುಜನರನ್ನು ಉತ್ತೇಜಿಸುತ್ತಿದ್ದಾರೆ. ದೂರದರ್ಶನಗಳಲ್ಲಿ ಟಾಕ್ ಶೋಗಳನ್ನು ಕೊಡುತ್ತಿದ್ದಾರೆ. ತಮ್ಮ ಉಪನ್ಯಾಸಗಳಲ್ಲಿ "ವಿಕಲಚೇತನವ್ಯಕ್ತಿ ಇಷ್ಟು ಒಂದು ಸಾಧನೆಯನ್ನು ಮಾಡಲು ಸಾಧ್ಯವಾಗುವುದಾದರೆ ಪೂರ್ಣ ಅಂಗರಾದ ನೀವು ಇನ್ನೆಷ್ಟು ಸಾಧನೆಮಾಡಬಹುದು ?" ಎಂಬ ಪ್ರಶ್ನೆಯೊಂದಿಗೆ ತಮ್ಮ ಮಾತು ಮುಗಿಸುತ್ತಾರೆ. ಇದಕ್ಕೆ ನಿಮ್ಮ ಉತ್ತರವೇನು ? ದಯವಿಟ್ಟುನಮ್ಮೊಂದಿಗೆ ಹಂಚಿಕೊಳ್ಳಿ.
ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮಿಯ ಬಂಧು ನೆಟ್ ನಾಗ
ಎ.ಟಿ.ನಾಗರಾಜ
ಡಬ್ಲ್ಯು ಡಬ್ಲ್ಯು ಡಬ್ಲ್ಯು ಸನ್ ನ್ಯಾಚುರಲ್ ಫ್ಲಾಶ್ ಡಾಟ್ ಕಾಂ /
+೯೧-೯೬೩೨೧೭೨೪೮೬
"
ಗುರುವಾರ, ಆಗಸ್ಟ್ 5, 2010
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ