ಏಯ್ ! ಗುರು ನಾನು ನಿಜವಾಗಿಯೂ ಹೇಳುತ್ತೇನೆ , ನೀನು ಇವತ್ತಲ್ಲ ನಾಳೆ ನೆಟ್ ವರ್ಕ್ ಮಾರ್ಕೆಟಿಂಗ್ ಗೆ ಬಂದೆ ಬರುತ್ತಿಯ . ನೀನು ಶ್ರೀಮಂತ ನಾಗುತ್ತಿಯ , ಬೇರೆಯವರನ್ನು ಶೀಮಂತರನ್ನಾಗಿ ಮಾಡುತ್ತಿಯ .!ಈ ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ನ ಸಿದ್ದಾಂತ.
ವಿಚಿತ್ರವಾದ ಒಂದು ನಂಬಿಕೆ ದಕ್ಷಿಣ ಆಫ್ರಿಕಾದ ಕೆಲ ಜನಾಂಗಗಳಲ್ಲಿ ಇದೆಯಂತೆ. ಅಲ್ಲಿನ ದಟ್ಟಅಡವಿಗಳಲ್ಲಿ ವಾಸಿಸುವ ಜನಗಳಿಗೆ ಪಕ್ಷಿಗಳು ಹೊಸತೇನಲ್ಲ. ಆದರೆ ನಮ್ಮ ಗುಬ್ಬಚ್ಚಿಯನ್ನು ಹೋಲುವ ಒಂದು ಪುಟ್ಟ ಹಕ್ಕಿ ಅಲ್ಲಿದೆಯಂತೆ. ಅದು ಕಾಣಿಸಿಕೊಳ್ಳುವುದು ಅಪರೂಪ. ಆದರೆ ಅದನ್ನು ಕಂಡಾಗ ಅವರು "ಮಳೆ ಹಕ್ಕಿ ಬಂತು , ಇಂದು ನಾಳೆಯಲ್ಲಿ ಮಳೆ ಬರುವುದು ಖಚಿತ " ಎಂದು ನಮ್ಬುತ್ತಾರಂತೆ. ಆ ನಂಬಿಕೆಗೆ ಕಾರಣ ಅವರ ಪ್ರಚಲಿತದ ಒಂದು ಜಾನಪದ ಕಥೆ .
ಬಹಳ ಹಿಂದೆ ಅನೇಕ ಪ್ರಾಣಿ ಪಕ್ಷಿಗಳು ವಾಸಿಸುತ್ತಿದ್ದ ಆಫ್ರಿಕಾದ ಅಡವಿಯ ಒಂದು ಭಾಗದಲ್ಲಿ ಭೀಕರವಾದ ಕಾಳ್ಗಿಚ್ಚು ಎದ್ದಿತಂತೆ. ಬೆಂಕಿಯ ಜ್ವಾಲೆಗಳು ಆಕಾಶದೆತ್ತರಕ್ಕೆ ಚಿಮ್ಮುತ್ತಿದ್ದವು. ಪ್ರಾಣಿಗಳೆಲ್ಲ ಹೆದರಿ ಓಡಿಹೋದವು. ಎತ್ತರದ ಮರಗಳಲ್ಲಿ ಗೂಡು ಕಟ್ಟಿ ವಾಸಿಸುತ್ತಿದ್ದ ಹಕ್ಕಿಗಳು ತಮ್ಮ ಗೂಡು ಸುಟ್ಟು ಬೂದಿಯಾಗುತ್ತಿರುವುದನ್ನು ಕಂಡು ದು;ಖಿತರಾಗಿ ತಮ್ಮ ಮಕ್ಕಳು -ಮರಿ ಸಮೇತ ಬೇರೆ ಕಾಡನ್ನು ಹುಡುಕಿಕೊಂಡು ಹಾರಿಹೋದವು. ಎಲ್ಲ ಪಕ್ಷಿಗಳು ಹೀಗೆ ಗುಂಪುಗುಂಪಾಗಿ ಹೊರಟು ಹೋಗುವುದನ್ನು ಕಂಡು ಅಲ್ಲೇ ಇದ್ದ ಒಂದು ಸಣ್ಣ ಹಕ್ಕಿ ತುಂಬಾ ಚಿಂತನೆಗೆ ಒಳಗಾಯಿತು. ಹಲವಾರು ವರ್ಷಗಳಿಂದ ನಮಗೆ ಆಶ್ರಯ ಕೊಟ್ಟಿದ್ದ ಕಾಡು ಈಗ ಬೆಂಕಿಗೆ ಆಹುತಿಯಾಗುತ್ತಿದೆ. ಬೆಂಕಿಯನ್ನು ನಂದಿಸಿ ಕಾಡನ್ನು ಕಾಪಾಡುವ ಬದಲು ಎಲ್ಲರು ಕಾಡನ್ನು ತೊರೆದು ಹೋಗುತಿದ್ದಾರಲ್ಲ ಎಂದು ಕೊರಗಿತು. ಬೆಂಕಿಯನ್ನು ಆರಿಸಲು ತಾನು ಏನಾದರೂ ಮಾಡಬೇಕೆಂದು ಯೋಚಿಸಿತು. ದೂರದಲ್ಲಿ ಒಂದು ಸರೋವರವಿತ್ತು. ಈ ಹಕ್ಕಿ ಸರೋವರಕ್ಕೆ ಹೋಗಿ ತನ್ನ ಪುಟ್ಟ ಬಾಯಿಯ ತುಂಬಾ ನೀರು ತುಮ್ಬಿಸಿಕೊಂಡಿತು. ಮತ್ತೆ ಎಚ್ಚರಿಕೆಯಿಂದ ಮೇಲೇರಿ ಕಾಡಿನ ಮೇಲೆ ಹಾರಿ ಬಂತು. ತನ್ನ ಬಾಯಲ್ಲಿದ್ದ ನೀರನ್ನೆಲ್ಲ ಕೆಳಗೆ ಉರಿಯುತ್ತಿದ್ದ ಬೆಂಕಿಯ ಮೇಲೆ ಉಗುಳಿತು. ಹಕ್ಕಿಗೆ ತಾನು ಉಗುಳುವ ನೀರಿನಿಂದ ಬೆಂಕಿ ತಣ್ಣಗಾಗ ಬಹುದೆಂಬ ಆಸೆ . ಮತ್ತೆ ಸರೋವರಕ್ಕೆ ಹಾರಿ ನೀರು ತುಂಬಿಕೊಂಡು ಬಂದು ಮತ್ತೆ ಬೆಂಕಿಯ ಮೇಲೆ ಚೆಲ್ಲುತ್ತಿತ್ತು. ಹೀಗೆ ಹತ್ತಾರು ಬಾರಿ ಮಾಡಿತು. ಈ ತುಂತುರು ನೀರಿನಿಂದ ಬೆಂಕಿಯ ಜ್ವಾಲೆಯೇನು ಕಡಿಮೆಯಾಗಲಿಲ್ಲ. ಆದರೆ ಈ ಹಕ್ಕಿ ಮಾಡುತ್ತಿದ್ದ ಕೆಲಸವನ್ನು ಮೇಲಿದ್ದ ದೇವತೆಗಳ ಗಮನ ಸೆಳೆಯಿತಂತೆ. ಹಕ್ಕಿ ಕಾಡಿನ ಬಗ್ಗೆ ತೋರುತ್ತಿದ್ದ ಕಾಳಜಿಗೆ, ಬೆಂಕಿ ಆರಿಸಲು ಮಾಡುತ್ತಿದ್ದ ಪ್ರಾಮಾಣಿಕ ಪ್ರಯತ್ನಕ್ಕೆ ಮೆಚ್ಚಿ ತಲೆದೂಗಿದರಂತೆ. ಕೇವಲ ತಲೆದೂಗಿ ಸುಮ್ಮನಾಗುವುದಕ್ಕೆ ಅವರೇನು ಮನುಷ್ಯರೇ ? ತಕ್ಷಣ ಧೋ ಎಂದು ಧಾರಾಕಾರ ಮಳೆ ಸುರಿಸಿದರಂತೆ. ಮಳೆಯ ನೀರಿಗೆ ಬೆಂಕಿಯ ಜ್ವಾಲೆ ತಣ್ಣಗಾಯಿತು. ಕಾಡು ಉಳಿಯಿತು. ಹಕ್ಕಿಯ ಗೂಡು ಉಳಿಯಿತು. ಅಂದಿನಿಂದ ಆ ಹಕ್ಕಿಗೆ ಮಳೆ ತರುವ ಹಕ್ಕಿ ಎಂದು ಹೆಸರಾಯಿತು. ಅದು ಕಾಣಿಸಿಕೊಂಡರೆ ಅದರ ಹಿಂದೆಯೇ ಮಳೆ ಬರುತ್ತದೆಂಬ ನಂಬಿಕೆ ಆ ಜನಾಂಗಕ್ಕೆ ಉಂಟಾಯಿತು.
ಅವರ ನಂಬಿಕೆಯನ್ನು ನಾವು ನಂಬದಿರಬಹುದು ಘಟನೆ ಪೂರ್ಣ ಸತ್ಯವಲ್ಲದಿರಬಹುದು . ಆದರೆ ಆಶ್ರಯವಿತ್ತವರ ಸಂಕಷ್ಟ ಸಮಯದಲ್ಲಿ ನಾವೂ ಸಹಾಯ ಮಾಡಲು ಪ್ರಯತ್ನಿಸಿದರೆ . ನಮ್ಮ ಪ್ರಯತ್ನಕ್ಕೆ ಮತ್ತಾರದೋ ಪ್ರಯತ್ನವೂ ಸೇರಿ ಒಟ್ಟು ಪ್ರಯತ್ನ ಫಲಕಾರಿಯಾಗಬಹುದು ಎಂಬುದಂತೂ ಸತ್ಯ. ಈ ಮಾತನ್ನು ಈ ಪುಟ್ಟ ಹಕ್ಕಿ ಸಾಧಿಸಿ ತೋರಿಸಿದೆ. ನಾವೂ ಬೇಕಿದ್ದರೆ ಪ್ರಯತ್ನಿಸಿ ನೋಡಬಹುದು.
ಮಾನ್ಯ ಓದುಗ ಮಹಾಶಯರಲ್ಲಿ ವಿನಂತಿ ಏನೆಂದರೆ ನೀವೂ ಬರಿ ನಮ್ಮ ಲೇಖನಗಳನ್ನು ಓದಿದರೆ ನಿಮಗೆ ಏನೂ ಲಾಭವಿಲ್ಲ . ನೀವೂ ನಮ್ಮ ಯಾವುದಾದರೊಂದು ಅವಕಾಸ ತೆಗೆದುಕೊಂಡು ನಿಮ್ಮ ಸ್ನೇಹಿತರನ್ನು,ಬಂದುಗಳಿಗೆ ಸಹಾಯ ಮಾಡಲು ಪ್ರಯತ್ನಿಸಿ ಆಗ ನಿಮಗೆ ಉತ್ತಮ ಫಲಿತಾಂಶ ಬರುತ್ತದೆ. ಅನುಯಾಯಿಯಾಗಿ ಇಲ್ಲವೇ ಅನ್ವೇಷಕರಾಗಿ , ಏನೂ ಆಗದೆ ನಿಮ್ಮ ಕಾಲ ಹಣ ವನ್ನು ದುರುಪಯೋಗ ಮಾಡಬೇಡಿ.
ಈ ಕೆಳಗಿನ ಲಿಂಕ್ ಗಳನ್ನೂ ಸೆಲೆಕ್ಟ್ , ಕಾಪಿ, ಸರ್ವರ್ ಪ್ಲೇಸ್ ನಲ್ಲಿ ಪೇಸ್ಟ್ ಮಾಡಿ ಎಂಟರ್ ಮಾಡಿ http://sunnaturalflash.buildingonabudget.com/http://buildingonabudget.com/letter2.php ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ.ಎ.ಟಿ. ನಾಗರಾಜವ್ಯಕ್ತಿತ್ವ ವಿಕಾಸನ ತರಭೇತಿ ಗಾರರು , ಹಾಗೂ ನೇರ ಮಾರುಕಟ್ಟೆಪ್ರತಿನಿಧಿ
ಮಂಗಳವಾರ, ಡಿಸೆಂಬರ್ 14, 2010
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ