ಇಂದಿನ ವಿದ್ಯ್ಯಾರ್ಥಿಗಳ ವಿದ್ಯಾಮಟ್ಟ ಮುಖ್ಯವಾಗಿ ಲೇಖನಸಾಮರ್ಥ್ಯ ಎಷ್ಟರ ಮಟ್ಟಿಗೆ ಕೆಳಗಿಳಿದಿದೆ ಎಂಬುದನ್ನು ತಿಳಿಯಲು ಅವರಿಂದ ಯಾವುದಾದರೊಂದು ವಿಷಯದ ಮೇಲೆ ಪ್ರಬಂಧ ಬರೆಯಿಸಿ ನೋಡಬೇಕು .ಒಂದೊಂದು ಪುಟದಲ್ಲೂ ತಪ್ಪು ಪದಪ್ರಯೋಗ ಹಾಗೂ ವಾಕ್ಯದೊಷಗಳು ಹೇರಳವಾಗಿರುತ್ತವೆ . ಇನ್ನು ಅಕ್ಷರದೊಷವನ್ನಂತು ನೋಡಲೆಬಾರದು! ವಿದ್ಯಾರ್ಥಿಯು ಎಷ್ಟೇ ಬುದ್ದಿವಂತನಾಗಿದ್ದರೂ ಅಭ್ಯಾಸ ಮಾಡದಿದ್ದರೆ ಏನೂ ಸಿದ್ದಿಸಲಾರದು.
ಆದ್ದರಿಂದಲೇ ಶ್ರೀ ಕೃಷ್ಣ ಅರ್ಜುನನಿಗೆ ಹೇಳುತ್ತಾನೆ.."ಅಭ್ಯಾಸ ಮತ್ತು ವೈರಾಗ್ಯದಿಂದ ಮನಸ್ಸಿನ ಏಕಾಗ್ರತೆಯನ್ನು ಸಿದ್ದಿಸಿಕೊಳ್ಳಬಹುದು ". ಎಂದು . ಅಭ್ಯಾಸವೆಂದರೆ ಪುನ: ಪುನಃ ಮಾಡುವ ಪ್ರಯತ್ನ . ವಿದ್ಯಾರ್ಥಿಯೊಬ್ಬ ಐದು ವರ್ಷದ ಬಾಲಕನಾಗಿದ್ದಾಗ ಕಷ್ಟದಿಂದ ಕಾಗುಣಿತ ತಿದ್ದುತ್ತಿದ್ದವನು ಹಾಗೇ ಬರೆದೂ ಬರೆದೂ ಎಸ್ಸೆಸ್ಸೆಲ್ಸಿಯ ವೇಳೆಗೆ ಸರಾಗವಾಗಿ ಬರೆಯಲು ಸಾದ್ಯವಾಯಿತಲ್ಲವೇ? ಇದೇ ಅಭ್ಯಾಸದ ಮಹತ್ವ. ಜಗತ್ತಿನಲ್ಲಿ ಎಂತೆಂತ ಮಹಾಕಾರ್ಯಗಳೆಲ್ಲ ನಡೆದಿವೆ .ನಡೆಯುತ್ತಿವೆ;ಅವುಗಳನ್ನೆಲ್ಲ ಒಮ್ಮೆ ಭಾವಿಸಿ ನೋಡಬೇಕು; ಅವುಗಳ ಹಿನ್ನೆಲೆಯಲ್ಲಿ ಎಷ್ಟೊಂದು ಜನರ ಅವಿರತ ಅಭ್ಯಾಸ-ಪರಿಶ್ರಮ ಇದೆ! ಅಭ್ಯಾಸದಿಂದ ಸಾಧ್ಯವಾಗದುದೇ ಇಲ್ಲ . ಆದರೆ ಕ್ರಮವರಿತ ಶಿಸ್ತುಬದ್ಧ ಅಭ್ಯಾಸ ಅದಾಗಬೇಕು.
-ಎ.ಟಿ.ನಾಗರಾಜ ಶಿವಮೊಗ್ಗ
ಡಬ್ಲು ಡಬ್ಲು ಡಬ್ಲು .ಸನ್ ನ್ಯಾಚುರಲ್ ಫ್ಲಾಶ್ .ಕಂ/
+೯೧ 9632172486
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ