ಈ ಪ್ರಪಂಚದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು.
"ಎಲ್ಲರೂ ದುಡಿಯಲೇ ಬೇಕು " ಇದು ಸನ್ ನ್ಯಾಚುರಲ್ ಫ್ಲಾಶ್ ನ ಸಿದ್ದಾಂತ .
ಎಲ್ಲ ರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳೊಂದಿಗೆ
ವಿಜಯ ಸಿಂಗ್ ಎಂಬುದು ಭಾರತೀಯ ಹೆಸರಾದರೂ, ಆತ ಭಾರತಿಯನಲ್ಲ. ಏಕೆಂದರೆ ಒಂದು ಸಾವಿರದ ಒಂಬತ್ತು ನೂರಅರವತ್ತಾ ಮೂರರಲ್ಲಿ ಜನಿಸಿದ್ದು ಫಿಜಿ ದೇಶದಲ್ಲಿ, ಅವರ ತಂದೆಗೆ ವಿಮಾನ ನಿಲ್ದಾಣದಲ್ಲಿ ಟೆಕ್ನಿಷಿಯನ್ ಕೆಲಸ ಮತ್ತು ಬಿಡುವಿನಸಮಯದಲ್ಲಿ ಗಾಲ್ಪ್ಹ್ ಆಟದ ತರಬೇತಿ ನೀಡುವ ಹವ್ಯಾಸ . ಗಾಲ್ಪ್ಹ್ ಆಟದ ಮೈದಾನದ ಬಳಿಯಲ್ಲೇ ವಾಸವಿದ್ದುದ್ದರಿಂದ ಬಾಲಕವಿಜಯ್ ಸಿಂಗ್ ಚಿಕ್ಕಂದಿನಿಂದಲೇ ಗಾಲ್ಪ್ಹ್ ಆಟವನ್ನು ನೋಡುತ್ತಾ ಬಂದ. ಆಡಬೇಕೆಂಬ ಆಸಕ್ತಿ ಬೆಳೆಸಿಕೊಂಡ . ಮುಂದೊಂದುದಿನ ವಿಶ್ವ ಚಾಂಪಿಯನ್ ಆಗಬೇಕೆಂಬ ಕನಸು ಕಾಣುತ್ತಿದ್ದ. ಆದರೆ ಆರ್ಥಿಕ ಪರಿಸ್ಥಿತಿಯಿಂದಾಗಿ ಆಟವಾಡಲು ಅವಕಾಶದೊರೆಯುತ್ತಿರಲಿಲ್ಲ. ಏಕೆಂದರೆ ಗಾಲ್ಪ್ಹ್ ಎಂಬುದು ಶ್ರೀಮಂತರು ಮಾತ್ರ ಆಡುವ ಆಟ ಹತ್ತಿರದಿಂದ ಆಟವನ್ನು ನೋಡಿಯಾದರೂತೃಪ್ತಿ ಪಡೋಣವೆಂದು ಗಾಲ್ಪ್ಹ್ ಮೈದಾನದಲ್ಲಿ ಕೂಲಿ ಕೆಲಸಕ್ಕೆ ಸೇರಿಕೊಂಡ . ಹೀಗೆಯೇ ಇದ್ದಾರೆ ತನ್ನ ಕನಸ್ಸುನನಸಾಗುವುದಿಲ್ಲವೆಂದು ಆತನಿಗೆ ಅರ್ಥವಾಯಿತು . ಹಲವಾರು ಸಂಕಷ್ಟಗಳನ್ನು ಎದುರಿಸಿ ಮಲೇಶಿಯಾಕ್ಕೆ ವಲಸೆ ಹೋದ . ಗಾಲ್ಪ್ಹ್ ತರಬೇತಿ ಕಾರ್ಯಕ್ರಮಕ್ಕೆ ಸೇರಿಕೊಂಡ. ಹಗಲೆಲ್ಲ ಗಾಲ್ಪ್ಹ್ ಬಾಲ್ ಅಭ್ಯಾಸ. ರಾತ್ರಿ ಪ್ಲಾಟ್ ಫಾರಂ ನಲ್ಲಿ ವಾಸ. ಅಭ್ಯಾಸ ಮಾಡುತ್ತಿರುವಾಗಲೇ ಮಲೇಶಿಯಾದಲ್ಲಿ ನೆಲೆಸಬೇಕೆಂದು ಅರ್ಜಿ ಹಾಕಿದ. ಕೈಯ್ಯಲ್ಲಿ ಕಾಸಿಲ್ಲದವನನು ಯಾವ ದೇಶಆದರಿಸುತ್ತದೆ ? . ಈತನ ಅರ್ಜಿ ನಿರಾಕರಿಸಲ್ಪಟ್ಟಿತು. ದೇಶದಿಂದಲೇ ತೆರಳಬೇಕಾದ ದುರವಸ್ಥೆ , ಕಂಡವರಿಗೆಲ್ಲ ಕೈಮುಗಿದು , ಕಾಲು ಹಿಡಿದು, ಕಾಡಿ ಬೇಡಿ , ಅಮೇರಿಕಾ ಸೇರಿಕೊಂಡ . ಈತನ ಆಸಕ್ತಿ ಮತ್ತು ಸಾಮರ್ಥ್ಯ ಕಂಡ ಕೆಲವರು ಸಹಾಯ ಹಸ್ತಚಾಚಿದರು. ಮತ್ತೆ ಗಾಲ್ಪ್ಹ್ ಅಭ್ಯಾಸ ಪ್ರಾರಂಭವಾಯಿತು. ಹಲವಾರು ವರ್ಷಗಳ ಛಲಬಿಡದ ಪರಿಶ್ರಮ ಫಲ ನೀಡಿತು . ಒಂದುಸಾವಿರದ ಒಂಬತ್ತು ನೂರ ಎಂಬತ್ತ ಎರಡರಲ್ಲಿ ವೃತ್ತಿಪರ ಗಾಲ್ಪ್ಹ್ ಆಟಗಾರನಾಗಿ ಆಯ್ಕೆಯಾದ . ಅಂತರಾಷ್ಟ್ರೀಯ ಸ್ಪರ್ಧೆ ಗಳಲ್ಲಿ ಭಾಗವಹಿಸತೊಡಗಿದ.
ಆಶರ್ಯವೆಂದರೆ ಆತನ ಮೊದಲ ಗೆಲುವು ಮಲೇಶಿಯಾದಲ್ಲೇ ದೊರಕಿತು. ಯಾವ ದೇಶ ಆತನಿಗೆ ಆಶ್ರಯ ನಿರಾಕರಿಸಿತ್ತೋಅದೇ ದೇಶದಲ್ಲಿ ಆಟ ಮೊಟ್ಟ ಮೊದಲ ಚಾಂಪಿಯನ್ ಷಿಪ್ಹ್ ಪಡೆದ. ಅದಾದನಂತರ ವಿಜಯ ಸಿಂಗ್ ವಿಜಯಿ ಆಗುತ್ತಲೇಹೋದ. ನೈಜೀರಿಯ , ಐವರಿ ಕೋಸ್ಟ್ , ಎಲ್ .ಬೋಸ್ಕ್ ಓಪನ್ ಪ್ರಶಸ್ತಿ ಮತ್ತು ಕಿಂಗ್ಹ್ ಹಸನ್ ಟ್ರೋಫಿ ಮುಂತಾದವುಗಳನ್ನು ಗೆದ್ದ. ಆರ್ಥಿಕ ಪರಿಸ್ಥಿತಿ ಸುಧಾರಿಸಿತ್ತು . ಆದರೆ ಆರೋಗ್ಯ ಕೈಕೊಟ್ಟಿತು. ಕಟ್ಟು ಮತ್ತು ಬೆನ್ನಿನ ನೋವು ಕಾಡ ಹತ್ತಿತು. ಇನ್ನುಗಾಲ್ಪ್ಹ್ ಆಡಲೆಬಾರದೆಂದು ವೈದ್ಯರು ಕಡ್ಡಾಯ ಮಾಡಿದರು. ವಿಶ್ವ ಚಾಂಪಿಯನ್ ಆಗುವ ಕನಸು ಇನ್ನು ನನಸಾಗಿರಲಿಲ್ಲ. ವಿಜಯ್ ಧೈರ್ಯ ಕಳೆದುಕೊಳ್ಳಲಿಲ್ಲ. ಒಂದು ವರ್ಷ ವಿಶ್ರಾಂತಿ ಪಡೆದು ಮತ್ತೆ ಗಾಲ್ಪ್ಹ್ ಆಡಲು ಮೊದಲು ಮಾಡಿದ. ಪಿ. ಜಿ.ಎ . ರೋಕಿ ಆಗಿ ನಾಮಕರಣಗೊಂಡ . ಸ್ಪ್ರಧೆಗಳಲ್ಲಿ ಭಾಗವಹಿಸುತ್ತಲೇ ಹೋಗಿ ಒಂದುಸಾವಿರದ ಒಂಬತ್ತು ನೂರ ತೊಂಬತ್ತ ಎಂಟರಲ್ಲಿವಾಷಿಂಗ್ -ಟನ್ ನ ಪಿ.ಜಿ.ಎ. ಚಾಂಪಿಯನ್ ಷಿಪ್ಹ್ ಪ್ರಶಸ್ತಿ ಪಡೆದ. ಕೊನೆಗೆ ಎರಡು ಸಾವಿರದಲ್ಲಿ ವಿಶ್ವ ಚಾಂಪಿಯನ್ ಪ್ರಶಸ್ತಿಪಡೆದು ತನ್ನ ಕನಸು ನನಸ್ಸಾಗಿಸಿಕೊಂಡ.
ಇದೀಗ ವಿಜಯ್ ಸಿಂಗ್ ತನ್ನ ಪತ್ನಿ ಮತ್ತು ಮಗನ್ನೊಂದಿಗೆ ಪ್ಲೋರಿ -ಡಾದ ಪೊಂಟೆವೆಡ್ರಾ ಬೀಚಿನ ಬೃಹತ್ ಬಂಗಲೆಯಲ್ಲಿವಾಸಿಸುತ್ತಿದ್ದಾರೆ . ವಿಜಯ್ ಸಿಂಗ್ ಚಾರಿಟಬಲ್ ಫೌಂಡೆಶನ್ ಎಂಬ ಸಂಸ್ತೆಯನ್ನು ಸ್ತಾಪಿಸಿದ್ದಾರೆ. ಅಸಹಾಯಕ ಸ್ತ್ರೀಯರ ಮತ್ತುಮಕ್ಕಳ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಒಂದು ಮಹತ್ತರ ಕನಸು. ಛಲ ಬಿಡದ ಪರಿಶ್ರಮ . ತಾಳ್ಮೆ ಮತ್ತು ಕಷ್ಟಗಳನ್ನೆದುರಿಸಿ ನಿಲ್ಲುವಧೈರ್ಯವಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದೆಂಬುದಕ್ಕೆ ವಿಜಯಸಿಂಗ್ಹ್ ಅವರ ಸಾಹಸಗಾಥೆ ಎಲ್ಲರಿಗೂಮಾರ್ಗದರ್ಶಿಯಾಗುವಂಥದ್ದು.
ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ
ಎ.ಟಿ.ನಾಗರಾಜ
ಡಬ್ಲ್ಯು ಡಬ್ಲ್ಯು ಡಬ್ಲ್ಯು ಸನ್ ನ್ಯಾಚುರಲ್ ಫ್ಲಾಶ್ .ಕಂ/
+೯೧-9632172486
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ