MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಗುರುವಾರ, ಏಪ್ರಿಲ್ 7, 2011

bengalooru neeu sarabaraaju mattu olcharandi mandali bagge ondu maatu

   ನಮ್ಮ ಬೃಹತ್ ಬೆಂಗಳೂರಿನ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಬಗ್ಗೆ ಒಂದು ಮಾತನ್ನು ಬರೆಯಲೇ ಬೇಕು ಎಂದೆನಿಸಿತು ಇಂದು .  ಯಾಕೆಂದರೆ ಒಬ್ಬ ಕಾಲ್ ಸೆಂಟರ್ ನ ಅಧಿಕಾರಿಗೆ ಒಬ್ಬ ಇಂಜಿನೀಯರ್ ಕೊಟ್ಟ ಉತ್ತರ ಹಾಗೆಯೇ ಅದೇ ಉತ್ತರವನ್ನು ಸಾರ್ವಜನಿಕರಿಗೆ ರವಾನಿಸಿದ ಕಾಲ್ ಸೆಂಟರಿನ ಅಧಿಕಾರಿಗಳ ಮೂರ್ಖ ತನದ ಒಂದು ಕಹಿ ಘಟನೆ.  
  ಬೆಂಗಳೂರಿನ ಹೃದಯ ಭಾಗದಲ್ಲಿರುವ ಕಮರ್ಷಿಯಲ್ ಸ್ಟ್ರೀಟ್ ಹಾಗೂ ಡಿಸ್ ಪೆನ್ಸರಿ ರಸ್ತೆಯ ನಿವಾಸಿಗಳು ಸುಮಾರು ಹತ್ತು ವರ್ಷಗಳಿಗಿಂತ ಅಧಿಕವಾಗಿ ನೀರನ್ನು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಪಡೆಯುತ್ತಿದ್ದಾರೆ .  ಆದರೂ ಹತ್ತು ವರ್ಷಗಳಿಂದಲೂ ಒಂದು ತಿಂಗಳೂ ಪೂರ್ಣವಾಗಿ ನೀರು ಬಂದಿರುವುದಿಲ್ಲ ವಂತೆ.  ಎಷ್ಟೋ ವೇಳೆ ಕಂಪ್ಲೇಂಟ್ ಕೊಟ್ಟು ,  ಫೋನ್ ಮಾಡಿ.  ಜಗಳ ವಾಡಿ ನೀರು ಬಿಡಿಸಿಕೊಂಡಿದ್ದು ಇದೆ ಅಂತೆ.  ಆದರೆ ಇದುವರೆವಿಗೂ ಅದೇ ನೀರು ಬಾರದಿರುವುದು ,  ಅದೇ ಕಂಪ್ಲೇಂಟ್ ,  ಅದೇ ಕಾಲ್ ಸೆಂಟರಿಗೆ ಕಾಲ್ ಮಾಡುವುದು .ನಂತರ ನೀರು ಬಿಡುವುದು ನಾಟಕ ನಡೆಯುತ್ತಿದೆ ಅಂತೆ.  ಆದರೆ ಯಾವುದೇ ಬಿ.ಡಬ್ಲ್ಯು , ಎಸ್,ಎಸ್ ,ಬಿ. ಯಾ ಅಧಿಕಾರಿಗೆ ಸಂಪೂರ್ಣವಾಗಿ ಸಮಸ್ಯೆಯನ್ನು ಬಗೆಹರಿಸಲು ಆಗಿಲ್ಲವಂತೆ.  

    ನಮ್ಮಲ್ಲಿ ಹಣವಿದೆ .  ಸರಕಾರದಲ್ಲಿ ಬಂಡವಾಳವಿಲ್ಲದಿದ್ದರೆ ನಾವು ಕೊಡುತ್ತೇವೆ.  ಬಿ.ಡಬ್ಲ್ಯು,ಎಸ್,ಎಸ್,ಬಿ ಯವರು ಮುಂದುಬಂದು ಕೆಲಸಮಾಡಲು ಪ್ರಾರಂಭಿಸಿದರೆ ಸಾಕು ಎನ್ನುತ್ತಾರೆ ಅಲ್ಲಿನ ನಿವಾಸಿಗಳು.  ಆದರೆ ಇಂಜಿನೀಯರ್ ಒಂದು ಬಕೆಟೋ, ಎರಡು ಬಕೆಟೋ ನೀರು ಬಂದಿದ್ದರೆ ಮುಗಿಯಿತು.  ನೀರು ಬಂದಿದೆಯೆಂದೆ ಲೆಕ್ಕ ಎಂದು ಕಾಲ್ ಸೆಂಟರ್ ರವರಿಗೆ ಹೇಳಿದರಂತೆ.  ಅದೇ ಉತ್ತರ ಸಾರ್ವಜನಿಕರಿಗೆ ರವಾನಿಸಿದರೆ ಸಾರ್ವಜನಿಕರು ಕಾಲ್ ಸೆಂಟರ್ ಅಧಿಕಾರಿಗಳಿಗೆ ನಾವು ನಮ್ಮ  ಪಾಯಖಾನೆ ಕೆಲಸ ,ಸ್ನಾನದ ಕೆಲಸ ,  ಬಟ್ಟೆ ತೊಳೆಯುವ ಕೆಲಸ,  ಪಾತ್ರೆ ತೊಳೆಯುವ ಕೆಲಸಗಳಿಗಾಗಿ ,  ಹಾಗೂ ಊಟ ಮಾಡಿದ ನಂತರ ಕೈ ತೊಳೆಯಲು ಇಂಜಿನೀಯರ್ ಮನೆಗೆ ಬರಬೇಕೆ ?  ಅಥವಾ ನಿಮ್ಮ ಮನೆಗೆ ಬರಬೇಕೆ ?  ದಯವಿಟ್ಟು ಇಂಜಿನೀಯರ್ ಮನೆ ಅಥಾವ ನಿಮ್ಮ ಮನೆ ವಿಳಾಸ ಕೊಡಿ ನಾವು ನಮ್ಮ ಕೆಲಸ ಮುಗಿಸಿಕೊಂಡು ಹೋಗುತ್ತೇವೆ ಎಂದು ಇಲ್ಲಿನ ಒಬ್ಬ ಧೈರ್ಯವಂತ ಯುವಕ ಬಿ.ಡಬ್ಯು. ಎಸ್,ಎಸ್ ,ಬಿ ಯವರನ್ನು ಕೇಳಿದ್ದನಂತೆ .  ಇದು ಒಂದು ರೀತಿಯ ಮರ್ಯಾದೆಯ ವಿಷಯ ಅಲ್ಲದೆ ಮತ್ತೇನು ?

   ಬೆಂಗಳೂರು ಜಲ ಮಂಡಳಿ ಸಾರ್ವಜನಿಕರಿಗೆ ಪಾಠ ಹೇಳಲು ಹೋದರೆ ಸಾರ್ವಜನಿಕ ಗುರುಗಳು ತಿರುಗಿ ಬೆಂಗಳೂರು ಜಲಮಂಡಳಿಗೆ ಪಾಠ ಕಲಿಸದೆ ಬಿಟ್ಟಾರೆಯೇ ?

ವಂದನೆಗಳೊಂದಿಗೆ 
ಎ.ಟಿ.ನಾಗರಾಜ 
ನೇರ ಮಾರುಕಟ್ಟೆ ಪ್ರತಿನಿಧಿ ಮತ್ತು ವ್ಯಕ್ತಿತ್ವ ವಿಕಾಸನ ಪ್ರತಿನಿಧಿ 
ಒಂದು ವಿಡಿಯೋ ನಿಮ್ಮ ಮನದಲ್ಲಿ ಇರಲಿ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ