ಪ್ರತಿಯೊಬ್ಬ ವಿದ್ಯ್ಯಾರ್ಥಿಯಲ್ಲೂ ಅಪೂರ್ವ ಜ್ಞಾನವನ್ನು ಪಡೆಯಬಲ್ಲ ಅಪಾರ ಶಕ್ತಿ ಅಡಗಿದೆ .ಇದರಲ್ಲಿ ಸಂಶಯವೇ ಇಲ್ಲ. ಆದರೆ ವಿದ್ಯ್ಯರ್ಥಿಯು ತನ್ನ ವಿಷಯದಲ್ಲಿ ತಾನೇ ಸಂಶಯ ತಾಳಬಾರದು. ಅಷ್ಟೇ. ಶ್ರದ್ದೆಯ ವೈರಿಯೇ ಸಂಶಯ. ಸಂಶಯ ತಾಳಿದ ಕೂಡಲೇ ಅವನಲ್ಲಿ ಅಡಗಿರುವ ಶಕ್ತಿಯೆಲ್ಲ ಉಡುಗಿ ಹೋಗುತ್ತದೆ. ಆಮೇಲೆ ಪಶ್ಚಾತ್ತಾಪ ಪಡುತ್ತ ಕುಲಿತಿರುವುದೊಂದೇ ಅವನ ಹಣೆಬರಹವಾದೀತು. ಅಂತರಂಗದಲ್ಲಿರುವ ಜ್ಞಾನವನ್ನು ವ್ಯಕ್ತಗೊಳಿಸಲು ಬಹಿರಂಗದ ಅಧ್ಯಯನವೇ ದಾರಿ. 'ನನ್ನೊಳಗಿರುವ ಜ್ಞಾನವನ್ನು ವ್ರುದ್ದಿಸಿಕೊಂಡೆ ತೀರುತ್ತೇನೆ'ಎಂಬ ದೃಡಸಂಕಲ್ಪ ಮಾಡಿ ಶ್ರದ್ದೆಯಿಂದ ಅಧ್ಯಯನಕ್ಕೆ ಕುಳಿತಾಗ ಮನಸ್ಸು ತನ್ನಷ್ಟಕ್ಕೆ ತಾನೇ ಏಕಾಗ್ರವಾಗುವ ವೈಖರಿಯನ್ನು ಅನುಭವಿಸಿಯೇ ನೋಡಬೇಕು .
ನಿಜಕ್ಕೂ ಈ ಶ್ರದ್ಧೆಯ ಮಹಿಮೆ ಅಪಾರ. ಆದ್ದರಿಂದ ಸದಾ ಹೇಳಿಕೊಳ್ಳುತ್ತಿರಬೇಕು-"ಓ ಶ್ರದ್ದೆ! ನೀನಿದ್ದರೆ ನಾ ಗೆದ್ದೆ. ನೀ ಕೈಬಿಟ್ಟರೆ ನಾ ಬಿದ್ದೆ",
ಏಕಾಗ್ರತೆಗೆ ಇನ್ನೊಂದು ಕೀಲಿಕೈ ಇದೆ. ಇದು ಮಾಸ್ಟರ್ ಕೀ ಅದೇ ಪ್ರೀತಿ . ಎಲ್ಲಿ ಪ್ರೀತಿಯಿರುವುದೋ ಅಲ್ಲಿ ನಮ್ಮ ಮನಸ್ಸು ನಾಟಿರುತ್ತದೆ ಎಂಬುದು ಅನಿವಾರ್ಯ ನಿಯಮ. ಪ್ರೀತಿ ಅಧಿಕವಾಗಿರುವಲ್ಲಿ ಮನಸ್ಸು ಗಾಢವಾಗಿ ಸಂಯೋಗಗೊಂಡಿರುತ್ತದೆ.. ಈ ಅಂಶವನ್ನು ಹೆಚ್ಚು ವಿವರಿಸಬೇಕಾಗಿಲ್ಲ.ಏಕೆಂದರೆ ಅವರವರ ಪ್ರೀತಿಯ ವಸ್ತುವಿನಲ್ಲಿ ಅವರವರ ಮನಸ್ಸು ನಾಟಿಕೊಂಡಿರುವುದನ್ನು ಅವರವರೇ ನೋಡಿಕೊಂಡರಾಯಿತು.ಆದ್ದರಿಂದ ವಿದ್ಯ್ಯಾರ್ಥಿಯು ತನ್ನ ಅಧ್ಯಯನದ ವಿಷಯದಲ್ಲಿ ಪ್ರೀತಿ ತಾಳಬೇಕಾದದ್ದು ಅತ್ಯಂತ ಅವಶ್ಯಕ .
-ಎ.ಟಿ.ನಾಗರಾಜ
ಡಬ್ಲು ಡಬ್ಲು ಡಬ್ಲು ಸನ್ ನ್ಯಾಚುರಲ್ ಫ್ಲಾಶ್ . ಕಂ/
+ ೯೧ ೯೬೩೨೧೭೨೪೮೬
ಭಾನುವಾರ, ಮೇ 23, 2010
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ