ಏಯ್ ! ಗುರು ನಾನು ನಿಜವಾಗಿಯೂ ಹೇಳುತ್ತೇನೆ , ನೀನು ಇವತ್ತಲ್ಲ ನಾಳೆ ನೆಟ್ ವರ್ಕ್ ಮಾರ್ಕೆಟಿಂಗ್ ಗೆ ಬಂದೆ ಬರುತ್ತಿಯ . ನೀನು ಶ್ರೀಮಂತ ನಾಗುತ್ತಿಯ , ಬೇರೆಯವರನ್ನು ಶೀಮಂತರನ್ನಾಗಿ ಮಾಡುತ್ತಿಯ .!
ಈ ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ನ ಸಿದ್ದಾಂತ.
ಒಮ್ಮೆ ಒಂದು ಊರಿಗೆ ಸರ್ಕಸ್ ಬಂದಿತ್ತು. ಆನೆ, ಸಿಂಹ ,ಹುಲಿ ಮುಂತಾದ ಪ್ರಾಣಿಗಳೆಲ್ಲ ಇದ್ದವು. ಊರಿನ ಮಕ್ಕಳಿಗೆಲ್ಲ ಕುತೂಹಲ. ಬಹಳಷ್ಟು ಜನ ಸರ್ಕಸ್ ನೋಡಿ ಬಂದು ಅದರ ಬಗ್ಗೆ ಮಾತನಾಡಿಕೊಳ್ಳುತ್ತಿದ್ದರು . ಮಗ ತನ್ನನ್ನೂ ಸರ್ಕಸ್ ಗೆ ಕರೆದು ಕೊಂಡು ಹೋಗುವಂತೆ ತಾಯಿಗೆ ಗೋಗರೆಯುತ್ತಿದ್ದ . ಆದರೆ ದುಡ್ಡಿಲ್ಲದ್ದರಿಂದ ತಾಯಿ ಇಂದು ನಾಳೆ ಎಂದು ದಿನ ತಳ್ಳುತ್ತಿದ್ದಳು . ಪ್ರತಿದಿನ ಬಾಲಕ ಸರ್ಕಸ್ ಟೆಂಟಿನ ಬಳಿ ಹೋಗಿ ಪ್ರಾಣಿಗಳನ್ನು ದೂರದಿಂದ ನೋಡುತ್ತಿದ್ದ.
ಒಂದು ದಿನ ತಾಯಿಯು ಮಗನೊಟ್ಟಿಗೆ ಕಾಡಿಗೆ ಸೌದೆಗಾಗಿ ಹೋಗಿದ್ದಳು. ಕೈಯಲ್ಲಿ ಮಚ್ಚಿತ್ತು . ಆಗ ಒಂದು ಅನಿರೀಕ್ಷಿತ ಘಟನೆ ನಡೆಯಿತು. ಸರ್ಕಸ್ ಪಂಜರದಿಂದ ಒಂದು ಸಿಂಹ ತಪ್ಪಿಸಿಕೊಂಡಿತ್ತು. ಅದು ಓಡೋಡುತ್ತ ಇವರಿದ್ದ ಕಡೆಯೇ ಬಂತು. ಸಿಂಹವನ್ನು ಕಂಡ ಮಗನಿಗೆ ಸಂತೋಷವಾಯಿತು. ಅವನೂ ಅದರತ್ತ ಕಿರುಚುತ್ತ ಓಡತೊಡಗಿದ. ಕಿರುಚಾಟ ಕೇಳಿ ತಾಯಿ ತಲೆಯೆತ್ತಿ ನೋಡಿದಾಗ ಸಿಂಹ ತನ್ನ ಮಗನ ಕಡೆಗೆ ಧಾವಿಸುತ್ತಿರುವುದನ್ನು ಕಂಡು ಗಾಬರಿಗೊಂಡಳು. ಕೈಯಲ್ಲಿ ಮಚ್ಚು ಹಿಡಿದುಕೊಂಡೆ ತನ್ನ ಮಗನ ಕಡೆಗೆ ಓಡಿದಳು. ಮಗನಿಗೆ ಮೃತ್ಯುವಿನ ಭಯವಿರಲಿಲ್ಲ. ಆದರೆ ತಾಯಿಗೆ ತಲೆ ಖಾಲಿಯಾದಂತೆ ಅನಿಸುತ್ತಿತ್ತು. ಏನೂ ತೋಚುತ್ತಿರಲಿಲ್ಲ. ಸಿಂಹದ ಬಾಯಿಗೆ ಮಗ ತುತ್ತಾಗಬಾರದು ಎಂಬುದೊಂದೇ ಯೋಚನೆ. ನೇರವಾಗಿ ಸಿಂಹದ ದಾರಿಗೆ ಅಡ್ಡವಾಗಿ ನಿಂತಳು. ಇದ್ದಕ್ಕಿದ್ದಂತೆ ಎದುರಾದ ಈಕೆಯನ್ನು ಕಂಡ ಸಿಂಹ ಘರ್ಜಿಸಿತು. ಈಕೆಯತ್ತ ನುಗ್ಗಿತು. ತಾಯಿಗೆ ತನ್ನ ಪ್ರಾಣದ ಭಯವಿರಲಿಲ್ಲ. ಮಗನದ್ದೇ ಯೋಚನೆ. ಕಯಲ್ಲಿದ್ದ ಮಚ್ಚನ್ನು ಮನಸ್ಸು ಬಂದಂತೆಲ್ಲ ಬೀಸಿದಳು. ಸಿಂಹದ ಮೂಗಿಗೆ ಮುಖಕ್ಕೆ ಕಣ್ಣಿಗೆ ಪೆಟ್ಟಾಯಿತು. ರಕ್ತ ಸುರಿಯಹತ್ತಿತು. ಸಂಹ ಗಾಬರಿಯಾಗಿ ಓಡಿಹೋಯಿತು. ತಾಯಿ ಮಗನನ್ನು ಬಾಚಿ ತಬ್ಬಿಕೊಂಡು ಗೊಳೋ ಎಂದು ಅತ್ತಳು. ಮಗ ಸುರಕ್ಷಿತವಾಗಿದ್ದ. ಆಕೆಗೂ ಏನೂ ಆಗಿರಲಿಲ್ಲ. ಎಷ್ಟೋ ಹೊತ್ತಿನ ಮೇಲೆ ಆಕೆಗೆ ಎನೆನಾಯಿತೆಂಬ ಅರಿವು ಬಂತು. ಸಾವರಿಸಿಕೊಂಡು ಮನೆಗೆ ಹಿಂತಿರುಗಿದಳು.
ಮಧ್ಯಾಹ್ನದ ಹೊತ್ತಿಗೆ ಊರಲ್ಲೆಲ್ಲ ಇದರದ್ದೇ ಸುದ್ದಿ . ಸಿಂಹವನ್ನೇ ಹೆದರಿಸಿದವಳೆಂಬ ಶ್ಲಾಘನೆ. ಸಂಜೆಯ ಹೊತ್ತಿಗೆ ಸರ್ಕಸ್ ಕಂಪನಿಯವರಿಗೆ ಸಿಂಹ ಮತ್ತೆ ಸಿಕ್ಕಿತಂತೆ. ಇವರ ಮನೆಗೆ ಬಂದು ಸಮಾಧಾನ ಹೇಳಿದರು. ಒಂದಷ್ಟು ಹಣ ಮತ್ತು ಸಾಯಂಕಾಲದ ಸರ್ಕಸ್ ಆಟಕ್ಕೆ ಉಚಿತ ಪಾಸ್ ಕೊಟ್ಟರು.
ತಾಯಿ ಮಗ ಸಂತೋಷದಿಂದ ಸರ್ಕಸ್ ನೋಡಲು ಹೋದರು. ಇವರಿಗೆ ತುಂಬಾ ಗೌರವದ ಸನ್ಮಾನ . ಮುಂದಿನ ಸಾಲಿನಲ್ಲೇ ಸ್ಥಾನ . ಆಟದ ಮಧ್ಯೆ ಸಿಂಹದ ಪ್ರದರ್ಶನವಿತ್ತು. ಬೋನಿನಲ್ಲಿದ್ದ ಬೃಹದಾಕಾರದ ಸಿಂಹವನ್ನು ನೋಡಿ. ಅದರ ಗರ್ಜನೆಯನ್ನು ಕೇಳಿ ತಾಯಿ ಹೆದರಿಕೊಂಡರು. ಮೂರ್ಛೆ ಹೋದರು. ಸರ್ಕಸ್ ನವರೇ ವಾಹನದಲ್ಲಿ ಇವರನ್ನು ಮನೆಗೆ ಕಳುಹಿಸಿದರು.
ಮಧಾಹ್ನ ಆ ಸಿಂಹವನ್ನು ಹೆದರಿಸಿದ ತಾಯಿ ಸಂಜೆ ಬೋನಿನೋಳಗಿದ್ದ ಅದೇ ಸಿಂಹವನ್ನು ಕಂಡು ಹೆದರಿ ಮೂರ್ಛೆ ಹೋಗಿದ್ದೆಕ್ಕೆಂದು ಯಾರಿಗೂ ಅರ್ಥವಾಗಲಿಲ್ಲ. ಬಹುಶ; ತನ್ನ ಪ್ರಾಣ ಹೋದರೂ ಚಿಂತೆಯಿಲ್ಲ. ತನ್ನ ಮಗನಿಗೆ ಏನೂ ಆಗಬಾರದೆಂಬ ಭಾವನೆ. ಆಕೆಗೆ ಶಕ್ತಿ ಕೊಟ್ಟಿತ್ತೇನೋ ?
ದಯವಿಟ್ಟು ಈ ಕೆಳಗಿನ ಲಿಂಕ್ ಗಳನ್ನೂ ಸೆಲೆಕ್ಟ್ , ಕಾಪಿ, ಸರ್ವರ್ ಪ್ಲೇಸ್ ನಲ್ಲಿ ಪೇಸ್ಟ್ ಮಾಡಿ ಎಂಟರ್ ಮಾಡಿ
http://sunnaturalflash.buildingonabudget.com/
http://buildingonabudget.com/letter2.php
ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ.
ಎ.ಟಿ. ನಾಗರಾಜ
ವ್ಯಕ್ತಿತ್ವ ವಿಕಾಸನ ತರಭೇತಿ ಗಾರರು , ಹಾಗೂ ನೇರ ಮಾರುಕಟ್ಟೆ
ಪ್ರತಿನಿಧಿ
http://www.sunnaturalflash.com/
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ