ಈ ಪ್ರಪಂಚದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗನ ಬೆಳಗಿನ ವಂದನೆಗಳು.
"ಎಲ್ಲರೂ ದುಡಿಯಲೇ ಬೇಕು " ಇದು ಸನ್ ನ್ಯಾಚುರಲ್ ಫ್ಲಾಶ್ ನ ಸಿದ್ದಾಂತ .
ಜಾರ್ಜ್ ಡ್ಯಾನ್ ಟ್ಜಿಗ್ ಎಂಬ ಯುವಕ ಕ್ಯಾಲಿಪೋರ್ನಿಯಾ ವಿಶ್ವವಿದ್ಯಾನಿಲಯದಲ್ಲಿ ಗಣಿತಶಾಸ್ತ್ರದ ವಿದ್ಯಾರ್ಥಿಯಾಗಿದ್ದ . ಅಪ್ರತಿಮ ಬುದ್ಧಿವಂತನಲ್ಲದಿದ್ದರೂ ಹಿಡಿದದ್ದನ್ನು ಸಾಧಿಸುವ ಮನೋಭಾವವಿತ್ತು. ಒಂದು ದಿನ ಪ್ರೊ.ನೇಮ್ಯಾನ್ ಅವರ ತರಗತಿಗೆತಡವಾಗಿ ಬಂದ. ಕಪ್ಪು ಹಲಗೆಯ ಮೇಲೆ ಎರಡು ಗಣಿತಶಾಸ್ತ್ರದ ಸಮಸ್ಯೆಗಳನ್ನು ಬರೆಯಲಾಗಿತ್ತು. ಬಹುಶ; ಅದು ಹೋಂ ವರ್ಕ್ ಇರಬಹುದೆಂದು ಭಾವಿಸಿದ ಜಾರ್ಜ್ ಅದನ್ನು ತನ್ನ ಪುಸ್ತಕದಲ್ಲಿ ಬರೆದು ಕೊಂಡ. ಸಂಜೆ ಆ ಸಮಸ್ಯೆಗಳನ್ನು ಬಿಡಿಸಲು ಪ್ರಯತ್ನಿಸಿದ. ಅವು ಜಟಿಲ ಸಮಸ್ಯೆಗಳಾಗಿದ್ದವು. ಅವನ ತಲೆ ಚಿಟ್ಟು ಹಿಡಿಯಿತು. ಆದರೂ ಪ್ರಯತ್ನ ಬಿಡಲಿಲ್ಲ. ಹಲವಾರು ದಿನಗಳ ಕಠಿಣ ಶ್ರಮದನಂತರ ಎರಡೂ ಸಮಸ್ಯೆಗಳಿಗೆ ಪರಿಹಾರ ದೊರಕಿತು. ಮರುದಿನ ಪರಿಹಾರಗಳನ್ನೋಳಗೊಂಡಿದ್ದ ಕಾಗದಗಳನ್ನು ಪ್ರೊಫೆಸರಿಗೆಸಲ್ಲಿಸಿದ. ಕಾರ್ಯಮಗ್ನರಾಗಿದ್ದ ಪ್ರೊಫೆಸರ್ ಅದನ್ನು ಮೇಜಿನ ಮೇಲಿಟ್ಟು ಹೋಗಲು ಹೇಳಿದರು. ಆ ಮೇಜು ಕಾಗದ ಪತ್ರಗಳಿಂದತುಂಬಿಹೋಗಿತ್ತು. ಅವುಗಳ ಮಧ್ಯೆ ತನ್ನ ಉತ್ತರಪತ್ರಿಕೆ ಎಲ್ಲಿ ಕಳೆದು ಹೋಗುತ್ತದೋ ಎಂಬ ಚಿಂತೆಯಾಯಿತಾದರೂ ಬೇರೆದಾರಿಯಿಲ್ಲದೆ ಅದನ್ನು ಅಲ್ಲೇ ಇಟ್ಟು ಬಂದ. ಮೂರು ನಾಲ್ಕು ವಾರಗಳಾದರೂ, ಪ್ರೊಫೆಸರ್ ಅವನ ಉತ್ತರ ಪತ್ರಿಕೆಯ ಬಗ್ಗೆ ಏನೂಹೇಳಲಿಲ್ಲ. ಮುಂದೊಂದು ದಿನ ಭಾನುವಾರ ಬೆಳಗಿನ ಸಮಯ ಜಾರ್ಜ್ ಇನ್ನು ಹಾಸಿಗೆಯಿಂದೆದ್ದಿರಲಿಲ್ಲ . ಅವನ ಕೊಟಡಿಯಬಾಗಿಲನ್ನು ಯಾರೋ ದಬದಬ ತಟ್ಟುತ್ತಿದ್ದರು . ಬಾಗಿಲು ತೆಗೆದಾಗ ಅಲ್ಲಿ ಅವರ ಪ್ರೊಫೆಸರ್ ನಿಂತಿದ್ದರು. ಆತನಿಗೆ ಆಶ್ಚರ್ಯ . ಅವರು "ಜಾರ್ಜ್ ! ಜಾರ್ಜ್ ! ಆ ಎರಡು ಸಮಸ್ಯೆಗಳನ್ನು ನೀನು ಬಿಡಿಸಿದೆಯಾ ? ನನಗೆ ನಂಬಲಾಗುತ್ತಿಲ್ಲ !" ಎಂದು ಒಂದೇಉಸಿರಲ್ಲಿ ಕಿರುಚಿದರು.
" ಹೌದು ! ನಾನು ಹೋಂ ವರ್ಕ್ ಮಾಡಿದೆ . ನನ್ನಿಂದ ಬೇರೆ ಏನಾದರೂ ನಿರೀಕ್ಷೆಯಿತ್ತೆ ?" ಎಂದು ಜಾರ್ಜ್ ಕೇಳಿದ. ಆಗಪ್ರೊಫೆಸರ್ " ಇದುವರೆವಿಗೂ ಆ ಸಮಸ್ಯೆಗಳಿಗೆ ಯಾರೂ ಪರಿಹಾರ ಕಂಡುಹಿಡಿದಿಲ್ಲ . ಐ -ನ್ಹ್ - ಸ್ಟೀನ್ ರಂತಹ ವಿಜ್ಞಾನಿ ಕೂಡಇದರಲ್ಲಿ ವಿಫಲರಾಗಿದ್ದಾರೆ . ಎಂದು ತಿಳಿಸಲು ನಾನು ಅವನ್ನು ಕಪ್ಪು ಹಲಗೆಯ ಮೇಲೆ ಬರೆದಿದ್ದೆ. ಬಹುಶ; ನೀನು ಅಂದುತಡವಾಗಿ ಬಂದದ್ದರಿಂದ ಅದನ್ನು ಹೋಂ ವರ್ಕ್ ಎಂದು ಭಾವಿಸಿರಬೇಕು . ಆದರೆ ಅದಕ್ಕೆ ಪರಿಹಾರ ಕಂಡುಹಿಡಿದು ಒಂದು ದೊಡ್ಡವಿಕ್ರಮ ಸಾಧಿಸಿದ್ದೀಯ . ಅಭಿನಂದನೆಗಳು ! ಇದನ್ನು ವೈಜ್ಞಾನಿಕ ಪ್ರಪಂಚಕ್ಕೆ ತಿಳಿಸಲು ನಾನು ಕಾತುರನಾಗಿದ್ದೇನೆ . ಏನೇನ್ನುತ್ತಿಯಾ?" ಎಂದರು.
ಪ್ರಕಟವಾದ ಕೆಲವೇ ದಿನಗಳಲ್ಲಿ ಆತನ ಸಂಶೋಧನೆ ಸಂಖ್ಯಾಶಾಸ್ತ್ರ ಕ್ಷೇತ್ರದಲ್ಲಿ ಒಂದು ಕ್ರಾಂತಿಯನ್ನೇ ಉಂಟುಮಾಡಿತು. ಮುಂದೆ ಜಾರ್ಜ್ ಡ್ಯಾ ನ್ಟ್ಜಿಗ್ ಸ್ಟ್ಯಾನ್ ಪೋರ್ಡ್ ವಿಶ್ವವಿದ್ಯಾನಿಲಯದ ಸಂಶೋಧನೆ ಮತ್ತು ಕಂಪ್ಯೂಟರ್ ಮಿಭಾಗದಮುಖ್ಯಸ್ಥರಾಗಿ "ಲೀನಿಯರ್ ಗಣಿತಶಾಸ್ತ್ರದ ಜನಕ " ಎಂದು ಪ್ರಖ್ಯಾತರಾದರು . ಈ ಘಟನೆ ದಂತಕತೆಯಂತೆ ಪ್ರಚಾರವಾಯಿತುಜಾರ್ಜ್ ರವರನ್ನು ಈ ಸಾಧನೆ ಹೇಗೆ ಸಾಧ್ಯಾವಾಯಿತೆಂದು ಕೇಳಿದವರಿಗೆ ಅವರು ನೀಡುತ್ತಿದ್ದ ಉತ್ತರ " ಈ ಸಮಸ್ಯೆಗಳನ್ನುಇದುವರೆಗೂ ಯಾರೂ ಬಿಡಿಸಿಲ್ಲವೆಂದು ಹೇಳಿದ್ದರೆ ನಾನೂ ನಿರುತ್ಸಾಹಗೊಳ್ಳುತ್ತಿದ್ದೆ . ಬಹುಶ; ಪ್ರಯತ್ನವನ್ನೂ ಮಾಡುತ್ತಿರಲಿಲ್ಲ. ಇದು ಬಿಡಿಸಬಹುದಾದ ಸಮಸ್ಯೆ ಎಂದು ನಾನು ಸಕಾರಾತ್ಮಕವಾಗಿ ಚಿಂತಿಸಿದ್ದರಿಂದ ನನಗೆ ಯಶಸ್ಸು ದೊರೆಯಿತು.!"
ಸಕಾರಾತ್ಮಕ ಚಿಂತನೆ ಯಶಸ್ಸಿಗೆ ಕಾರಣ ಎನ್ನುವುದಕ್ಕೆ ಇದಕ್ಕಿಂತ ಒಳ್ಳೆಯ ಉದಾಹರಣೆ ಬೇರೆ ಬೇಕೇ ?
ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ಬಂಧು ನೆಟ್ ನಾಗ
ಎ.ಟಿ.ನಾಗರಾಜ
ಡಬ್ಲ್ಯು ಡಬ್ಲ್ಯು ಡಬ್ಲು ಸನ್ ನ್ಯಾಚುರಲ್ಫ್ಳಶ್ .ಕಂ /
+೯೧-9632172486
.
ಬುಧವಾರ, ಆಗಸ್ಟ್ 11, 2010
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ