MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಶನಿವಾರ, ಆಗಸ್ಟ್ 7, 2010

ನನ್ನನ್ನು ಮೂರ್ಖನೆಂದು ಭಾವಿಸಿದರೆ ಚಿಂತೆಯಿಲ್ಲ, ಮುಂದೆ ಯಾರಾದರು ತೊಂದರೆಯಲ್ಲಿರುವವರು ಸಹಾಯ ಬೇಡಿದಾಗ ಸಹಾಯಹಸ್ತ ಚಾಚಲು ಜನ ಹಿಂದೆ ಮುಂದೆ ನೋಡುವಂತಾಗಬಾರದು.........!

ಪ್ರಪಂಚದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗನ ಬೆಳಗ್ಗಿನ ವಂದನೆಗಳು.

'ಎಲ್ಲರು ದುಡಿಯಬೇಕು "ಇದು ಸನ್ ನ್ಯಾಚುರಲ್ ಫ್ಲಾಶ್ ಸಿದ್ಧಾಂತ .

ಒಂದು ಊರಿನಲ್ಲಿ ಒಬ್ಬ ಶ್ರೀಮಂತನಿದ್ದ , ಸಿರಿವಂತನಾದರೂ ಕಷ್ಟದಲ್ಲಿರುವವರನ್ನು ಕಂಡರೆ ಮರುಗುವ ಮುಗ್ದ ಸ್ವಭಾವ. ಆತನ ಬಳಿ ಒಂದು ಅಪರೂಪದ ಕುದುರೆಯಿತ್ತು. ಅದನ್ನು ಆತನಿಗೆ ಕಂಡರೆ ಬಹಳ ಪ್ರೀತಿ. ಬಹಳಷ್ಟು ಜನ ಕುದುರೆಯನ್ನುಕೊಳ್ಳಲು ಬರುತ್ತಿದ್ದರು. ಎಂತಹ ಒಳ್ಳೆಯ ಬೆಲೆ ಬಂದರೂ ಆತ "ಕುದುರೆಗೆ ಬೆಲೆ ಕಟ್ಟಬಹುದು. ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವೇ ?" ಎಂದು ನಿರಾಕರಿಸುತ್ತಿದ್ದ.

ಪಕ್ಕದ ಊರಿನಲ್ಲಿದ್ದ ಪಾಳೆಗಾರನ ಲಾಯದಲ್ಲಿ ಹತ್ತಾರು ಕುದುರೆಗಳಿದ್ದರೂ ಆತನಿಗೆ ಶ್ರೀಮಂತನ ಕುದುರೆ ಮೇಲೇ ಕಣ್ಣುಹಲವಾರು ಬಾರಿ ಬಂದು ಕುದುರೆಯನ್ನು ಮಾರುವುದಾದರೆ ಕೇಳಿದಷ್ಟು ಬೆಲೆ ಕೊಡಲು ಸಿದ್ಧ ಎನ್ನುತ್ತಿದ್ದ. ಆದರೆ ಶ್ರೀಮಂತನನಿರಾಕರಣೆಯಿಂದ ನಿರಾಶನಾಗುತ್ತಿದ್ದ . ಕೊನೆಗೊಮ್ಮೆ ಕುದುರೆಯನ್ನು ಕದ್ದಾದರೂ ಸರಿ ಪಡೆಯಲೇಬೇಕೆಂದು ತೀರ್ಮಾನಮಾಡಿದ. ಶ್ರೀಮಂತ ಕುದುರೆಯನ್ನೇರಿ ಬರುವ ದಾರಿಯಲ್ಲಿ ಭಿಕ್ಷುಕನ ವೇಷ ಹಾಕಿಕೊಂಡು ತೀವ್ರ ಅನಾರೋಗ್ಯದಿಂದಿರುವಂತೆನಟಿಸುತ್ತಾ ಕುಳಿತುಕೊಂಡ. ಶ್ರೀಮಂತ ಹತ್ತಿರ ಬಂದಾಗ "ಅಯ್ಯೋ! ನೋವು ಸಹಿಸಲಾರೆ. ಯಾರಾದರೂ ಚಿಕಿತ್ಸೆ ಕೊಡಿಸಿಕಾಪಾಡಿ " ಎಂದು ನರಳಲು ಶುರುಮಾಡಿದ . ನರಳುವಿಕೆ ಶ್ರೀಮಂತನಲ್ಲಿ ಕರುಣೆ ಉಕ್ಕಿಸಿತು. ಆತ ಕುದುರೆಯಿಂದ ಇಳಿದುಅವನ ಯೋಗಕ್ಷೇಮ ವಿಚಾರಿಸಿ "ನಿನ್ನನು ವೈದ್ಯರ ಬಳಿ ಕರೆದೊಯ್ಯುತ್ತೇನೆ . ಚಿಕಿತ್ಸೆ ಕೊಡಿಸುತ್ತೇನೆ ಬಾ " ಎಂದು ಕರೆದ. ಭಿಕ್ಷುಕನಡೆದು ಬರುವಷ್ಟು ಶಕ್ತಿಯೂ ಇಲ್ಲವೆಂದಾಗ, ಶ್ರೀಮಂತ ಅವನನ್ನೆತ್ತಿ ಕುದುರೆಯ ಮೇಲೆ ಕುಳ್ಳಿರಿಸಿ ಕುದುರೆಯ ಜೀನನ್ನು ಭಿಕ್ಷುಕ ಕೈಯಲ್ಲಿ ಕೊಟ್ಟ . ತಾನು ಪಕ್ಕದಲ್ಲಿ ನಡೆದುಕೊಂಡು ಹೊರಟ. ಭಿಕ್ಷುಕ ಕುದುರೆಯ ಮೇಲೆ ಪಟ್ಟಾಗಿ ಕುಳಿತುಕೊಂಡ . ಕುದುರೆಯನು ವಶಕ್ಕೆ ತೆಗೆದುಕೊಂಡ. ಸ್ವಲ್ಪ ದೂರ ಹೋದ ನಂತರ ಜೋರಾಗಿ ಗಹಗಹಿಸಿ ನಕ್ಕು "ನಾನು ಭಿಕ್ಷುಕನಲ್ಲ. ನಾನುಪಾಳೇಗಾರ.

ನಿನ್ನ ಕುದುರೆ ನನಗೆ ಸಿಕ್ಕಿತು. ಇನ್ನಿದು ನನ್ನದೇ ಎಂದು ಹೇಳಿ ಕುದುರೆ ಯನ್ನು ವೇಗವಾಗಿ ಓಡಿಸಿಕೊಂಡು ಹೋದ. ಆಗಶ್ರೀಮಂತನಿಗೆ ತಾನು ಮೋಸ ಹೋದುದರ ಅರಿವಾಯಿತು. ಪೆಚ್ಚೆನಿಸಿತು. ಆದರೆ ಕೆಲವೇ ಕ್ಷಣಗಳಲ್ಲಿ ಸಾವರಿಸಿಕೊಂಡು "ನನ್ನಕುದುರೆಯನ್ನು ಪಡೆದುಕೊಂಡಿದ್ದೀಯ . ನನಗೊಂದು ಉಪಕಾರ ಮಾಡು. ಕುದುರೆಯನ್ನು ನೀನು ಹೇಗೆ ಪಡೆದುಕೊಂಡೆಎಂಬುದನ್ನು ಯಾರಿಗೂ ಹೇಳಬೇಡ. ನನಗಷ್ಟೇ ಸಾಕು "ಎಂದು ಕಿರುಚಿ ಹೇಳಿದ. ಓಡುತ್ತಿದ್ದ ಕುದುರೆಯನ್ನು ನಿಲ್ಲಿಸಿದ ಪಾಳೇಗಾರಏಕೆ ಹೇಳಬಾರದು ?" ಜನ ನಿನ್ನನ್ನು ಮೂರ್ಖನೆಂದು ಭಾವಿಸುತ್ತಾರೆಂದೇ?"ಎಂದು ಕೇಳಿದ. ಆಗ ಶ್ರೀಮಂತ "ನನ್ನನ್ನುಮೂರ್ಖನೆಂದು ಭಾವಿಸಿದರೆ ಚಿಂತೆಯಿಲ್ಲ . ಮುಂದೆ ಯಾರಾದರು ತೊಂದರೆಯಲ್ಲಿರುವವರು ಸಹಾಯ ಬೇಡಿದಾಗ ಸಹಾಯಹಸ್ತಚಾಚಲು ಜನ ಹಿಂದೆ ಮುಂದೆ ನೋಡುವಂತಾಗ-ಬಾರದೆಂಬುದೆ ನನ್ನ ಚಿಂತೆ " . ಮಾತುಗಳನ್ನು ಕೇಳಿ ಪಾಳೇಗಾರ ಕುದುರೆಯಮೇಲೆ ಸ್ಥಬ್ಧನಾಗಿ ಕುಳಿತ. ತನ್ನ ಬಗ್ಗೆ ತನಗೆ ನಾಚಿಕೆಯಾಯಿತು. ನಿಧಾನವಾಗಿ ಕುದುರೆಯನ್ನು ನಡೆಸಿಕೊಂಡು ಬಂದುಶ್ರೀಮಂತನಿಗೆ ಅದನ್ನೊಪ್ಪಿಸಿ ಮರು ಮಾತನಾಡದೆ ಹೊರಟು ಹೋದ . ಅಂದಿನಿಂದ ಶ್ರೀಮಂತ ಸಹಾಯ ಮಾಡುವುದನ್ನುನಿಲ್ಲಿಸಲಿಲ್ಲ . ಆದರೆ ಇಹಪರ ವಿಚಾರಿಸದೆ ಸಹಾಯ ಮಾಡುವುದನ್ನು ನಿಲ್ಲಿಸಿದ. ಕುದುರೆಯ ಜೀನನ್ನು ಹತೋಟಿಯನ್ನೂ ಅವರಿಗೇ ಕೊಟ್ಟು ತಾನು ನಡೆದು ಬರುವುದನ್ನು ನಿಲ್ಲಿಸಿದ.

ಕಥೆ ಯಿಂದ ತಿಳಿದು ಬರುವುದೇನೆಂದರೆ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಮುನ್ನ ಆತನನ್ನು ವಿಚಾರಿಸಿ ಸಹಾಯಮಾಡಬೇಕು ಎನಿಸುತ್ತದೆ ನಿಮಗೆ ಎನೆನಿಸುತ್ತದೆ ನನಗೆ ತಿಳಿಸುವಿರ ?.


ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ಬಂಧು ನೆಟ್ ನಾಗ

.ಟಿ.ನಾಗರಾಜ
ಡಬ್ಲ್ಯು ಡಬ್ಲ್ಯು ಡಬ್ಲ್ಯು ಸನ್ ನ್ಯಾಚುರಲ್ಫ್ಳಶ್.ಕಂ /
+೯೧-9632172486






























"

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ