ಮೊದಮೊದಲು ಅಧ್ಯಯನದ ವಿಷಯದಲ್ಲಿ ಪ್ರೀತಿಯನ್ನು ಪ್ರಯತ್ನಪೂರ್ವಕವಾಗಿ ತಂದುಕೊಳ್ಳಬೇಕು. ಆಮೇಲಾಮೇಲೆ ವಿಷಯ ಅರ್ಥವಾಗತೊಡಗುವುದರಿಂದ ತಾನಾಗಿಯೇ ಅದರಲ್ಲಿ ಪ್ರೀತಿ ಉಂಟಾಗುತ್ತದೆ. ಪ್ರೀತಿ ಉಂಟಾದಾಗ ಏಕಾಗ್ರತೆ ಸಿದ್ದಿಸಿತೆಂದೇ ಅರ್ಥ.
ಶ್ರದ್ಧೆ ಮತ್ತು ಪ್ರೀತಿಯಿಂದ ಸಿದ್ದಿಸಿಕೊಳ್ಳುವ ಏಕಾಗ್ರತೆಯೇ ಅತ್ಯಂತ ಸಹಜವಾದುದು. ಅಲ್ಲಿ ಶ್ರಮವಿರುವುದಿಲ್ಲ . ತಿಕ್ಕಾಟ-ತಿಣುಕಾಟ ಗಳಿರುವುದಿಲ್ಲ.
ಆದರೆ. ಇಲ್ಲಿ ವಿದ್ಯಾರ್ಥಿಗಳಿಗೆ ಒಂದು ವಿಶೇಷ ಸೂಚನೆಯನ್ನು ಕೊಡಬೇಕಾಗುತ್ತದೆ.ಏನೆಂದರೆ , ಅವರು ಮೇಲೆ ಹೇಳಿರುವಂತೆ ಹನ್ನೊಂದು ಅಂಶ ಗಳನ್ನು ಗಮನದಲ್ಲಿರಿಸಿಕೊಂಡು ಮುಂದುವರಿದರೂ ಅವರು ಅಧ್ಯಯನ ಮಾಡುವ ವಿಷಯವು ಸರಿಯಾಗಿ ಅರ್ಥವಾಗತೊಡಗುವವರೆಗೆ ಅವರಿಗೆ ಏಕಾಗ್ರತೆ ಸಿದ್ದಿಸಿತು ಎಂದು ಹೇಳುವಂತಿಲ್ಲ. ಆದ್ದರಿಂದ, 'ನನಗಿನ್ನೂ ಏಕಾಗ್ರತೆ ಏಕೆ ಸಿದ್ದಿಸಿಲ್ಲ? 'ಎಂದು ಕೊರಗಬಾರದು . ಬದಲಾಗಿ ಪಾಠವನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು ತಾಳ್ಮೆಯಿಂದ ಓದುತ್ತ ಹೋಗಬೇಕು. ಕ್ಲಿಷ್ಟ ಶಬ್ದಗಳ ಅರ್ಥವನ್ನು ಶಬ್ದಕೋಶದ ಸಹಾಯದಿಂದ ತಿಳಿದುಕೊಳ್ಳದೆ ಮುಂದೆ ಹೋಗಲೆಬಾರದು . ಹಾಗೆ ಅರ್ಥಮಾಡಿಕೊಳ್ಳದೆ ಓದಿದರೆ ಕೇವಲ ಸಮಯ ಹಾಳು,ಶಕ್ತಿ ನಷ್ಟ , ಪ್ರಯೋಜನ ಸೊನ್ನೆ , ಕ್ಲಿಷ್ಟ ಶಬ್ದಗಳನ್ನು ಅರ್ಥಮಾಡಿಕೊಳ್ಳದಿದ್ದರೆ ವಿಷಯ ಅರ್ಥವಾಗುವುದುಉಂಟೆ ?
- ಎ.ಟಿ .ನಾಗರಾಜ
ಡಬ್ಲು ಡಬ್ಲು ಡಬ್ಲು ಸನ್ ನ್ಯಾಚುರಲ್ ಫ್ಲಾಶ್ .ಕಂ /
+೯೧ 9632172486
ಸೋಮವಾರ, ಮೇ 24, 2010
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ