MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಬುಧವಾರ, ನವೆಂಬರ್ 10, 2010

ಬೇಸರದ ಬದುಕನ್ನು ರಸಮಯ ಗೊಳಿಸಿ ಕೊಳ್ಳಬಹುದು _ಎ.ಟಿ .ನಾಗರಾಜ

ಏಯ್ ! ಗುರು ನಾನು ನಿಜವಾಗಿಯೂ ಹೇಳುತ್ತೇನೆ , ನೀನು ಇವತ್ತಲ್ಲ ನಾಳೆ ನೆಟ್ ವರ್ಕ್ ಮಾರ್ಕೆಟಿಂಗ್ ಗೆ ಬಂದೆ ಬರುತ್ತಿಯ . ನೀನು ಶ್ರೀಮಂತ ನಾಗುತ್ತಿಯ , ಬೇರೆಯವರನ್ನು ಶೀಮಂತರನ್ನಾಗಿ ಮಾಡುತ್ತಿಯ .!

ಈ ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ನ ಸಿದ್ದಾಂತ.

ಒಬ್ಬ ಸ್ವಾಮಿಜೀಯವರನ್ನು ಬ್ಯಾಂಕಿನಲ್ಲಿ ಅಧಿಕಾರಿಯಾಗಿದ್ದ ಒಬ್ಬ ಸಜ್ಜನರು ಬೆಳಗ್ಗೆಯೇ ಭೇಟಿಯಾಗಿ "ಅದೇ ಬ್ಯಾಂಕು , ಚೆಕ್ ಗಳು, ಲೆಡ್ಜರ್ ಗಳು. ಗ್ರಾಹಕರು. ಲೋಕಲ್ ಟ್ರೈನು, ಅದೇ ಪ್ಲಾಟ್ , ಅದೇ ಸಂಸಾರ ಎಲ್ಲವೂ ಏಕತಾನವೆನಿಸುತ್ತಿದೆ ಏನು ಮಾಡಲಿ ?.ಎಂದರು. ಸ್ವಾಮೀಜಿಯವರು "ಹೌದಾ? ನೀವು ಬಂದದ್ದು ಒಳ್ಳೆಯದಾಯಿತು. ಹಿಮಾಲಯದಲ್ಲಿ ಪ್ರಾರಂಭವಾಗುತ್ತಿರುವ ಆಶ್ರಮವನ್ನು ನೋಡಿಕೊಳ್ಳಲು ನಿಮ್ಮಂಥವರ ಅವಶ್ಯಕತೆಯಿದೆ. ನೀವು ನಾಳೆ ಸಂಜೆ ಯಾರಿಗೂ ಹೇಳದೆ ಬಂದುಬಿಡಿ ನಿಮ್ಮ ಟಿಕೆಟ್ ಸಿದ್ಧವಾಗಿರುತ್ತದೆ. ಹಿಮಾಲಯದಲ್ಲಿ ಹೊಸಜೀವನ ನಿಮಗಾಗಿ ಕಾದಿರುತ್ತದೆ !. ಆದರೆ ಇಂದು ಮತ್ತು ನಾಳೆ ನಿಮ್ಮ ಆಫೀಸಿನಲ್ಲಿ, ಮನೆಯಲ್ಲಿ ನಿಮ್ಮ ಕೊನೆಯ ದಿನಗಳು ಎಂಬುದು ನೆನಪಿರಲಿ. ಎಲ್ಲರಿಗೂ ವಿದಾಯ ಹೇಳಿಬನ್ನಿ. ಕೊನೆಯ ಮಾತುಗಳು. ಪ್ರೀತಿ-ವಿಶ್ವಾಸ, ಕೃತಜ್ಞತೆಯ ಮಾತುಗಳು ಹೇಳುವುದಿದ್ದರೆ ನೇರವಾಗಿ ಹೇಳಬೇಡಿ . ಪರೋಕ್ಷವಾಗಿ ಹೇಳಿಬಿಡಿ. ಇವು ನಿಮ್ಮ ಕೊನೆಯ ಎರಡು ದಿನಗಳೆಂದು ಅವರಿಗೆ ಗೊತ್ತಾಗಬಾರದು" ಎಂದು ಹೇಳಿದರು. ಸಜ್ಜನರ ಮುಖ ಉತ್ಸಾಹದಿಂದ ಅರಳಿತು. ನಾಳೆ ಸಂಜೆ ಬರುತ್ತೇನೆ ಎಂದು ಹೇಳಿ ಹೋದರು.

ಅದರಂತೆ ಮರುದಿನ ಸಂಜೆ ಬಂದರು. ಆದರೆ ಮುಖದಲ್ಲಿ ನಗುವಿರಲಿಲ್ಲ. ಉತ್ಸಾಹವಿರಲಿಲ್ಲ. ಸ್ವಾಮೀಜಿಯವರು ಏನಾಯಿತೆಂದು ಕೇಳಿದಾಗ ಅವರು ಹೇಳಿದ್ದು "ನಾನು ಇನ್ನೇನು ಕೊನೆಯ ಎರಡು ದಿನಗಳೆಂದು ಆಫೀಸಿಗೆ ಹೋದೆ. ಯಾವಾಗಲೂ ಸಿಡುಕುವ ಮ್ಯಾನೇಜರ್ ಬಳಿ ಹೋಗಿ ನೀವು ಒಳ್ಳೆಯ ಬಾಸ್ , ನಿಮ್ಮಿಂದಾಗಿ ನಾನು ಕೆಲಸ ಕಲಿತೆ. ನಿಮಗೆ ಥ್ಯಾಂಕ್ಸ್ ಎಂದೆ. ಮೊದಲು ಅವರು ನನ್ನನ್ನು ವಿಚಿತ್ರವೆಂಬಂತೆ ನೋಡಿದರು. ನಿಧಾನವಾಗಿ ನಗೆ ಸೂಸಿದರು. ಕೂರಿಸಿದರು. ಚೆನ್ನಾಗಿ ಮಾತನಾಡಿಸಿದರು. ಕಾಫಿ ಕುಡಿಸಿ ಕಳುಹಿಸಿದರು. ನನ್ನ ಪ್ರಮೊಷನ್ನಿಗೆ ಶಿಫಾರಸು ಮಾಡುತ್ತೇನೆ ಎಂದರು. ಯಾವಾಗಲೂ ತಲೆನೋವಿನ ಒಬ್ಬ ಗ್ರಾಹಕನಿಗೆ ನಿನ್ನೆ ಒಳ್ಳೆಯ ಸೇವೆ ಕೊಟ್ಟೆ. ನಿಮ್ಮಂತಹ ದೊಡ್ಡ ಗ್ರಾಹಕರಿಂದ ನಮ್ಮ ಬ್ಯಾಂಕ್ ಬೆಳೆಯುತ್ತಿದೆ ಎಂದೆ. ಸಂಜೆ ಆತ ಅವರ ಕಂಪನಿಯ ಕ್ಯಾಲೆಂಡರ್ ಗಳನ್ನೂ ಸಿಹಿತಿಂಡಿಯ ಡಬ್ಬಗಳನ್ನು ಕಳುಹಿಸಿಕೊಟ್ಟರು. ನಾನು ಅದನ್ನು ನನ್ನ ಸಹೋದ್ಯೋಗಿಗಳಿಗೆ ಹಂಚಿದೆ. ಅವರೆಲ್ಲ ಥ್ಯಾಂಕ್ಸ್ ಹೇಳಿ ತೋರಿಸಿದ ವಿಶ್ವಾಸ ಕಂಡು ನನಗೆ ಆಶ್ಚರ್ಯವಾಯಿತು . ಸಂತೋಷವಾಯಿತು.

ನಗುನಗುತ್ತ ನಿನ್ನೆ ಸಂಜೆ ಮನೆಗೆ ಹೋಗುವಾಗ ನನ್ನ ಹೆಂಡತಿಗೆ ಮೈಸೂರುಪಾಕ್ , ಮಲ್ಲಿಗೆ ಹೂವು ಕಟ್ಟಿಸಿಕೊಂಡು ಹೋದೆ. ಆಕೆಗೆ ಖುಷಿಯೋ ಖುಷಿ , ಆಕೆ ನನಗಿಷ್ಟವಾದ ಅಡುಗೆ ಮಾಡಿದಳು. ಬೆಳಗ್ಗೆ ರುಚಿ ರುಚಿಯಾದ ತಿಂಡಿಯಿತ್ತು. ಸಾಯಂಕಾಲ ಬೇಗ ಬನ್ನಿ ಸಿನಿಮಾಕ್ಕೆ ಹೋಗೋಣ ಎಂದಳು. ನನಗೂ ಏಕಾಗಬಾರದೆನಿಸಿತು . ಈವತ್ತು ಮನೆ , ಆಫೀಸು ಎಲ್ಲ ಹೊಸದರಂತೆ ಕಾಣುತ್ತಿವೆ. ಈಗಿನದನ್ನೆಲ್ಲ ಬಿಟ್ಟು ಹಿಮಾಲಯಕ್ಕೆ ಹೇಗೆ ಹೋಗಲಿ ?. ಆದರೆ ನಿಮಗೆ ಮಾತು ಕೊಟ್ಟಿದ್ದೇನೆ. ಏನು ಮಾಡುವುದೋ ತೋಚುತ್ತಿಲ್ಲ. ಎಂದು ನಿಟ್ಟುಸಿರು ಬಿಟ್ಟರು. ಸ್ವಾಮೀಜಿಯವರು ಜೋರಾಗಿ ನಕ್ಕು " ಹಿಮಾಲಯವೂ ಇಲ್ಲ ! ಆಶ್ರಮವೂ ಇಲ್ಲ ! ನಾನು ನಿಮಗೆ ಸುಮ್ಮನೆ ಹೇಳಿದ್ದೆ. ನೀವು ಸ್ವಲ್ಪ ನಗೆ , ಒಂದೆರಡು ಒಳ್ಳೆಯ ಮಾತು. ಒಂದಿಷ್ಟು ಪ್ರೀತಿ ವಿಶ್ವಾಸಗಳನ್ನು ತುಂಬಿದ್ದರಿಂದ ಮನೆ ಬ್ಯಾಂಕು ಎಲ್ಲ ಹೊಸದರಂತಾಗಿವೆ, ಆನಂದವನ್ನಿಯುತ್ತಿವೆ. ಇದನ್ನು ಹೀಗೆಯೇ ಮುಂದುವರಿಸಿ. ಎಂದೂ ಬದುಕು ಬೇಸರವೆನಿಸುವುದಿಲ್ಲ .

ಬೇಸರದ ಬದುಕನ್ನು ರಸಮಯಗೊಳಿಸುವ ಸರಳ ಉಪಾಯಗಳು ಆ ಸಜ್ಜನರಿಗೆ ಗೊತ್ತಾದಂತೆ ನಿಮಗೂ ಗೊತ್ತಿದ್ದರೆ ಬರೆದು ತಿಳಿಸುತ್ತಿರಿ ತಾನೇ?

ದಯವಿಟ್ಟು ಈ ಕೆಳಗಿನ ಲಿಂಕ್ ಗಳನ್ನೂ ಸೆಲೆಕ್ಟ್ , ಕಾಪಿ, ಸರ್ವರ್ ಪ್ಲೇಸ್ ನಲ್ಲಿ ಪೇಸ್ಟ್ ಮಾಡಿ ಎಂಟರ್ ಮಾಡಿ
http://sunnaturalflash.buildingonabudget.com/

http://buildingonabudget.com/letter2.php

ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ.
ಎ.ಟಿ. ನಾಗರಾಜ
ವ್ಯಕ್ತಿತ್ವ ವಿಕಾಸನ ತರಭೇತಿ ಗಾರರು , ಹಾಗೂ ನೇರ ಮಾರುಕಟ್ಟೆ
ಪ್ರತಿನಿಧಿ
http://www.sunnaturalflash.com/

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ