ವಿದ್ಯಾರ್ಥಿಗೊಂದು ಪತ್ರ
ಪ್ರಿಯ ಸೋಮಶೇಖರ
ನಿನ್ನ ಪತ್ರ ತಲುಪಿತು.ನಿನ್ನ ಅಸಹಾಯಕ ಪರಿಸ್ಥಿತಿಯ ಅರಿವೂ ಆಯಿತು.ಗ್ರಾಮಾಂತರ ಶಾಲೆಯ ವಿದ್ಯಾರ್ಥಿಯಾದ ನಿನಗೆ ಕೆಲವು ಅನನುಕುಲತೆಗಳಿವೆ ಎಂಬುದು ನಿಜವಾದರೂ ಹಲವಾರು ಅನುಕೂಲತೆಗಳು ಇವೆ ಎಂಬುದನ್ನು ನೀನು ಮರೆಯಬಾರದು . ಪೇಟೆ ಪಟ್ಟಣ ನಗರಗಳಲ್ಲಿರುವ ವಿದ್ಯಾರ್ಥಿಗಳ ಅಧ್ಯಯಾನಕ್ಕೆ ಅಡ್ಡಿ ಆತಂಕಗಳು ಅಧಿಕವೆಂದೇ ಹೇಳಬೇಕು. ಟಿ.ವಿ.ಸಿನೆಮಾ , ಹೋಟೆಲುಗಳು , ಲೌಡ್ ಸ್ವೀಕರ್ ಅರಚಾಟದಿಂದ ಉಂಟಾಗುವ ಶಬ್ದಮಾಲಿನ್ಯ , ಇನ್ನು ಏನೇನೋ , ಗ್ರಾಮಾಂತರ ಪ್ರದೇಶದ ಪರಿಶುದ್ದ ಹವಾಗುಣದಿಂದ ಕೂಡಿದ ಪ್ರಶಾಂತ ವಾತಾವರಣವೊಂದೆ ಸಾಕು. ಏಕಾಗ್ರತೆಯಿಂದ ಕುಳಿತು ಅಧ್ಯಯನ ಮಾಡಲು. ಪಟ್ಟಣಗಳ ವಿಧ್ಯ್ಯಾರ್ಥಿಗಳಿಗೆ ಅನೇಕ ಅನುಕೂಲತೆಗಳಿವೆ ಎಂಬ ಮಾತನ್ನು ಅಲ್ಲಗಳೆಯುವುದಿಲ್ಲ ನಾನು.ಆದರೆ ಈ ವಿದ್ಯ್ಯಾರ್ಥಿಗಳು ಪೋಲಿತನಕ್ಕೆ ಬಲಿಬೀಳುವ ಸಂಭವ ಹೆಚ್ಚು.ಆದ್ದರಿಂದ ಅವರ ತಾಯ್ತಂದೆಯರು , ಅಧ್ಯಾಪಕರು ಅವರನ್ನು ರಕ್ಷಿಸಲು ಅದೆಷ್ಟು ಪರಿಪಾಟು ಪಡಬೇಕಾಗುತ್ತದೆಎಂಬುದನ್ನು ತಿಳಿದಿರಬೇಕು ನೀನು. ನಗರಗಳಲ್ಲಿ ಆದರ್ಶದಿಂದ ಜಾರಲು ನೂರಾರು ದಾರಿಗಳಿವೆ . ತಮ್ಮ ಹುಡುಗರನ್ನು ಯಾವದೋ ಒಂದು ಜಾರುದಾರಿಯಿಂದ ತಪ್ಪಿಸಿದ ಮಾತ್ರಕ್ಕೆ ತಾಯ್ತಂದೆ ಯರು ಸುಮ್ಮನೆ ಕುಳಿತಿರುವಂತಿಲ್ಲ
ಇತರ ಜಾರುದಾರಿಗಳತ್ತ ಹೋಗದಂತೆ ಕಣ್ಣಲ್ಲಿ ಕಣ್ಣಿಟ್ಟು ಕಾಯಬೇಕಾಗುತ್ತದೆ.
ಆ ವಿಷಯ ಹಾಗಿರಲಿ.'ನಾನೀಗ ಎಸ್ಸೆಸ್ಸೆಲ್ಸಿ ತರಗತಿಗೆ ಬಂದಿದ್ದೇನೆ.ಪಾಠ ಪ್ರವಚನಗಳು ಪ್ರಾರಂಭವಾಗಿವೆ . ಆದರೆ ಎಷ್ಟೋ ವಿಷಯಗಳು ಅರ್ಥವೇ ಆಗುತ್ತಿಲ್ಲ' ಎಂದು ಬರೆದಿರುವೆ.ಇನ್ನೊಬ್ಬ ವಿದ್ಯಾರ್ಥಿಯು ಒಂದು ಪತ್ರ ಬರೆದಿದ್ದಾನೆ.. ಅವನ ಅಧ್ಯಾಪಕರು ಸರಿಯಾಗಿ ಪಾಠವನ್ನೇ ಮಾಡುವುದಿಲ್ಲವಂತೆ . ಅರ್ಥವಾಗದ ವಿಷಯವನ್ನು ಕೇಳಿದರೆ ಉತ್ತರ ಹೇಳುವುದೂ ಇಲ್ಲವಂತೆ . ಅದು ಅವನ ದುರದೃಷ್ಟ . ನಿನ್ನ ಅಧ್ಯಾಪಕರು ಚೆನ್ನಾಗಿ ಪಾಠ ಮಾಡುತ್ತಾರಲ್ಲ. ಅದು ನಿನ್ನ ಪುಣ್ಯ!.
........ಮುಂದುವರಿಯುವುದು.ಪ್ರತಿದಿನ ಓದಿ
ಈ ಅಂಕಣಕ್ಕೆ ನಿಮ್ಮ ಪ್ರಶ್ನೆಗಳನ್ನು ಕಳುಹಿಸುವಾಗ ಎಂಎಲ್ಎಂಗುರುನಗ್ಅಟ್ ಜಿಮೇಲ್ ಡಾಟ್ ಕಂ ಗೆ ಕಳುಹಿಸಬೇಕು. ನಿಮ್ಮ ಪೂರ್ಣ ಹೆಸರು , ವಿಳಾಸ ನಮೂದಿಸಿ. ದೂರವಾಣಿಯೂ ಇರಲಿ
ವಂದನೆಗಳೊಂದಿಗೆ
ನಿಮ್ಮ ನೆಟ್ನಾಗ
ಎ.ಟಿ .ನಾಗರಾಜ
+೯೧-9632172486
ಗುರುವಾರ, ಮೇ 27, 2010
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
Book beku sir
ಪ್ರತ್ಯುತ್ತರಅಳಿಸಿGood
ಪ್ರತ್ಯುತ್ತರಅಳಿಸಿ