MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಸೋಮವಾರ, ಆಗಸ್ಟ್ 9, 2010

ಮಹನೀಯರಿಗೆ ಹೃತ್ಪೂರ್ವಕ ಅಭಿನಂದನೆಗಳು

ಪ್ರಪಂಚದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗನ ಬೆಳಗಿನ ವಂದನೆಗಳು.
"ಎಲ್ಲರೂ ದುಡಿಯಬೇಕು " ಇದು ಸನ್ ನ್ಯಾಚುರಲ್ ಫ್ಲಾಶ್ ಸಿದ್ಧಾಂತ .

ಕೆಲವೊಮ್ಮೆ ಕೆಲವು ವ್ಯಕ್ತಿಗಳು ಸಾರ್ವಜನಿಕ ಕೆಲಸಗಳಿಗೆ ಅದರಲ್ಲೋ ಅಧಿಕಾರಿಯಾಗಿ ಯಾವುದೇ ಪ್ರಲೋಭನೆಗಳಿಗೆಆಸೆಪಡದೆ ಬೇಗ ಸಾರ್ವಜನಿಕ ಕುಂದುಕೊರತೆಗಳನ್ನು ನಿವಾರಿಸುತ್ತಾರೆ . ಅಂತ ವ್ಯಕ್ತಿಗಳಿಂದ ಒಂದು ಇಲಾಕೆಗೆ ಘನತೆ ,ಗೌರವಹೆಚ್ಚುತ್ತದೆ. ಜತೆಗೆ ಜನರಿಗೆ ಉತ್ತಮ ವ್ಯಕ್ತಿಯಾಗಿ ಕಂಡುಬರುತ್ತಾರೆ. ಅಂತ ಒಂದು ಕಿರು ಹೃತ್ಪೂರ್ವಕ ಅಭಿನಂದನೆ ಸಲ್ಲಿಸುವುದುಸನ್ ನ್ಯಾಚುರಲ್ ಫ್ಲಾಶ್ ಇಂದಿನ ವಿಶೇಷ .

ಮೊದಲನೆಯದಾಗಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಇಂಜಿನೀಯರ್ ಮಾನ್ಯ ಸತೀಶ್ ಹಾಗೂಅವರ ಸಹುದ್ಯೋಗದವರಿಂದ ಬೆಂಗಳೂರಿನ ಹಲವಾರು ಕಡೆ ನೀರಿನ ಸಮಸ್ಯೆ ತುಂಬಾ ಕ್ಷಿಪ್ರ ವಾಗಿ ಬಗೆ ಹರಿಸಿರುವುದು ಅದೂಶಾಶ್ವತವಾಗಿ ಕಂಡುಬರುತ್ತಿದೆ, ಹಲವಾರು ಕಡೆ ಬಗೆಹರಿದಿದೆ. ಹಾಗಾಗಿ ನಮ್ಮ ಸನ್ ನ್ಯಾಚುರಲ್ ಫ್ಲಾಶ್ ಹೃತ್ಪೂರ್ವಕಅಭಿನಂದನೆ ಯನ್ನು ಬಿ.ಡಬ್ಲ್ಯು.ಎಸ್,ಎಸ್ ,ಬಿ ಇಲಾಖೆ ಗೆ ಅಭಿನಂದನೆ ಯನ್ನು ಅರ್ಪಿಸುತ್ತದೆ.

ಎರಡನೆಯದಾಗಿ ಬೆಂಗಳೂರು ಜಲಮಂಡಲಿ ಯಾ ಒಬ್ಬ ಯುವ ಸಾರ್ವಜನಿಕ ಕುಂದುಕೊರತೆ ನಿವಾರಣಾಧಿಕಾರಿ ಶ್ರೀ ಮಾನ್ನಿಕಿಲ್ ಎನ್ನುವವರು ಸಾರ್ವಜನಿಕ ರಿಂದ ನೀರಿನ ಸಮಸ್ಯೆ ಬಗ್ಗೆ ದೂರನ್ನು ಪಡೆದುಕೊಂಡು ಆದಷ್ಟು ಬೇಗ ಸಂಬದಪಟ್ಟ ಅಧಿಕಾರಿಗೆದೂರನ್ನು ರವಾನಿಸಿ ಸಾರ್ವಜನಿಕ ನೀರಿನ ಸಮಸ್ಯೆ ಯನ್ನು ಬಗೆ ಹರಿಸುವುದು . ಸನ್ ನ್ಯಾಚುರಲ್ ಫ್ಲಾಶ್ ಗಮನಕ್ಕೆಬಂದಿರುತ್ತದೆ. ಹಾಗಾಗಿ ನಿಕಿಲ್ ಹಾಗೂ ಬೆಂಗಳೂರು ಜಲಮಂಡಳಿಗೆ ಸನ್ ನ್ಯಾಚುರಲ್ ಫ್ಲಾಶ್ ಹೃತ್ಪೂರ್ವಕ ಅಭಿನಂದನೆಗಳು.

ಮೂರನೆಯದಾಗಿ ಶಿವಮೊಗ್ಗದಿಂದ ಬೆಂಗಳೂರಿಗೆ ಹೊರಡುವ ಮಧ್ಯಾನ ಮೂರುಗಂಟೆ ಪ್ರಯಾಣಿಕ ರೈಲನ್ನು ಬೆಂಗಳೂರಿಗೆಆದಷ್ಟು ರಾತ್ರಿ ಹತ್ತೂವರೆ ಒಳಗಡೆ ತಲುಪುವಂತೆ ಶಿವಮೊಗ್ಗ ರೈಲ್ವೆ ಸ್ಟೇಶನ್ ಸಿಬ್ಬಂದಿ ಯೋಬ್ಬರೊಡನೆ ಸನ್ ನ್ಯಾಚುರಲ್ಫ್ಲಾಶ್ . ಸಾರ್ವಜನಿಕ ಪರವಾಗಿ ಕೇಳಿಕೊಂಡಿತ್ತು. ಮಾನ್ಯ ಅಧಿಕಾರಿಗಳು ಸಂಬಂಧ ಪಟ್ಟವರಿಗೆ ತಿಳಿಸಿ ಆದಷ್ಟು ಬೇಗಕಾರ್ಯರೂಪಕ್ಕೆ ತರುವುದಾಗಿ ಹೇಳಿದ್ದರು. ಅವರಿಗೂ ಕೂಡ ಹೃತ್ಪೂರ್ವಕ ಅಭಿನಂದನೆಗಳು.
ರಾತ್ರಿ ಹತ್ತೊವರೆ ನಂತರ ಬಿ,ಎಂ, ಟಿ.ಸಿ ಗೆ ಸಂಬಂಧ ಪಟ್ಟ ಬಸ್ ಗಳು ಸಿಗಬಹುದು. ಆದರೆ ಎಲ್ಲಿ ಮುಖ್ಯ ರಸ್ತೆ ಇದೆಯೋಅಲ್ಲಿಯವಗೆ ಮಾತ್ರ. ಕೆಲವು ಬಡಾವಣೆ ಗಳ ಒಳಗೆ ರಾತ್ರಿ ಹತ್ತರ ನಂತರ ಹೋಗುವುದು ಸ್ವಲ್ಪ ಕಷ್ಟ. ಕಾರಣ ಮೊದಲನೆಯದುನಾಯಿಗಳಿಂದಾದರೆ, ಎರಡನೆಯದು ಬೆದರಿಕೆ ಹಾಕಿ ಕೈಯಲ್ಲಿ ಇರುವ ಕಾಸು , ಮೊಬೆಲ್ಲು , ಬೆಲೆಬಾಳುವ ವಸ್ತು ದೋಚು ವವರುಹೆಚ್ಚಾಗಿರುವುದರಿಂದ.

ನಾಲ್ಕನೆಯದಾಗಿ ಮಾನ್ಯ ಸುರೇಶ ಶೆಟ್ಟಿ , ಶಿವಮೊಗ್ಗ ಇವರು ಸನ್ ನ್ಯಾಚುರಲ್ ಫ್ಲಾಶ್ ಹಾಗೂ ನೆಟ್ ನಾಗದ ಬಗ್ಗೆ ತುಂಬಾಉತ್ಸುಕ ರಾಗಿ ಸಲಹೆ ಯನ್ನು ನೀಡುತ್ತಿರುವುದಕ್ಕೆ ಅವರಿಗೂ ಸನ್ ನ್ಯಾಚುರಲ್ ಫ್ಲಾಶ್ ಹೃತ್ಪೂರ್ವಕ ಅಭಿನಂದನೆ ಅರ್ಫಿಸುತ್ತದೆ.

ಐದನೆಯದಾಗಿ ಬೆಂಗಳೂರು ನಗರದ ಶಿವಾಜಿನಗರ ವ್ಯಾಪ್ತಿಯ ಕಮರ್ಷಿಯಲ್ ಸ್ಟ್ರೀಟ್ ನಲ್ಲಿ ರಸ್ತೆ ಸರಿಯಾಗಿ ಇರಲಿಲ್ಲ ಆ ರಸ್ತೆಯನ್ನು ಸರಿಪಡಿಸುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ರವಿ ಕುಮಾರ್ ಎನ್ನುವವರ ಹತ್ತಿರ ಸನ್ ನ್ಯಾಚುರಲ್ ಫ್ಲಾಶ್ ರಸ್ತೆ ಸರಿಪಡಿಸುವಂತೆ ಸಾರ್ವಜನಿಕರ ಪರವಾಗಿ ಕೇಳಿಕೊಂಡಿತ್ತು. ಮಾನ್ಯ ರವಿಕುಮಾರ್ ಹೆಚ್ಚಿನ ಗಮನ ವಹಿಸಿ ಕೇವಲ ಮೂರೇ ದಿನಗಳಲ್ಲಿ ಕಮರ್ಷಿಯಲ್ ಸ್ಟ್ರೀಟ್ ರಸ್ತೆ ಯನ್ನು ಸರಿಪಡಿಸಿದ್ದಾರೆ. ನಾವು ಅವರಿಗೂ, ಅವರ ಇಲಾಖೆ ಯಾ ಹಿರಿ ಕಿರಿಯರೆಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇವೆ.

ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ

.ಟಿ. ನಾಗರಾಜ
ಸನ್ ನ್ಯಾಚುರಲ್ ಫ್ಲಾಶ್.ಕಂ /









ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ