MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಭಾನುವಾರ, ನವೆಂಬರ್ 7, 2010

ಹಣದ ಶ್ರೀಮಂತಿಕೆಯೊಂದಿಗೆ ಮುಗ್ಧನಂಬಿಕೆ ,ಹೃದಯ ಶ್ರೀಮಂತಿಕೆ ಸೇರಿದರೆ ಪವಾಡ ನಡೆಯುತ್ತದೆ _ಎ.ಟಿ. ನಾಗರಾಜ

ಏಯ್ ! ಗುರು ನಾನು ನಿಜವಾಗಿಯೂ ಹೇಳುತ್ತೇನೆ , ನೀನು ಇವತ್ತಲ್ಲ ನಾಳೆ ನೆಟ್ ವರ್ಕ್ ಮಾರ್ಕೆಟಿಂಗ್ ಗೆ ಬಂದೆ ಬರುತ್ತಿಯ . ನೀನು ಶ್ರೀಮಂತ ನಾಗುತ್ತಿಯ , ಬೇರೆಯವರನ್ನು ಶೀಮಂತರನ್ನಾಗಿ ಮಾಡುತ್ತಿಯ .!

ಈ ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ನ ಸಿದ್ದಾಂತ.

ಒಂದು ಬಡ ಸಂಸಾರ. ಅಪ್ಪ ,ಅಮ್ಮ ಮತ್ತು ಆರು ಜನ ಹೆಣ್ಣುಮಕ್ಕಳು. ಕೂಲಿ ಕೆಲಸ. ಸಣ್ಣ ಗುಡಿಸಿಲಿನಲ್ಲಿ ವಾಸ. ಕೂಲಿಯಿಲ್ಲದ ದಿನ ಎಲ್ಲರೂ ಉಪವಾಸ. ಐದು ವರ್ಷದ ಅಮ್ಮಿ ಕೊನೆಯ ಹೆಣ್ಣುಮಗಳು ತುಂಬಾ ಚೂಟಿ. ಒಂದು ರಾತ್ರಿ ಅಪ್ಪ ಅಮ್ಮನ ಮಾತು ಕೇಳಿಸಿತು. ಅಮ್ಮ "ನಾಳೆಯೋ ನಾಳಿದ್ದೋ ನನಗೆ ಹೆರಿಗೆಯಾಗುತ್ತೆ . ಇದಾದರೂ ಗಂಡು ಮಗುವಾದರೆ, ಆಪರೇಶನ್ ಮಾಡಿಸಿಕೊಂಡು ಬಿಡಬೇಕು. ಹೆಣ್ಣಾದರೆ ಬಟ್ಟೆ ಬರೆಗೆ ಯೋಚನೆಯಿಲ್ಲ ಹಳೆ ಬಟ್ಟೆಗಳಿವೆ. ಗಂಡಾದರೆ ನಮ್ಮ ಹತ್ತಿರ ಗಂಡು ಮಕ್ಕಳ ಬಟ್ಟೆಗಳಿಲ್ಲ. ಗಂಡುಮಗುವಿಗೆ ಇನ್ನೂ ಏನೇನು ಬೇಕೋ ? ನಮ್ಮ ಹತ್ತಿರ ಏನೂ ಇಲ್ಲ " ಎಂದಾಗ , ಅಪ್ಪ "ಚಿಂತೆ ಮಾಡಬೇಡ, ಗುಡ್ಡದ ಹನುಮಂತ ರಾಯನ್ನ ಕೇಳಿಕೊಳ್ಳೋಣ "ಎಂದರು. ಇದೆಲ್ಲವನ್ನು ಕೇಳಿಸಿಕೊಂಡ ಅಮ್ಮಿ ಮುಂಜಾನೆಯೇ ಎದ್ದಳು . ಊರಿನ ಹತ್ತಿರವೇ ಒಂದು ಗುಡ್ಡ. ಅದರ ಮೇಲೊಂದು ಕಲ್ಲಿನ ಮಂಟಪ . ಅದರೊಳಗೆ ಹನುಮಂತನ ಚಿತ್ರ ಬರೆದಿದ್ದ ಒಂದು ಕಲ್ಲು ಚಪ್ಪಡಿ, ಜನ ಅದನ್ನೇ ಶ್ರದ್ಧೆಯಿಂದ ಪೂಜಿಸುತ್ತಿದ್ದರು.
ಅಮ್ಮಿ ಬಡಬಡನೆ ಗುಡ್ಡ ಏರಿದಳು . ಅಷ್ಟು ಹೊತ್ತಿನಲ್ಲಿ ಅಲ್ಲಿ ಯಾರೂ ಕಾಣಲಿಲ್ಲ. ಆಕೆ ದೇವರ ಮುಂದೆ ಹೋಗಿ ಕೈಮುಗಿದು , ಕಣ್ಣು ಮುಚ್ಚಿಕೊಂಡು " ಹನುಮಂತಪ್ಪ ! ನಾಳೆ ನಾಳಿದ್ದರಲ್ಲಿ ನಮ್ಮನೆಗೆ ಒಂದು ಗಂಡು ಮಗು ಬರುತ್ತಂತೆ . ಅದಕ್ಕೆ ಒಳ್ಳೆ ಬಟ್ಟೆಗಳೂ, ಏನೇನೋ ಬೇಕಂತೆ . ಅವ್ಯಾವೂ ನಮ್ಮನೆಯಲ್ಲಿ ಇಲ್ಲವಂತೆ . ನಿನ್ನನ್ನು ಕೇಳಿ ಕೊಳ್ಳ ಬೇಕು ಅಂತ ನಮ್ಮಪ್ಪ ಹೇಳಿದ್ದರು. ನಮ್ಮ ಗುಡಿಸಲು ಗುಡ್ಡದ ಪಕ್ಕದಲ್ಲಿದೆ. ನಮ್ಮಪ್ಪನ ಹೆಸರು ಕೊಲಿಯಪ್ಪ . ದಯವಿಟ್ಟು ಬೇಗ ಕಳುಹಿಸಿ ಕೊಡು .ಎಂದು ಪ್ರಾರ್ಥಿಸಿ ಕೆಳಗಿಳಿದು ಬಂದಳು. ಅಮ್ಮಿ ದಿನವೆಲ್ಲ ಗುಡಿಸಿಲಿನಲ್ಲಿ ಕುಳಿತ್ತಿದ್ದಳು. ರಸ್ತೆಯ ಕಡೆಯೇ ಗಮನ. ಮಧ್ಯಾಹ್ನವಾಯಿತು , ಸಾಯಂಕಾಲವೂ ಆಯಿತು. ಏನೂ ಆಗಲಿಲ್ಲ. ಅಮ್ಮಿಗೆ ನಿರಾಸೆ. ನಮ್ಮ ಗುಡಿಸಲು ಗುಡ್ದದಪ್ಪನಿಗೆ ಗೊತ್ತಾಗಲಿಲ್ಲವೇನೋ ಎಂದು ಚಿಂತಿಸುತ್ತಿದ್ದಳು. ಅಷ್ಟರಲ್ಲಿ ಯಾರೋ ಬಂದು ಕೂಲಿಯಪ್ಪನನ್ನು ಕರೆದು "ನಿಮಗೆ ಯಾರೋ ಹನುಮಂತಪ್ಪ ಅನ್ನೋರು ಪಾರ್ಸೆಲ್ ಕಳುಹಿಸಿದ್ದಾರೆ.ತಗೊಳ್ಳಿ " ಎಂದರು . ಕೂಲಿಯಪ್ಪ "ಯಾರೋ ಪಾರ್ಸಲ್ ಕಳಿಸುವಷ್ಟು ದೊಡ್ಡೋರು ನಾವಲ್ಲ. ಯಾವ ಹನುಮಂತರಾಯರೂ ನಮಗೆ ಗೊತ್ತಿಲ್ಲ. ನಮಗಿದು ಬೇಡ" ಎಂದಾಗ ಅಮ್ಮಿ ಓಡಿಬಂದು "ನೀವದನ್ನು ಈಸ್ಕೊಳ್ಳಿ " ಎಂದು ದುಂಬಾಲು ಬಿದ್ದಳು. ಕೂಲಿಯಪ್ಪ ಅಮ್ಮಿಯತ್ತ ವಿಚಿತ್ರವಾಗಿ ನೋಡಿ ಪಾರ್ಸೆಲ್ ಪಡೆದುಕೊಂಡ. ಒಡೆದು ನೋಡಿದ. ಒಳಗೆ ಗಂಡುಮಗುವಿನ ಬಟ್ಟೆಗಳು. ಟೋಪಿ, ಕಾಲ್ಚೀಲಗಳು , ಮಕ್ಕಳ ಪೌಡರ್ ಮುಂತಾದವೆಲ್ಲ ಇದ್ದವು.

ಮನೆಯವರೆಲ್ಲರೂ ಇದನ್ನು ಕಳಿಸಿದವರು ಯಾರಂತ ಗೊತ್ತಾಗಲಿಲ್ಲವೆಂದು ಮಾತನಾಡಿ ಕೊಳ್ಳುತ್ತಿದ್ದಾಗ , ಅಮ್ಮಿ ಮಾತನಾಡಲಿಲ್ಲ, ಏಕೆಂದರೆ ಕಳುಹಿಸಿದವರು ಯಾರೆಂದು ಅವಳಿಗೆ ಮಾತ್ರ ಗೊತ್ತಿತ್ತು. ಆದರೆ ನಿಜವಾಗಿ ಕಳಿಸಿದವರು ಅಮ್ಮಿ ಅಂದು ಕೊಂಡವರಲ್ಲ!. ಅಮ್ಮಿ ಹನುಮಂತನ ಮುನೇ ಕಣ್ಮುಚ್ಚಿ ಬೇಡಿಕೊಳ್ಳುತ್ತಿದ್ದಾಗ ಅಲ್ಲಿಗೆ ಶ್ರೀಮಂತರೊಬ್ಬರು ಬೆಳಗಿನ ವಾಯುಸಂಚಾರಕ್ಕೆಂದು ಬಂದಿದ್ದರು. ಎಲ್ಲವನ್ನೂ ಕೇಳಿಸಿ ಕೊಂಡಿದ್ದರು. ಅಮ್ಮಿ ಅವರನ್ನು ಗಮನಿಸಿರಲಿಲ್ಲ. ಅವರು ಆಕೆಯ ಮುಗ್ಧ ನಂಬಿಕೆಯನ್ನು ಕಂಡು ಮಗುವಿನ ನಂಬಿಕೆ ಸುಳ್ಳಾಗಬಾರದೆಂದು ಪಾರ್ಸೆಲ್ ಅನ್ನು ಹನುಮಂತರಾಯನ ಹೆಸರಿನಲ್ಲಿ ಕಳಿಸಿದ್ದರು!. ಅವರಿಗೆ ಹಣದ ಶ್ರೀಮಂತಿಕೆಯೊಂದಿಗೆ ಹೃದಯ ಶ್ರೀಮಂತಿಕೆಯೂ ಇತ್ತು !. ಬದುಕಿನಲ್ಲಿ ನಮಗೆ "ಮುಗ್ಧ ನಂಬಿಕೆ "ಇರಬೇಕು ! ಅಥವಾ "ಹೃದಯ ಶ್ರೀಮಂತಿಕೆ " ಇರಬೇಕು!. ದೇವರು ಇವೆರಡನ್ನೂ ಒಂದು ಕಡೆ ಸೇರಿಸಬೇಕು ! ಆಗ ಪವಾಡ ನಡೆಯಲೇಬೇಕು !

ಈ ಕಥೆಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ಗಳನ್ನು ಬರೆದು ಕಳುಹಿಸಿ



http://sunnaturalflash.trafficformula2.com/

http://sunnaturalflash.trafficformula2.com/letter.php

ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ.
ಎ.ಟಿ. ನಾಗರಾಜ
ವ್ಯಕ್ತಿತ್ವ ವಿಕಾಸನ ತರಭೇತಿ ಗಾರರು , ಹಾಗೂ ನೇರ ಮಾರುಕಟ್ಟೆ
ಪ್ರತಿನಿಧಿ
http://www.sunnaturalflash.com/


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ