ನೋಡು ಪಾಠಗಳು ನಿನಗೆ ಅರ್ಥವಾಗಬೇಕಾದರೆ , ಮುಂದೆ ನೀನು ಯಶಸ್ವಿಯಾಗಿ ತೆರ್ಗಡೆಯಾಗಬೇಕಾದರೆ ಅದಕ್ಕೆಅಗತ್ಯವಾದ ಕೆಲವು ಸಲಹೆಗಳನ್ನು ನಿನ್ನ ಮುಂದಿಡುತ್ತೇನೆ. ಅವುಗಳನ್ನು ಸುಮ್ಮನೆ ಅನುಸರಿಸಿದರಾಯಿತು;ಜಯನಿನಗೆ ಕಟ್ಟಿಟ್ಟದ್ದು .
ಮೊಟ್ಟಮೊದಲನೆಯದಾಗಿ ನಿನಗೆ ಕೊಡಲಿಚ್ಚಿಸುವ ಸಲಹೆಯೆಂದರೆ , ನೀನು ಬೆಳಗ್ಗೆ ಎದ್ದ ಕೂಡಲೇ ಶೌಚಾದಿಗಳನ್ನುಮುಗಿಸಿಕೊಂಡು ದೇವರಿಗೆ,ತಾಯಿಗೆ, ತಂದೆಗೆ ಪ್ರಣಾಮ ಸಲ್ಲಿಸಬೇಕು.ಈ ಕಾರ್ಯದಿಂದ ನಿನ್ನ ದಿನಚರಿ ಪ್ರಾರಂಭವಾಗಬೇಕು , ನಿನ್ನೆಲ್ಲ ಯಶಸ್ಸಿಗೆ,ಪ್ರಯತ್ನದ ಸಫಲತೆಗೆ ದೇವರ ಹಾಗೂ ಗುರುಹಿರಿಯರ ಆಶೀರ್ವಾದವೇ ಮುಖ್ಯ ಎಂಬ ವಿಷಯದಲ್ಲಿ ನಿನಗೆಸಂಶಯ ಬಾರದಿರಲಿ . ಸರಿಯಾದ ಪ್ರಯತ್ನ ಮಾಡಿದರೆ ಅದಕ್ಕೆ ತಕ್ಕ ಫಲ ಬಂದೇ ಬರುತ್ತದೆ ಎನ್ನುವುದು ನಿಜವೇ .ಆದರೆಸರಿಯಾದ ಪ್ರಯತ್ನದಲ್ಲಿ ತೊಡಗುವುದಕ್ಕೆ ಬೇಕಾದ ಮನಸ್ಥಿತಿಯನ್ನು ಕೊಡುವುದು ದೇವರ, ಗುರುಹಿರಿಯರ ಆಶೀರ್ವಾದ . ಈಆಶೀರ್ವಾದದ ಮಹಿಮೆಯನ್ನು ಈಗ ನಾನೆಷ್ಟೇ ವರ್ಣೆಸಿದರೂ ನಿನಗದು ಸರಿಯಾಗಿ ಅರ್ಥವಾಗುವುದು ನೀನು ಸಾಕಷ್ಟುಪ್ರಾಯಪ್ರಬುದ್ದನದ ಮೇಲೆಯೇ . ಆದರೂ ತತ್ಕಾಲಕ್ಕೆ ಈ ಮಾತಿನಲ್ಲಿ ನಂಬಿಕೆಯಿಟ್ಟು ನಡೆಯಲು ಯತ್ನಿಸು . ಇನ್ನೊಂದು ಸ್ವಾರಸ್ಯವೆಂದರೆ , ಆಶೀರ್ವಾದವನ್ನು ನೀನು ಬಾಯ್ಬಿಚ್ಚಿ ಕೇಳಬೇಕಾಗಿಲ್ಲ . ಭಕ್ತಿಯಿಂದ ಮಣಿದಾಗ ದೇವರ ಹಾಗೂ ಗುರುಹಿರಿಯರಹೃದಯದಿಂದ 'ಇವನಿಗೆ ಶುಭವಾಗಲಿ'ಎಂಬ ಆಶೀವಾರ್ದದ ಭಾವ ತಾನಾಗಿಯೇ ಹರಿದು ಬರುತ್ತದೆ.
ಈಗ ನಿನಗೆ ವೇಳಾಪಟ್ಟಿಯ ಮಹತ್ವವನ್ನು ತಿಳಿಸಲೆತ್ನಿಸುತ್ತೇನೆ.ನಿನ್ನ ಶಾಲೆಯಲ್ಲಿ ಪ್ರಾರ್ಥನೆ ಪಾಠ ಆಟ ಈ ಎಲ್ಲವೂಸುಸೂತ್ರವಾಗಿ ನಡೆಯುವುದನ್ನು ಕಾಣುತ್ತಿರುವೆಯಷ್ಟೇ?. ಶಾಲಾ ಅಧ್ಯಾಪಕರು ಹಾಕಿಕೊಂಡಿರುವ ವೇಳಾಪಟ್ಟಿಯೇ ಆಸುಸುತ್ರತೆಯ ಗುಟ್ಟು.ದಿನಕ್ಕೆ ಸುಮಾರು ಏಳೆಂಟು ಕಾಲಾವಧಿ ಗಳಲ್ಲಿ ಬಗೆಬಗೆಯ ವಿಷಯಗಳ ಮೇಲೆ ಸ್ವಲ್ಪಸ್ವಲ್ಪವೇ ಪಾಠಪ್ರವಚನಗಳನ್ನು ನಡೆಸುತ್ತ ನಿಮಗೆ ಎಷ್ಟೊಂದು ಪಟ್ಯ ಪುಸ್ತಕಗಳ ಅಭ್ಯಾಸ ಮಾಡಿಸುತ್ತಾರೆ ನೋಡು!. ಆದರೂ ಇಂದಿನವಿದ್ಯಾರ್ಥಿಗಳು ಈ ಗುಟ್ಟನ್ನು ಅರಿತುಕೊಳ್ಳುವುದೇ ಇಲ್ಲ.ಬದಲಾಗಿ ಅವರು ಮನೆಗೆ ಬಂದು , ಮಾಡಿದ ಪಾಠ ಗಳ ಪುನರಾವರ್ತನೆಮಾಡದೆ, ಅತಿಯಾದ ಆಟ,ಟಿ.ವಿ.ಕಥೆ.ಕಾದಂಬರಿ ಹಾಗೂ ಅಲೆದಾಟಗಳಲ್ಲೇ ಮೈಮರೆತು ಕೊನೆಗೆ ಪರೀಕ್ಷೆ ಸಮೀಪಿಸಿದಾಗಮೈತಿಳಿದು ಎಲ್ಲ ಪಟ್ಯಪುಸ್ತಕಗಳನ್ನು ಒಟ್ಟಿಗೆ ಓದಿ ತಲೆಗೆ ತುಂಬಿಸಿಕೊಳ್ಳುತ್ತೆವೆಂದು ಪ್ರಯತ್ನಿಸಿ ,ಅದು ಸಾಧ್ಯವಾಗದೆ ತಲೆಕೆಡಿಸಿಕೊಂಡು ಕಂಗಾಲಾಗುವ ದೃಶ್ಯ ಸರ್ವೇ ಸಾಮಾನ್ಯ.
-ಎ.ಟಿ .ನಾಗರಾಜ
+ 91 9632172486
ಡಬ್ಲ್ಯು ,ಡಬ್ಲ್ಯು, ಡಬ್ಲ್ಯು. ಸನ್ನ್ಯಾಚುರಲ್ ಫ್ಲಾಶ್ .ಕಂ/
ಶುಕ್ರವಾರ, ಮೇ 28, 2010
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಈ ಪುಸ್ತಕ ಬೇಕಾಗಿದೆ ಲೇಖಕಕರಾರು
ಪ್ರತ್ಯುತ್ತರಅಳಿಸಿ