ಬೆಳಗ್ಗೆ ಎದ್ದು ಸ್ನಾನಾದಿಗಳನ್ನು ಮುಗಿಸಿದ ಮೇಲೆ ನಿನ್ನ ಶಕ್ತ್ಯನುಸಾರ ಹತ್ತು ನಿಮಿಷವೋ ಅರ್ಧಗಂಟೆಯೋ ಸ್ತೋತ್ರ -ಪಟನ ಪ್ರಾರ್ಥನೆ ಧ್ಯಾನ ಮುಂತಾದವುಗಳ ಕಾರ್ಯವೊಂದು ನಿನ್ನ ವೇಳಾಪಟ್ಟಿಯಲ್ಲಿ ಅವಶ್ಯವಾಗಿ ಸೇರಿರಲಿ . ನಿನ್ನ ಮನಸ್ಸಿನ ಆರೋಗ್ಯಕ್ಕೆ ,ಸಮಸ್ಥಿತಿಗೆ ಇದು ಅತ್ಯಂತ ಸಹಾಯಕ. ಹಾಗೆಯೇ ರಾತ್ರಿ ಮಲಗುವ ಸಮಯದಲ್ಲಿಯೂ ನಿನ್ನ ಇಷ್ಟ ದೇವತೆಯನ್ನು ಪ್ರಾರ್ಥಿಸಿ ಕೊಳ್ಳಬೇಕು;
"ಹೇ ಭಗವಾನ್, ನಿನ್ನ ದಯೆಯಿಂದ ಇಂದಿನ ದಿನವನ್ನು ಸಾಧ್ಯವಾದಷ್ಟು ಪ್ರಾಮಾಣಿಕತೆಯಿಂದ ಸದುಪಯೋಗ ಪಡಿಸಿಕೊಂಡಿದ್ದೇನೆ . ಆದರೂ ಕೆಲವಾರು ಲೋಪದೋಷಗಳು ಇರಬಹುದು . ನಾಳೆಯ ದಿನ ಆ ಲೋಪದೋಷಗಳು ಆಗದಂತೆ ನನಗೆ ಶಕ್ತಿ-ವಿವೇಕ ಕೊಟ್ಟು ಮುನ್ನಡೆಸು."
ಈ ಪ್ರಾರ್ಥನೆ ಹೃತ್ಪೋರ್ವಕವಾಗಿರಲಿ . ದೇವರು ಅದನ್ನು ಖಂಡಿತ ಈಡೆರಿಸುತ್ತಾನೆ.ಮತ್ತು ನಿನ್ನ ಮನಶ್ಯಕ್ತಿ ದಿನೇ ದಿನೇ ಹೆಚ್ಚುವುದನ್ನು ನೀನೆ ನೋಡಬಹುದು.
ಸ್ನಾನ ಎಂದೇನಲ್ಲ . ಇದನ್ನು ಮಾತ್ರ ಖಂಡಿತ ಕಡೆಗಣಿಸಬೇಡ . ಪ್ರತಿದಿನವೂ ತಲೆಯಿಂದ ಕಾಲಿನವರೆಗೂ ಬೆವರಿ ಬೆವರಿ , ಅದು ಗಾಳಿಗೆ ಆರಿ ಉಪ್ಪು ಹೆಪ್ಪುಗಟ್ಟಿರುತ್ತದೆ.ಜೊತೆಗೆ ಧೂಳು ಅಂಟಿಕೊಂಡಿರುತ್ತದೆ.ಇಂಥ ತಲೆ-ಮೈಯನ್ನು ತೊಳೆಯದಿದ್ದರೆ ಮನಸ್ಸು ಲವಲವಿಕೆಯನ್ನು ಕಳೆದುಕೊಳ್ಳುತ್ತದೆ. ಆಗ ಅಧ್ಯಯನ ಮಾಡುವ . ಅಧ್ಯಯನ ಮಾಡಿದ್ದನ್ನು ನೆನಪಿಟ್ಟುಕೊಳ್ಳುವ ಸಾಮರ್ಥ್ಯ ಅರ್ಧಕ್ಕೆ ಅರ್ಧ ಕುಂಠಿತವಾಗುತ್ತದೆ.
-ಎ.ಟಿ.ನಾಗರಾಜ
ಡಬ್ಲ್ಯು ಡಬ್ಲು ಡಬ್ಲು .ಸನ್ ನಯ್ಚುರಲ್ ಫ್ಲಾಶ್ .ಕಂ/
+೯೧-9632172486
ಭಾನುವಾರ, ಮೇ 30, 2010
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ