ಈ ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗನ ಬೆಳಗಿನ ವಂದನೆಗಳು.
" ಎಲ್ಲರೂ ದುಡಿಯಬೇಕು" ಇದು ಸನ್ ನ್ಯಾಚುರಲ್ ಫ್ಲಾಶ್ ನ ಸಿದ್ದಾಂತ .
ನಾನು ಹೈಸ್ಕೂಲ್ ಹಾಗೂ ನನ್ನ ಪದವಿ ಪೂರ್ವ ವಿಧ್ಯಾಭ್ಯಾಸವನ್ನು ಮುಗಿಸಿದ್ದು ಸಾಗರ ತಾಲೋಕಿನ , ಆನಂದಪುರಂ ವ್ಯಾಪ್ತಿಯ ಸರ್ಕಾರಿ ಪದವಿ ಪೂರ್ವ ಕಾಲೇಜು .ದಾಸಕೊಪ್ಪ , ಆನಂದಪುರಂ ನಲ್ಲಿ . ಆ ವೇಳೆಯಲ್ಲಿ ನನ್ನ ಮೇಲೆ ಅಗಾಧ ಪರಿಣಾಮ ಬೀರಿದವರು ಕನ್ನಡ ಪಂಡೀತ್ ಸದಾನಂದ ನಾರಾಯಣ ನಾಯಕ್ , ಹಾಗೂ ವಿಜ್ಞಾನ ಬೋಧನೆ ಮಾಡುತ್ತಿದ್ದ ಎಸ್.ಕೆ . ಪಿ . ಟೀಚರ್ .
ಆಗಷ್ಟೇ ಸುನಂದಾ ಕನಕ ಪಂಡೀತ್ ರವರ ಜೀವನದಲ್ಲಿ ಒಂದು ಕಹಿ ಘಟನೆ ಜರುಗಿತ್ತು. ಅವರ ಪುತ್ರ ನೊಬ್ಬ ಆಕಸ್ಮಿಕವಾಗಿ ಸಾವಿಗೆ ಈಡಾಗಿದ್ದ. ಆದರೆ ಸಾಯುವ ವಯಸ್ಸಿನವನಾಗಿರಲಿಲ್ಲ. ನನಗಿಂತ ಚಿಕ್ಕವನು. ಇದಾದ ಸುಮಾರು ಒಂದೆರಡು ತಿಂಗಳನಂತರ ಸುನಂದಾ ಕನಕ ಪಂಡೀತ್ ನಮ್ಮ ಪಕ್ಕದ ಊರು ಅಡೂರು ಅಲ್ಲಿ ನನಗೆ ಹಿಂದಿ ಕಲಿಸಿದ ಸುಶೀಲಮ್ಮ ಸತ್ಯನಾರಾಯಣ . ಹಾಗೂ ನನಗೆ ಜೀವನದಲ್ಲಿ ಮಾರ್ಗ ದರ್ಶನ ನೀಡಿದ ತುಂಬಾ ಹತ್ತಿರದ ಗೆಳತಿ ಗೋದಲಕ್ಷ್ಮಿ ಅವರ ಮನೆಗೆ ಬಂದಿದ್ದರು. ಹಾಗೆಯೇ ನಮ್ಮ ಮನೆಗೂ ಬಂದರು. ನನಗೆ ಧೈರ್ಯ ವಾಗಿ ಅವರನ್ನು ನಡೆದ ಘಟನೆ ಬಗ್ಗೆ ಕೇಳಲು ಮನಸ್ಸು ಬರಲಿಲ್ಲ. ಆದರೂ ಸುತ್ತುಬಳಸಿ ಕೇಳಿದೆ.
ಅವರು ಗಂಭೀರವಾಗಿ ಹೀಗೆ ಹೇಳಿದರು. "ನಾಗರಾಜ ಜೀವನ ದಲ್ಲಿ ಕೆಟ್ಟದ್ದು ಎನ್ನುವುದು , ನಡೆಯಲೇ ಬೇಕು, ಎನ್ನುವ ಘಟನೆ ಅದು ಅನ್ನಿವಾರ್ಯ ಕೂಡ. ಒಂದು ಹಸುಗಳ ಹಿಂಡಿನಲ್ಲಿ ನೂರು ಹಸುಗಳು , ಇಪ್ಪತ್ತೈದು ಕರುಗಳು ಇವೆ ಎಂದು ಭಾವಿಸು. ಆ ಕರುಗಳು ಹೇಗೆ ಅವುಗಳ ತಾಯಿಯ ಹತ್ತಿರ ಹೋಗಿ ಹಾಲನ್ನು ಕುಡಿಯುತ್ತವೆಯೇ ಹೊರತು ಬೇರೆ ಹಸುಗಳ ಹತ್ತಿರ ಹೋಗಿ ಹಾಲು ಕುಡಿಯುವುದಿಲ್ಲ. ಹಾಗೆಯೇ ಸಾವಿರ ಜನರ ನಡುವೆ ಇರುವಾಗ ನೋವಿನ ಘಟನೆ ನಮಗೆ ಬರಬೇಕಾದರೆ ಬರಲೇ ಬೇಕು. ಅದು ವಿಧಿ ಬರೆದದ್ದು." ಎಂದರು.
ಈಗ ಯೋಚಿಸಿದರೂ ಅವರು ಹೇಳಿದ್ದು ನೂರಕ್ಕೆ ನೂರು ಸತ್ಯ. ಬರೆ ಓದುವ ವಿದ್ಯೆ ಜತೆಗೆ ಜೀವನ ಭೋಧನೆ ನೀಡುವ ಶಿಕ್ಷಕರು ನಮಗೆ ಮಾರ್ಗ ದರ್ಶಕರಲ್ಲವೇ ?
ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ
ಎ.ಟಿ.ನಾಗರಾಜ
ಡಬ್ಲ್ಯು ಡಬ್ಲ್ಯು ಡಬ್ಲ್ಯು ಸನ್ ನ್ಯಾಚುರಲ್ ಫ್ಲಾಶ್ .ಕಂ /
+೯೧-9632172486
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ