"ಕಿರಿಯರಿಗೆ ಹಿರಿಯ ಜವಾಬ್ಧಾರಿ ಹೊರಿಸುವುದು ಮೂರ್ಖತನ "!. ಇದು ತುಂಬಾ ಆಶ್ಚರ್ಯ !. ಕೆಲವು ಬೆರಳೆಣಿಕೆ ಜನ ತಮ್ಮ ಜವಾಬ್ಧಾರಿಯನ್ನು ಜವಾಬ್ಧಾರಿತನದಿಂದ ನಡೆಸಿಕೊಂಡು, ನಿರ್ವಾಹಿಸಿಕೊಂಡು ಹೋಗಿರಬಹುದು ಅಂಥವರ ಬಗ್ಗೆ ನಾನಿಲ್ಲಿ ಹೇಳುತ್ತಿಲ್ಲ.. ಕೆಲವು ಮನೆಗಳಲ್ಲಿ ವಯಸ್ಸಾದ ,ಖಾಯಿಲೆ ಯಿಂದ ನರಳುವ ತಂದೆ ತಾಯಿಗಳು, ಜತೆಗೆ ಸೊಮಾರಿಗಳಾದ, ಯಾವುದೇ ಜವಾಬ್ಧಾರಿಯನ್ನು ಹೊರದ ಮನೆಯ ಹಿರಿಯರು ಇರುತ್ತಾರೆ. ಪಾಪ ಅದೇ ರೀತಿ ಮದುವೆಗೆ ಬಂದ ಹೆಣ್ಣು ಮಕ್ಕಳು ಇರುತ್ತಾರೆ. ಆ ಒಂದು ವೇಳೆಯಲ್ಲಿ ತಂದೆ -ತಾಯಿಗಳು ಮನೆಯ ಕಿರಿಯ ವ್ಯಕ್ತಿಗಳಿಗೆ ಜವಾಬ್ಧಾರಿಯನ್ನು ಹೊರಿಸುವುದು ರೂಡಿ. ಒಂದೊಂದು ವೇಳೆ ಇದು ಮೂರ್ಖತನ ವಾಗುವುದುಂಟು. ಇದಕ್ಕೆ ಒಂದು ನಿದರ್ಶನ ಇಲ್ಲಿದೆ.
ಪಿರ್ದೊಶ್ ಎಂಬ ಒಬ್ಬ ಮುಸ್ಲಿಂ ಸ್ನೇಹಿತ ನಿದ್ದಾನೆ. ಆತನ ಮನೆಯಲ್ಲಿ ಆತನ ತಂದೆ ತಾಯಿಗಳಿಗೆ ಆರೋಗ್ಯ ಸರಿಯಿಲ್ಲ. ಅಣ್ಣ ಯಾವುದೇ ಜವಾಬ್ಧಾರಿ ಹೊರುವವನಲ್ಲ . ಮನೆಯಲ್ಲಿ ಮದುವೆಗೆ ಬಂದ ಮೂರು ಜನ ಸಹೋದರಿಯರು. ಈತನಿಗೆ ತನ್ನ ಸಹೋದರಿಯರಿಗೆ ವರ ನೋಡಲು ಹೇಳಿದರೆ ಒಂದೆರಡು ಬಾರಿ ತುಂಬಾ ಪ್ರಾಮಾಣಿಕವಾಗಿ ತನ್ನ ಕೆಲಸ ನಿರ್ವಹಿಸಿದ . ಆದರೆ ಕೊನೆ ಕೊನೆಗೆ ಈತನಿಗೆ ಒಬ್ಬಳು ಹುಡುಗಿ ಈತನನ್ನು ಪ್ರೀತಿಸತೊಡಗಿದಳು. ಈಗ ಆತ ಆ ಹುಡುಗಿಯ ಜತೆ ಮರ ಸುತ್ತುತ್ತಿದ್ದಾನೆ. ಏಕೆ ಹೇಳುತ್ತೇನೆ ಎಂದರೆ ನೀವು ಯಾವಾಗಲೂ ನಿಮ್ಮ ಕೆಲಸವನ್ನು ಪ್ರಾಮಾಣಿಕದಿಂದ ಮಾಡಿ. ಸ್ವಾತಂತ್ರವೆಂಬುದು ಜವಾಬ್ಧಾರಿ !.
ವಂದನೆಗಳೊಂದಿಗೆ
ಎ.ಟಿ.ನಾಗರಾಜ
ನೇರ ಮಾರುಕಟ್ಟೆ ಪ್ರತಿನಿಧಿ ಮತ್ತು ವ್ಯಕ್ತಿತ್ವ ವಿಕಾಸನ ಪ್ರತಿನಿಧಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ