ಇತ್ತೀಚಿನ ದಿನಗಳಲ್ಲಿ ನಮ್ಮ ಯುವಕರು- ಯುವತಿಯರು ತಮ್ಮ ಪೋಷಕರಿಗೆ ಗೊತ್ತಾಗದಂತೆ ಒಬ್ಬರೊಬ್ಬರನ್ನು ಪ್ರೀತಿಸಿ ಮದುವೆ ಮಾಡಿಕೊಳ್ಳುವುದು ಹೆಚ್ಚಾಗಿ ಕಂಡು ಬರುತ್ತಿದೆ. ಅದರಲ್ಲೂ ಹೆಚ್ಚು ಆದಾಯ ವಿಲ್ಲದ , ಹೆಚ್ಚು ವಿಧ್ಯಾಭ್ಯಾಸ ವಿಲ್ಲದ ಯುವಕ -ಯುವತಿಯರೇ ಹೆಚ್ಚು. ಮನೆಯವರಿಗೆ ಗೊತ್ತಿಲ್ಲದಂತೆ ಎಲ್ಲೋ , ಹೇಗೋ ಮದುವೆ ಮಾಡಿಕೊಳ್ಳುತ್ತಾರೆ. ಸ್ವಲ್ಪ ದಿನ ಅಡಗಿಕೊಳ್ಳುವ ಆಟ ವಾಡಿ ಕೊನೆಗೆ ತಮ್ಮ ತಮ್ಮ ಮನೆಗಳಿಗೆ ಭೇಟಿನೀಡುತ್ತಾರೆ. ಆದರೆ ಮನೆಯ ಮರ್ಯಾದೆ ಹೋಯಿತು ಎಂದು ಹೆಣ್ಣು ಮತ್ತು ಗಂಡಿನ ಮನೆಯವರಿಬ್ಬರೂ ಯಾರಿಗೂ ಸಹಾಯ ಮಾಡುವುದಿಲ್ಲ. ಆ ಒಂದು ಹಿನ್ನೆಲೆಯಲ್ಲಿ ಮನೆಬಿಟ್ಟು ಹೊರಬೀಳುತ್ತಾರೆ. ಪರಸ್ಪರರಲ್ಲಿ ಜಗಳ ಪ್ರಾರಂಭವಾಗುತ್ತದೆ. ಕೆಲವೊಮ್ಮೆ ಕೊಲೆ ಆಗಿಬಿಡುತ್ತದೆ. ಆತ್ಮ ಹತ್ಯೆ ಆಗಿ ಬಿಡುತ್ತದೆ. ವಿವಾಹ ವಿಚ್ಚೇದನವೂ ಆಗುವುದುಂಟು. ಏನೇ ಇರಲಿ ಇಂತಹ ಸಂದರ್ಭದಲ್ಲಿ ಹಿರಿಯರಾದವರೂ ಕಿರಿಯರಾದವರನ್ನೂ ಕ್ಷಮಿಸಬೇಕಲ್ಲವೇ ?. ಇಂತಹವರಿಗೆ ಒಂದು ಬುದ್ಧಿವಾದ ನೀಡುವುದು. ನವ ದಂಪತಿ ಗಳಿಬ್ಬರನ್ನೂ ಒಂದೇ ಕಡೆ ದುಡಿಯುವಂತೆ ಮಾಡಿದರೆ ಎಷ್ಟೋ ಸಹಾಯಮಾಡಿದಂತೆ ಆಗುತ್ತದೆ ಅಲ್ಲವೇ. ಈ ಒಂದು ಉದ್ದೇಶದಿಂದ ನಿಮ್ಮಲ್ಲಿ ಕೇಳಿ ಕೊಳ್ಳುವುದು ಇಷ್ಟೇ "ಬದುಕು ಕಟ್ಟುವವರಿಗೆ ನೀವು ಸಹಾಯ ಮಾಡಿ ".
ವಂದನೆಗಳೊಂದಿಗೆ
ಎ.ಟಿ.ನಾಗರಾಜ
ನೇರ ಮಾರುಕಟ್ಟೆ ಪ್ರತಿನಿಧಿ ಮತ್ತು ವ್ಯಕ್ತಿತ್ವ ವಿಕಾಸನ ತರಬೇತಿಧಾರ
ಭಾರತ ಜನನೀಯ ತನುಜಾತೆ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ