ಈ ಪ್ರಪಂಚದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗನ ಬೆಳಗಿನ ವಂದನೆಗಳು.
"ಎಲ್ಲರೂ ದುಡಿಯಬೇಕು " ಇದು ಸನ್ ನ್ಯಾಚುರಲ್ ಫ್ಲಾಶ್ ನ ಸಿದ್ದಾಂತ.
ಬಹಳ ವರ್ಷಗಳ ಹಿಂದೆ ಇನ್ನೂ ಬ್ರಿಟಿಷರು ಭಾರತವನ್ನಾಳುತ್ತಿದ್ದ ಕಾಲದಲ್ಲಿ ಮುಂಬಯಿಯಲ್ಲಿ ವ್ಯಾಟ್ ಸನ್ ಎಂಬ ಹೋಟೆಲ್ ಇತ್ತು. ಅಲ್ಲಿನ ಸೇವೆಯೂ ಮೇಲ್ದರ್ಜೆಯದಾಗಿತ್ತು. ಅಲ್ಲಿನ ಬೆಲೆಗಳು ಜನಸಾಮಾನ್ಯರ ಕೈಗೆಟುಕದಷ್ಟು ಮೇಲ್ದರ್ಜೆಯಲ್ಲೇ ಇತ್ತು. ಒಂದು ದಿನ ಒಬ್ಬ ಪಾರ್ಸಿ ಯುವಕ ಆ ಹೋಟೆಲ್ ಅನ್ನು ಪ್ರವೇಶಿಸಿದ. ಆದರೆ ಹೋಟೆಲ್ ನವರು ಅವನನ್ನು ಒಳಗೆ ಹೋಗಲು ಬಿಡಲಿಲ್ಲ. ಏಕೆಂದು ಕೇಳಿದಾಗ ಈ ಹೋಟೆಲ್ ಕೇವಲ ಬಿಳಿಯರಿಗಾಗಿ ಮಾತ್ರ. ಕಂದು ಬಣ್ಣದ ಭಾರತೀಯರಿಗೆ ಪ್ರವೇಶವಿಲ್ಲವೆಂದು ಖಡಖಂಡಿತವಾಗಿ ತಿಳಿಸಲಾಯಿತು. ಹಣಕ್ಕಿಂತ ದೇಹದ ಬಣ್ಣ ಮುಖ್ಯವೆಂದು ಯುವಕನನ್ನು ಬಲಾತ್ಕಾರವಾಗಿ ಹೊರದೂಡಲಾಯಿತು. ಹೊರಗಡೆ ಹೋಗುವುದಕ್ಕೆ ಮುಂಚೆ ಆ ಯುವಕ ದೃಢವಾದ ದನಿಯಲ್ಲಿ "ನಾನು ಹೋಗುತ್ತಿದ್ದೇನೆ . ಆದರೆ ನಿಮ್ಮ ಹೋಟೆಲ್ ಅನ್ನೂ ಮೀರಿಸುವ ಉತ್ಕೃಷ್ಟ ದರ್ಜೆಯ ಹೋಟೆಲ್ ಸ್ಥಾಪಿಸುತ್ತೇನೆ . ಅಲ್ಲಿ ಭಾರತೀಯರೂ ಸೇವೆ ಪಡೆಯುವ ಅವಕಾಶವಿರುತ್ತದೆ. ಸೇವೆ ಸಲ್ಲಿಸುವವರಲ್ಲಿ ನಿಮ್ಮಂತಹ ಬಿಳಿಯ ಜನರೂ ಇರುತ್ತಾರೆ " ಎಂದು ಘೋಷಿಸಿ ಹೊರಟು ಹೋದ . ಅವನ ಮಾತುಗಳನ್ನು ಕೇಳಿ ಎಲ್ಲರೂ ನಕ್ಕರು.
ಕೊನೆಗೆ ಅವನ ಬಂಧುಬಳಗದವರು ಅವನನ್ನು "ನೀನು ನಿಜವಾಗಿಯೂ ಭಾತರ್ ಖಾನ ಅಂದರೆ ತಿಂಡಿ ಮನೆ ನಿರ್ಮಿಸುತ್ತೀಯಾ ?"ಎಂದು ಹಾಸ್ಯ ಮಾಡಿ ನಕ್ಕರು . ಹಾಗೆ ಹೋದ ಆ ಯುವಕ ಸುಮ್ಮನೆ ಕೂರಲಿಲ್ಲ . ಮುಂಬಯಿಯ ಪ್ರತಿಷ್ಠಿತ ಸ್ಥಳವಾದ ಅಪೋಲೋ ಬಂದರ್ ನಲ್ಲಿ ಒಂದು ಜಾಗವನ್ನು ಖರೀದಿಸಿದ. ವಿದೇಶಿ ಕಟ್ಟಡ ವಿನ್ಯಾಸ ಕಾರರನ್ನು ನೇಮಿಸಿದ. ಒಂದು ದೊಡ್ಡ ವೈಭವೋಪೇತ ಹೋಟೆಲನ್ನು ನಿರ್ಮಿಸಿದ . ಅದು ಮುಂಬಯಿಯಲ್ಲಿ ವಿದ್ಯುತ್ ಶಕ್ತಿಯನ್ನು ಬಳಸುವ ಮೊಟ್ಟ ಮೊದಲನೆಯ ಕಟ್ಟಡವಾಗಿತ್ತು. ಅದರಲ್ಲಿ ಅಮೆರಿಕದಿಂದ ಆಮದು ಮಾಡಿಕೊಂಡ ಫ್ಯಾನುಗಳಿದ್ದವು. ಜರ್ಮನಿಯ ಎಲಿವೇಟರ್ ಗಳಿದ್ದವು . ಟರ್ಕಿ ದೇಶದಿಂದ ತರಿಸಿದ ಸ್ನಾನದ ತೊಟ್ಟಿಗಲಿದ್ದವು . ಪ್ರೆಂಚ್ ದೇಶದಿಂದ ತರಿಸಿದ ದೀಪದ ಸ್ಯಾಂಡಲಿಯರ್ ಗಳಿದ್ದವು. ಅಂದಿನ ಕಾಲದಲ್ಲಿ ಕನಸಿನಲ್ಲೂ ಊಹಿಸಲಾರದಷ್ಟು ವೈಭವಗಳನ್ನು ಆ ಕಟ್ಟಡ ಹೊಂದಿತ್ತು. ಒಂದುಸಾವಿರದ ಒಂಬತ್ತು ನೂರ ಮೂರರಲ್ಲಿ ಉದ್ಘಾಟನೆಗೊಂಡು ಭಾರತೀಯರಿಗೂ ಸೇವೆ ಪಡೆಯುವ ಅವಕಾಶವಿದ್ದ ಆ ಹೋಟೆಲ್ ನಿರ್ಮಾಣಕ್ಕೆ ಖರ್ಚಾಗಿದ್ದುದ್ದು ನಾಲ್ಕೂವರೆ ಕೋಟಿ ರೂಪಾಯಿಗಳು !. ಮತ್ತು ಸೇವೆ ಸಲ್ಲಿಸುವ ಸಿಬ್ಬಂದಿಯಲ್ಲಿ ಬ್ರಿಟಿಷ್ ಬಟ್ಲರ್ ಗಳು ಇದ್ದರು. ! ಭಾರತೀಯರೆಲ್ಲರೂಹೆಮ್ಮೆಪಡುವಂತಹ ಸಾಧನೆ ಮಾಡಿದ ಆ ಯುವಕನ ಹೆಸರು "ಜೆಮ್ ಶೇಟ್ ಜೀ ನಸರ್ ವಾನ್ ಜೀ ಟಾಟ ಮತ್ತು ಹೋಟೆಲ್ ನ ಹೆಸರು "ತಾಜ್ ಹೋಟೆಲ್ "!.
ಅಂದು ಪ್ರಾರಂಭವಾದ ತಾಜ್ ಹೋಟೆಲ್ ಇಂದಿಗೂ ಹೋಟೆಲ್ ಉದ್ಯಮದಲ್ಲಿ ಒಂದು ವಿಶಿಷ್ಟ ಸ್ಥಾನವನ್ನು ಪಡೆದಿದೆ. ಉತ್ಕ್ರುಷ್ಟ
ಸೇವೆಗೆ ಹೆಸರಾಗಿದೆ. ಇಂದು ತಾಜ್ ಹೋಟೆಲ್ ಸಮೂಹ ಭಾರತದಾದ್ಯಂತ ಎಪ್ಪತೈದು ಹೋಟೆಲ್ ಗಳನ್ನೂ ಮತ್ತುವಿದೇಶಗಳಲ್ಲಿ ಹದಿನೈದಕ್ಕೂ ಹೆಚ್ಚು ಹೋಟೆಲ್ ಗಳನ್ನೂ ನಡೆಸುತ್ತಿದೆ. ಇದೆಲ್ಲಕ್ಕಿಂತ ಪ್ರಶಂಸಾರ್ಹ ವಿಷಯವೆಂದರೆ ತಾಜ್ ಹೋಟೆಲ್ ಗಳನ್ನೂ ನಡೆಸುವ ಇಂಡಿಯನ್ ಹೋಟೆಲ್ ಕಂಪನಿಯ ಲಾಭದ ಶೇಕಡ ಅರವತ್ತರಷ್ಟು ಭಾಗ ಎಲ್ಲಿಗೆ ಹೋಗುತ್ತದೆ ಗೊತ್ತಾ? ಬಾಂಬೆ ಕ್ಯಾನ್ಸರ್ ಹಾಸ್ಪಿಟಲ್ ಮತ್ತು ಇತರೆ ವೈದ್ಯಕೀಯ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಲು ಬಳಕೆ ಆಗುತ್ತದೆ.
ಬದುಕಿನಲ್ಲಿ ಅನೇಕ ಬಾಗಿಲುಗಳು ನಮಗೆ ಪ್ರವೇಶ ನಿರಾಕರಿಸಬಹುದು . ನಾವು ಅಂತಹ ಸಂದರ್ಭಗಳಲ್ಲಿ ಆ ಬಾಗಿಲನ್ನೇ ಮುರಿದು ಹಾಕುವ ಹುಂಬತನ ತೋರಬಹುದು. ಅಥವಾ ಅಳುತ್ತಾ ಕೂರುವ ಮೂರ್ಖತನ ತೋರಿಸಬಹುದು. ಅಥವಾ ಜೆಮ್ ಶೇಡ್ ಜೀಯವರಂತೆ ನಮಗೆ ಪ್ರವೇಶ ನಿರಾಕರಿಸಿದ ಬಾಗಿಲಿಗಿಂತ ದೊಡ್ಡ ಬಾಗಿಲನ್ನು ನಾವೇ ನಿರ್ಮಿಸುವ ಮುಂದಾಳುತನ ತೋರಿಸಬಹುದು.!
ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ.
ಎ.ಟಿ.ನಾಗರಾಜ
ಡಬ್ಲ್ಯು ಡಬ್ಲ್ಯು ಡಬ್ಲ್ಯು ಸನ್ ನ್ಯಾಚುರಲ್ ಫ್ಲಾಶ್ .ಕಂ /
+೯೧-9632172486
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ