ಮನಸ್ಸು ನಿದ್ರಾವಸ್ಥೆಯಲ್ಲಿದ್ದರೂ ನಷ್ಟವಿಲ್ಲ . ಸ್ವಪ್ನಾವಸ್ಥೆಯಲ್ಲಿದ್ದರು ಬಾಧಕವಿಲ್ಲ; ಆದರೆ ಈ ಮನಸ್ಸು ಅಸಭ್ಯತೆ, ಅಶ್ಲೀಲತೆಗಳನ್ನು ಮೈಗೂಡಿಸಿಕೊಂಡಿತೆಂದರೆ ಏಕಾಗ್ರತೆಯ ಮಾತನ್ನೆಲ್ಲ ಕಟ್ಟಿಡಬೇಕಾಗುತ್ತದೆ. ಶುಚಿಯಾದ , ಪವಿತ್ರವಾದ ಮನಸ್ಸಿಗೆ ಏಕಾಗ್ರತೆಎಂಬುದು ಸುಲಭವಾಗಿ ಸಿದ್ಧಿಸುತ್ತದೆಯಾದ್ದರಿಂದ ಅಸಭ್ಯತೆ ಅಶ್ಲೀಲತೆಗಳನ್ನು ಬಳಿಯೇ ಸುಳಿಯಗೊಡದಿರಬೇಕು .
'ಒಂದು ಗಂಟೆಯ ಅವಧಿಯಲ್ಲಿ ಇಂತಿಷ್ಟು ವಿಷಯಗಳನ್ನು ಅಧ್ಯಯನ ಮಾಡಿ ಮುಗಿಸುತ್ತೇನೆ 'ಎಂದು ವಿದ್ಯಾರ್ಥಿಗಳು ತಮಗೆ ತಾವೇ ನಿಬಂಧನೆ ಹಾಕಿಕೊಳ್ಳಬೇಕು ಮತ್ತು ಆ ಅವಧಿಯೊಳಗೆ ಅದನ್ನು ಮುಗಿಸಲು ತವಕಪಡಬೇಕು. ಮೊದಮೊದಲು ಆ ಅವಧಿಯೊಳಗೆ ಮುಗಿಸಲು ಸಾಧ್ಯವಾಗದೆ ಹೋಗಬಹುದು . ಆದರೆ ಪ್ರಯತ್ನದಲ್ಲಿ ತವಕ ಎದ್ದರೆ ಮನಸ್ಸು ಹೆಚ್ಚು ಎಚ್ಚರವಾಗಿರಲು ಸಾಧ್ಯವಾಗುವುದು ಖಂಡಿತ.
ಹೀಗೆ ಮನಸ್ಸನ್ನು ಸದಾ ಎಚ್ಚರವಾಗಿಡಲು ಯತ್ನಿಸಿದರೆ , ಏಕಾಗ್ರತೆಯನ್ನು ಬೆಳೆಸಿಕೊಳ್ಳಲು ಸಾಧ್ಯವಾಗುವುದು.
-ಎ.ಟಿ.ನಾಗರಾಜ
ಡಬ್ಲು ಡಬ್ಲು ಡಬ್ಲು ಸನ್ ನ್ಯಾಚುರಲ್ ಫ್ಲಾಶ್ .ಕಂ
+೯೧ 9632172486
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ