MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಸೋಮವಾರ, ಆಗಸ್ಟ್ 16, 2010

ಜೀವನದಲ್ಲಿ ಮಾನಸಿಕವಾಗಿ ಸತ್ತವರನ್ನು ಬದುಕಿಸುವ ಹಾಯ್ ಬೆಂಗಳೂರು ಪತ್ರಿಕೆಯ ರವಿಬೆಳಗೆರೆಯ ಖಾಸ್ ಬಾತ್ ಹಾಗೂ ಬಾಟಮ್ ಐ -ಟಾಮ್ ಗಳ ಬಗ್ಗೆ ನನ್ನ ಒಂದು ಅನಿಸಿಕೆ .

ಪ್ರಪಂಚದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ಬೆಳಗಿನ ವಂದನೆಗಳು.

" ಎಲ್ಲರೂ ದುಡಿಯ ಬೇಕು " ಇದು ಸನ್ ನ್ಯಾಚುರಲ್ ಫ್ಲಾಶ್ ಸಿದ್ದಾಂತ .

ಸುಮಾರು ಎಂಟು ವರ್ಷಗಳ ಹಿಂದಿನ ನೆನಪು ನಾನು ಆಗಷ್ಟೇ ಬೆಂಗಳೂರಿಗೆ ಎರಡನೇ ಬಾರಿ ಕೆಲಸಕ್ಕೆಂದು ಹೋಗಿದ್ದೆ. ಆದರೆನನಗೆ ಕೆಲಸ ಸಿಕ್ಕಿರಲಿಲ್ಲ . ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದೆ. ಒಂದು ವೇಳೆಯಲ್ಲಿ ನಮ್ಮ ರೂಂ ಮೆಂಟ್ ಅಣ್ಣ ಷಣ್ಮುಖ ಊರಿನಿಂದ ಬಂದಿದ್ದ. ಅವನು ರವಿಬೆಳೆಗೆರೆ ಆಫೀಸಿಗೆ ಹೋಗಬೇಕು . ರವಿಬೆಳಗೆರೆ ಜತೆ ಮಾತನಾಡಬೇಕು ಎಂದು ಹೇಳಿದ. ನಾನು ಯಾವಾಗಲೂ ಹಾಯ್ ಬೆಂಗಳೂರು ಓದುತ್ತಿದ್ದೆ. ನನಗೆ ರವಿ ಬೆಳಗೆರೆ ಯಾ ಬಾಟಮ್ -ಟಾಮ್ ಹಾಗೂ ಖಾಸ್ ಬಾತ್ಗಳು ನನ್ನನ್ನು ತುಂಬಾ ಆಕರ್ಷಿಸಿದ್ದವು . ಒಂದೊಂದು ಬಾರಿ ನನಗೆ ಕೆಲಸ ಇಲ್ಲದಿದ್ದರಿಂದ ಪತ್ರಿಕೆ ಕೊಳ್ಳಲೂ ಸಾಧ್ಯವಾಗುತ್ತಿರಲ್ಲಿಲ್ಲ. ಒಂದು ವೇಳೆಯಲ್ಲಿ ನನ್ನ ಅಕ್ಕ ಹೆಚ್ಚು ಓದಿದವಳಲ್ಲ . ಭಾವನೂ ಕೂಡ ಹೆಚ್ಚು ಓದಿದವರಲ್ಲ. ಅವರು ಎರಡು ಮೂರು ಬಾರಿ ನನ್ನಮನಸ್ಸಿನ ಸ್ತಿತಿಯನ್ನು ಗುರುತಿಸಿ ಅವರು ಊರಿನಿಂದ ಬರುವಾಗ ಪತ್ರಿಕೆಯನ್ನು ತೆಗೆದುಕೊಂಡು ಬಂದು ಕೊಟ್ಟಿದ್ದರು.

ನನಗೂ ಕೂಡ ರವಿ ಬೆಳೆಗೆರೆ ಯನ್ನು ನೇರವಾಗಿ ನೋಡಬೇಕು ಅನಿಸಿತು. ರೋಗಿ ಬಯಸಿದ್ದೂ ಹಾಲು ಅನ್ನ, ವೈದ್ಯರುಹೇಳಿದ್ದೂ ಹಾಲು ಅನ್ನ ಅನ್ನುವ ರೀತಿ ನಾನು ಹೋಗಲು ಒಪ್ಪಿದೆ. ಇಬ್ಬರೂ ಹೋಗಿ ನಾವು ಶಿವ ಮೊಗ್ಗಾದಿಂದ ಬಂದಿದ್ದೇವೆ , ರವಿಬೆಳಗೆರೆ ಯವರನ್ನು ನೋಡಬೇಕು ಎಂದು ಅವರ ಆಫೀಸಿನ ಸಿಬ್ಬಂದಿಯವರೊಡನೆ ಹೇಳಿದೆವು. ಅವರು ರವಿ ಬೆಳೆಗೆರೆ ಬಂದತಕ್ಷಣ ನಮ್ಮನ್ನು ಮೊದಲು ಅವರನ್ನು ಬೇಟಿ ಮಾಡಲು ಅವಕಾಶ ಕೊಟ್ಟರು. ನಾನು ರವಿಬೆಳೆಗೆರೆ ಯವರನ್ನು ಕೇಳಿದೆ .? "ಸರ್ . ನೀವು ಸಮಾಜದಲ್ಲಿ ನಡೆಯುವ ಕೆಟ್ಟ ಕೆಲಸಗಳ ಬಗ್ಗೆ ಬರೆಯುತ್ತೀರಿ ಆದರೆ ಸರಕಾರದವರು ಯಾಕೆ ಕ್ರಮ ಕೆಟ್ಟ ಕೆಲಸ ಮಾಡಿದವರಬಗ್ಗೆ ಜರುಗಿಸುವುದಿಲ್ಲ ?"ಎಂದು ಕೇಳಿದೆ.

ಅದಕ್ಕೆ ರವಿಬೆಳಗೆರೆ ನಗುತ್ತಾ ಹೇಳಿದರು ನಾಗರಾಜ್ ನೀವೂ ರೈತಾಪಿ ವರ್ಗದಿಂದ ಬಂದವರು . ನೀವು ಬತ್ತವನ್ನುಬೆಳೆಯುತ್ತೀರಿ . ಅದನ್ನು ಮಾರುತ್ತೀರಿ , ಬತ್ತ ಕೊಂಡ ವ್ಯಕ್ತಿ ಅದನ್ನು ಅಕ್ಕಿ ಮಾಡಿಸಿಯೋ -ಅವಲಕ್ಕಿ ಮಾಡಿಸಿಯೋ ಬೇರೆಯೊಬ್ಬವ್ಯಾಪಾರಿಗೆ ಮಾರುತ್ತಾನೆ. ಅಕ್ಕಿ ಅಥವಾ ಅವಲಕ್ಕಿ ಕೊಂಡ ವ್ಯಕ್ತಿ ಗ್ರಾಹಕನಿಗೆ ತಲುಪಿಸುತ್ತಾನೆ. ಒಂದು ಸರಪಳಿಯಲ್ಲಿಎಲ್ಲರೂ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತಾರೆಂದು ಹೇಳಲು ಬರುವುದಿಲ್ಲ. ಕೆಲವರು ಪ್ರಾಮಾಣಿಕವಾಗಿ ದುಡಿಯುತ್ತಾರೆ. ಕೆಲವರು ಹಾಗೆ ಇರಲೂ ಬಹುದು. ನಾನು ಒಂದು ಸರಪಳಿಯಲ್ಲಿ ಇರುವ ಒಂದು ಲಿಂಕ್ ರೀತಿ . ನಾನು ನನಗೆ ತಿಳಿದಿದ್ದನ್ನುನನ್ನ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಅಷ್ಟೇ . ಬೇರೆಯವರಿಗೆ ನನ್ನಂತೆ ಕೆಲಸ ಮಾಡಿ ಎಂದು ಒತ್ತಾಯಿಸುವುದು ನನ್ನಕೆಲಸವಲ್ಲ ಎಂದರು.

ಮತ್ತೊಂದು ಮುಖ್ಯ ಅಂಶ ನಾನು ಅಲ್ಲಿ ಗಮನಿಸಿದ್ದು ಅವರ ಆಫೀಸಿನಲ್ಲಿ ಅಂದರೆ ನಾವು ಹೋಗಿದ್ದು ಗುರುವಾರ ದಿನ ಅವರಆಫೀಸಿನ ಸಿಬ್ಬಂದಿಗಳು ಹಾಯ್ ಬೆಂಗಳೂರು ಪತ್ರಿಕೆಯನ್ನು ಓದುತ್ತಿರುವುದು ಕಂಡೆ. ಅಂದರೆ ಒಬ್ಬ ಮುಂದಾಳು ಅಥವಾ ನಾಯಕಎಲ್ಲರಿಗೂ ಒಂದೇ ರೀತಿಯ ಸರಿಸಮಾನ ನಡೆಯಬೇಕು. ಮಾರುಕಟ್ಟೆಗೆ ಪತ್ರಿಕೆ ಗುರುವಾರ ಹೋದರೆ ಅವರ ಆಫಿಸಿನಲ್ಲಿಯೂ ಕೂಡಅದೇ ದಿನ ಪತ್ರಿಕೆ ಓದುತ್ತಿರುವುದು ನನಗೆ ವಿಚಿತ್ರವಾಗಿ ಕಂಡು ಬಂತು . ರವಿ ಬೆಳೆಗೆರೆ ವಿಷಯವನ್ನು ಬಾಂಬ್ ಬ್ಲಾಸ್ಟ್ ಮಾಡಿದಹಾಗೆ ಹೇಗೆ ತಮ್ಮ ಜತೆಗೆ ಇರುವವರಿಗೂ ಗೊತ್ತಿಲ್ಲದ ಹಾಗೆ ವಿಷಯವನ್ನು ಒಂದೇ ಬಾರಿ ಓದುಗರಿಗೆ ಹಾಗೂ ಆಫೀಸಿನಸಿಬ್ಬಂಧಿಗಳಿಗೆ ಒಂದೇ ಬಾರಿ ವಿಷಯವನ್ನು ತಿಳಿಸುತ್ತಾರೆ. ಇದು ಒಂದು ಯಶಸ್ವಿ ಪತ್ರಿಕೆಯ ಯಶಸ್ಸಿನ ತಂತ್ರ ಅಲ್ಲದೆ ಮತ್ತೇನು ?

ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ

.ಟಿ.ನಾಗರಾಜ
ಡಬ್ಲ್ಯು ಡಬ್ಲ್ಯು ಡಬ್ಲ್ಯು ಸನ್ ನ್ಯಾಚುರಲ್ ಫ್ಲಾಶ್.ಕಂ/
+೯೧-9632172486









ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ