ಎಲ್ಲರಿಗೂ ಯುಗಾದಿ ಹಬ್ಬದ ಸುಭಾಶಯಗಳು . ಗ್ರಾಮೀಣ ಪ್ರದೇಶಗಳಲ್ಲಿ ಈ ಹಬ್ಬ ಬಂತೆಂದರೆ ಒಂದು ರೀತಿಯ ಸಡಗರ ಜತೆಗೆ ಒಂದು ರೀತಿಯ ತಲೆನೋವು , ಯಾಕೆಂದರೆ ಕೈಯಲ್ಲಿ ಹಣಬೇಕಲ್ಲವೇ ? . ಮಕ್ಕಳು ಬಟ್ಟೆ ಬೇಕು ಎಂದು ಹೇಳಿದರೆ , ಅಡುಗೆ ಮನೆಯಲ್ಲಿದ್ದ ಹೆಂಗಸರು ಸಾಮಾನುಗಳ ಪಟ್ಟಿ, ತಂದೆ -ತಾಯಿ, ಅಕ್ಕ, ತಮ್ಮ , ಹೀಗೆ ಎಲ್ಲರದ್ದೂ ಒಂದೊಂದು . ಏನೇ ಇರಲಿ ಈ ಹಬ್ಬ ಕೆಲವರಿಗೆ ಸುಖ ವನ್ನು ಸಂತೋಷವನ್ನು ತಂದು ಕೊಟ್ಟರೆ ಕೆಲವರಿಗೆ ಈ ಹಬ್ಬ ವೆನ್ನುವುದು ಜೀವನದ ದೊಡ್ಡ ಬರೆ ಆಗಿ ಬಿಡುತ್ತದೆ. ಯಾಕೆಂದರೆ ನಿನ್ನೆ ತಾನೇ ಹಬ್ಬಕ್ಕಾಗಿ ಸಾಮಾನು ತಂದು ಇಂದು ಹಬ್ಬ ಎಲ್ಲರೂ ಕೂಡಿ ಸಂತೋಷದಿಂದ ಮಾಡಬೇಕು ಎಂದು ನೆನಸಿಕೊಂಡರೆ ಇಂದು ನೋಡಿದರೆ ನೋವಿನ ಛಾಯೆ ಮನೆಯ ಬಾಗಿಲಲ್ಲಿ ನಿಂತುಕೊಂಡಿರುತ್ತದೆ. ಏನೇ ಇರಲಿ ಎಲ್ಲರೂ ಒಟ್ಟಾಗಿ ಅನುಸರಿಸಿಕೊಂಡು ಹಬ್ಬ ಮಾಡಿ. ಇಲ್ಲಿ ಅಧಿಕಾರದ ದುರುಪಯೋಗ ವಾಗಲಿ, ಹಿರಿಯರು ಕಿರಿಯರ ಮೇಲೆ ಅಧಿಕಾರ ಚಲಾಯಿಸುವುದಾಗಲಿ ಬೇಡ. ಪ್ರತಿಯೊಬ್ಬರಿಗೂ ಪ್ರತಿಯೊಬ್ಬರೂ ದೊಡ್ದವರೆನ್ನುವುದು ಗೊತ್ತು. ಅನುಸರಿಸಿಕೊಂಡು ಬಾಳಿ. ಇರುವ ಮೂರ್ನಾಲ್ಕು ಎಕ್ಕರೆ ಜಮೆನಿಗಾಗಿ ಅಣ್ಣ ತಮ್ಮರಲ್ಲಿ ಕಿತ್ತಾಟ ಬೇಡ. ದೇವರ ಬೂಮಿ ತುಂಬಾ ದೊಡ್ಡದಿದೆ. ಹೊರಡಿ ಮನೆ ಬಿಟ್ಟು. ಶಾಂತಿಯ ಕಡೆ, ನೆಮ್ಮದಿಯ ಕಡೆ, ಎಲ್ಲೋ ನಿಮಗೆ ಒಂದು ಆನಂದ ಸಿಗುತ್ತದೆ. ಆಸರೆ ಸಿಗುತ್ತದೆ. ಏನೇ ಆಗಲಿ ಈ ಹಬ್ಬ ತುಂಬಾ ಚೆನ್ನಾಗಿ ಆಚರಿಸಿ. ನನಗೂ ನಿಮ್ಮ ಸಿಹಿ ಸಂದೇಶ ಹರಿದು ಬರಲಿ.
ವಂದನೆಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ
ಎ.ಟಿ.ನಾಗರಾಜ
ನಿಮಗಾಗಿ ಒಂದು ವಿಡಿಯೋ ಇಲ್ಲಿದೆ ನೀವು ನೋಡಲು ಪ್ರಯತ್ನ ಮಾಡಿ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ