ನಾನು ಓದಿದ್ದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರಂ -ದಾಸಕೊಪ್ಪದ ಸರಕಾರೀ ಹೈಸ್ಕೂಲ್ ನಲ್ಲಿ ಎಂಟನೆ ತರಗತಿಯಿಂದ ಹತ್ತನೇ ತರಗತಿ. ಆ ವೇಳೆಗೆ ನಮಗೆ ಇತಿಹಾಸ ವನ್ನು ಭೋಧಿಸಲು ಚೆನ್ನಾಗಿರಿ ಮೂರ್ತಿ ಎನ್ನುವ ಉಪಾಧ್ಯಾಯರು ಇದ್ದರು. ಅವರು ಯಾವಾಗಲು ಒಂದು ಮಾತನ್ನು ಹೇಳುತ್ತಿದ್ದರು "ಮುತ್ತು ಕಳೆದರೆ ಸಿಗುವುದು ಹೊತ್ತು ಹೋದರೆ ಬಾರದು " ಎಂದು . ಅಂದರೆ ನಮ್ಮಲ್ಲಿರುವ ಬಂಗಾರ , ಚಿನ್ನ, ಹೊನ್ನು, ಮುತ್ತು ಏನೇ ಕಳೆದು ಹೋದರೆ ದುಡಿದು ಹೊಸದೊಂದನ್ನು ಸಂಪಾದಿಸಬಹುದು . ಆದರೆ ಕಾಲ ಎಂಬುದು ಕಳೆದು ಹೋದರೆ ಅದೇ ಕಾಲವನ್ನು ಮತ್ತೆ ಪಡೆಯಲು ಸಾಧ್ಯವಿಲ್ಲವೆಂದು !. ಹಾಗಾಗಿ ನಮ್ಮ ಯುವಕರು , ವಿಧ್ಯಾರ್ಥಿಗಳು ಸರಿಯಾಗಿ ಕಾಲವನ್ನು ಉಪಯೋಗಿಸಿಕೊಂಡು ಮುಂದೆಬರಬೇಕು.
ವಿಧ್ಯಾರ್ಥಿಗಾಗಿ ಒಂದು ವಿಡಿಯೋ
ಒಬ್ಬ ಯಶಸ್ವಿ ವ್ಯಕ್ತಿಯ ಒಂದು ಅನುಭವ ಕೇಳಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
ವಂದನೆಗಳೊಂದಿಗೆ
ಎ.ಟಿ.ನಾಗರಾಜ
ನೇರ ಮಾರುಕಟ್ಟೆ ಪ್ರತಿನಿಧಿ ಮತ್ತು ವ್ಯಕ್ತಿತ್ವ ವಿಕಾಸನ ತರಭೆತಿಗಾರ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ