' ನೆಂಟರೆಂಬ ಅವಿವೇಕಿಗಳು ಬರುತ್ತೇನೆ ಎನ್ನುವವರು ಬರುವುದಿಲ್ಲ '. ಈ ಶೀರ್ಷಿಕೆ ಯಡಿ ಒಂದು ಲೇಖನ ಬರೆಯಬೇಕೆನಿಸಿತು . ಕಾರಣ ಇಷ್ಟೇ, ಎಷ್ಟೋ ಜನರ ಮನೆಗಳಲ್ಲಿ ಹೆಣ್ಣು ಮಕ್ಕಳು, ಅಥವಾ ಗಂಡು ಮಕ್ಕಳು ಮದುವೆಗೆ ಇದ್ದೆ ಇರುತ್ತಾರೆ. ಹಾಗೆಯೇ ಎಷ್ಟೋ ಜನ ಹೆಣ್ಣು, ಹಾಗೂ ಗಂಡಿನ ತಂದೆತಾಯಿಗಳು , ಸಂಭಂಧಿಕರು , ಅಥಾವ ಯಾರೂ ಇಲ್ಲದಿದ್ದರೆ ಧೈರ್ಯವಾಗಿ ಆ ಕರ್ತವ್ಯವನ್ನು ಹೆಣ್ಣು ಅಥವಾ ಗಂಡೆ ತಮಗೆ ಬೇಕಾದ ವದು ಅಥವಾ ವರರ ಅನ್ವೇಷಣೆ ಮಾಡಬೇಕಾಗುತ್ತದೆ. ಈಗಾಗಲೆ ವಧುವರರ ಅನ್ವೇಷಣೆ ಕೇಂದ್ರ ತೆರೆದು ಕೋಟಿ ಘಟ್ಟಲೆ ಹಣ ಸಂಪಾಧಿಸುತ್ತಿದ್ದಾರೆ ಅದರ ಯಜಮಾನರು !.
ಈ ಹೆಣ್ಣು ಅಥವಾ ಗಂಡಿನ ಬಗ್ಗೆ ಜಾಹೀರಾತಿನಲ್ಲಿ ವಿವರವಾದ ಮಾಹಿತಿ ಇದ್ದರೆ ಹಲವಾರು ಜನ ಕರೆಮಾಡುವುದು, ಇ-ಮೇಲ್ ಕಳುಹಿಸುವುದು ಮಾಡುತ್ತಾರೆ. ಇನ್ನೂ ಕೆಲವು ಗಂಡಿನ ಕಡೆಯವರು ಇಂದು ಬರುತ್ತೇವೆ , ನಾಳೆ ಬರುತ್ತೇವೆ ಎಂದೂ ಹೆಣ್ಣಿನ ಕಡೆಯವರನ್ನು ಗಂಡಿನ ಕಡೆಯವರು, ಗಂಡಿನ ಕಡೆಯವರನ್ನು ಹೆಣ್ಣಿನ ಕಡೆಯವರು ಸತಾಯಿಸುವುದು ವುಂಟು . ಆದರೆ ಹೆಣ್ಣಿನ ಕಡೆಯವರು ತಾವು ಅವರಿಗೆ ಹೆಣ್ಣು ಕೊಡುವವರು ನಾವು ದೊಡ್ಡವರು ಎಂದೂ , ಗಂಡಿನ ಕಡೆಯವರು ನಾವು ಅವರ ಮಗಳನ್ನು ಮಾಡುವೆ ಯಾಗುವವರು ದೊಡ್ಡವರೆಂದು ಶೀತಲ ಸಮರ ಒಳಗಿಂದೊಳಗೆ ನಡೆಸಿಕೊಳ್ಳುವುದು ಉಂಟು. ಈ ಬೆಂಗಳೂರಿನಂತ ನಗರಗಳಲ್ಲಿ ಯಾರಿಗೂ ವೇಳೆ ಸಿಗುವುದು ಅಪರೂಪ . ಅಂತವರು ಅವರೇ ತಮ್ಮ ವೇಳೆಯನ್ನು ನಿರ್ಧರಿಸಿಕೊಂಡು , ತಾಳ್ಮೆಯನ್ನು ತಂದು ಕೊಂಡು ಸಂಭಂಧವನ್ನು ಕುದುರಿಸಿಕೊಳ್ಳುವುದು ಸರ್ವೇಸಾಮಾನ್ಯ !.
ಯಾವಾಗ ಗಂಡಿನ ಕಡೆಯವರು ಬರುತ್ತೇನೆ ಎಂದೂ ಬರುವುದಿಲ್ಲವೋ ಆಗ ಹೆಣ್ಣಿನ ಕಡೆಯವರು ಸ್ವಲ್ಪ ಅನುಮಾನವನ್ನು ಗಂಡಿನ ಕಡೆ ಪಟ್ಟುಕೊಂಡು ನೆಂಟಸ್ಥನದಿಂದ ದೂರ ಸರಿಯಲು ಯತ್ನಿಸುತ್ತಾರೆ. ಈಗ ನಮ್ಮ ಹೆಣ್ಣನ್ನು ಕೊಡುವುದಕ್ಕಿಂತ ಮುಂಚೆಯೇ ಈ ರೀತಿ ಆದರೆ ಮದುವೆ ಮಾಡಿಕೊಟ್ಟ ಮೇಲೆ ನಮ್ಮ ಹೆಣ್ಣ ನ್ನಾಗಲಿ , ನಮ್ಮನ್ನಾಗಲಿ ಸರಿಯಾಗಿ ಮರ್ಯಾದೆ ಕೊಟ್ಟು ನೋಡಿಕೊಳ್ಳುತ್ತಾರೆ ಎನ್ನುವುದು ಏನೂ ಗ್ಯಾರೆಂಟಿ . ಹೀಗೆಲ್ಲ ಪ್ರಶ್ನೆಗಳು ಏಳುತ್ತವೆ. ಇನ್ನೂ ಕೆಲವು ಜನ ಅವಿವೇಕಿಗಳು ಎಲ್ಲಿ ಹೆಣ್ಣು ಅಥವಾ ಗಂಡು ಯಾರು ಯಾರ ಮನೆಯಲ್ಲಿ ಇದೆಯೋ ಅವರೆಲ್ಲರ ಮನೆಗೆ ಹೋಗಿ ಹೆಣ್ಣು ಅಥಾವ ಗಂಡನ್ನು ನೋಡಿ ಕೊನೆಗೆ ಯಾವುದೋ ಒಂದು ಹೆಣ್ಣನ್ನು ಆಯ್ಕೆ ಮಾಡಿಕೊಳ್ಳುತ್ತಾರೆ . ಮದುವೆಯಾದ ಮೇಲೆ ಮದುವೆ ಯಾದ ಹೆಣ್ಣಿಗಿಂತ ಹಿಂದೆ ನೋಡಿದ ಹೆಣ್ಣೇ ಚೀನ್ನಾಗಿತ್ತು ಎಂಬ ಒಂದು ಹಂಬಲ. ಏನೇ ಇರಲಿ ಹೆಣ್ಣಿನ ಕಡೆಯವರಾಗಲಿ , ಗಂಡಿನ ಕಡೆಯವರಾಗಲಿ ಯಾರೂ ಒಬ್ಬರಿಗೊಬ್ಬರೂ ದೊಡ್ಡವರಲ್ಲ . ಎಲ್ಲರೂ ಸಮಾನರು. ಹಾಗಾಗಿ ಈ ರೀತಿ ಸತಾಯಿಸುವುದು ಒಳ್ಳೆಯದಲ್ಲ. ಬರುತ್ತೇವೆ ಅಥವಾ ಬರುವುದಿಲ್ಲ ಎಂಬುವುದು ಕಡ ಕಂಡಿತವಾಗಿ ಹೇಳಿ ಮಾತನ್ನು ಮುಗಿಸುವುದು ಉತ್ತಮೆ.
ನಿಮಗಾಗಿ ಒಂದು ಉತ್ತಮ ಅವಕಾಸ ಇದೆ ವೀಕ್ಷಿಸಿ .
ನಿಮ್ಮ ಅನಿಸಿಕೆ , ಅಭಿಪ್ರಾಯ , ನೇರ ಮಾರುಕಟ್ಟೆ ಯ ಬಗ್ಗೆ ತಿಳಿಯಲು ಈ ಕೆಳಗಿನ ಈ ಮೇಲ್ ವಿಳಾಸಕ್ಕೆ ಬರೆಯಿರಿ .
ವಿಧ್ಯಾರ್ಥಿಗಾಗಿ ಒಂದು ವಿಡಿಯೋ ವೀಕ್ಷಿಸಲು ಈ ಕೆಳಗಿನ ವಿಡಿಯೋ ಕ್ಲಿಕ್ ಮಾಡಿ
ಒಂದು ಉತ್ತಮ ಹಾಡು ನಿಮಗಾಗಿ , ನಿಮ್ಮ ಸಂತೋಷಕ್ಕಾಗಿ
ನಿಮ್ಮ ಪ್ರೀತಿ ಹಾಗೂ ವಿಶ್ವಾಸಗಳನ್ನು ಕದಿಯುವ
ಎ.ಟಿ.ನಾಗರಾಜ
ನೇರ ಮಾರುಕಟ್ಟೆ ಪ್ರತಿನಿಧಿ ಮತ್ತು ವ್ಯಕ್ತಿತ್ವ ವಿಕಾಸನ ತರಭೆತಿಗಾರ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ