ಪ್ರೆಂಡ್ಸ್ ನಾನು ಓದಿದ್ದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರಂ ನ ಸರಕಾರೀ ಪದವಿ ಪೂರ್ವ ಕಾಲೇಜ್ ನಲ್ಲಿ ಪಿ.ಯು. ಸಿ ಅದು ಕಾಮರ್ಸ್ ವಿಭಾಗದಲ್ಲಿ. ಆಗ ನನಗೆ ಹಂದೆ ನಾಗರಾಜ ಎನ್ನುವ ಒಬ್ಬ ಸ್ನೇಹಿತ ನಿದ್ದ. ಆತ ನನಗೆ ನನ್ನ ಏಳನೇ ತರಗತಿಯಿಂದ ಪರಿಚಯ . ಆತ ನಾನು ತುಂಬಾ ಕ್ಲೋಸ್ ಪ್ರೆಂಡ್ಸ್. ಆತ ಏಳನೇ ತರಗತಿ ಗೆ ಬಂದ ಹೊಸದರಲ್ಲಿ ಆತನ ದಕ್ಷಿಣ ಕನ್ನಡ ಜಿಲ್ಲೆಯ ಮಾತು ನಮ್ಮ ಶಿವಮೊಗ್ಗ ದ ಅರೆಮಲೆನಾಡು ವಿದ್ಯಾರ್ಥಿಗಳಿಗೆ ಅರ್ಥವಾಗದೆ ದಕ್ಷಿಣ ಕನ್ನಡ ಭಾಷೆಯ ಪರಿಚಯವಿದ್ದ ನನ್ನನ್ನು ಹುಡುಗರು ಆತ ಹೇಳಿದ ವಿಷಯದ ಬಗ್ಗೆ ಕೇಳುತ್ತಿದ್ದರು. ಒಂದು ಬಾರಿ ಯಾವುದು ವಿಷಯದ ಬಗ್ಗೆ ಮಾತನಾಡುತ್ತಾ ಆ ಹುಡುಗಿ ಮಿಡುಕುತ್ತ್ ಕಾಣ್ ಎಂದು ಯಾರಿಗೋ ಯಾರ ಬಗ್ಗೆ ಹೇಳಿದ್ದಾನೆ . ಕೇಳಿಸಿಕೊಂಡ ವ್ಯಕ್ತಿ ಬಂದು ಹಾಗೆಂದರೆ ಏನು ಎಂದು ನನ್ನನ್ನು ಕೇಳಿದ. ನಾನು ವಿವರಿಸಿ ಹೇಳುವುದು ನನಗೆ ಸಾಕು ಸಾಕೆನಿಸುತ್ತಿತ್ತು.
ಆ ಒಂದು ವೇಳೆಯಲ್ಲಿ ನನ್ನ ಬಳಿ ಪಾಕೆಟ್ ಇರಲಿಲ್ಲ. ನಾವು ವಿಧ್ಯಾರ್ಥಿಗಳು ಹಣವನ್ನು ನಮ್ಮ ಪುಸ್ತಕದ ರಟ್ಟಿನ ಒಳಗೆ ಇಡುತ್ತಿದ್ದೆವು . ಈ ನಮ್ಮ ನಾಗರಾಜ ಆ ನಾನು ಇಟ್ಟ ಹಣವನ್ನು ನನಗೆ ಗೊತ್ತಾಗದ ಹಾಗೆ ಕದ್ದು ನನಗೆ ತಿಂಡಿ ತಿನ್ನಿಸುತ್ತಿದ್ದ.
ಶಾಲೆಯಲ್ಲಿ ಅಧ್ಯಾಪಕರಿಗೆ ಅಚ್ಹುಮೆಚ್ಚಿನವನಾಗಿದ್ದ ಆತ ತನ್ನ ಕಾಪಿ ಹೊಡೆಯುವ ಚಟ ಯಾವಾಗ ಬೀದಿಗೆ ಬಿತ್ತೋ ಅಷ್ಟು ಬೇಗ ಅಧ್ಯಾಪಕರಿಂದ ದೂರವಾದ. ಅಷ್ಟೇ ಅಲ್ಲ ಹುಡುಗರು ಹಂಡೆ,ಕೊಡಪಾನ, ಚೆಂಬು ಹೀಗೆ ಹೆಸರನ್ನು ಕರೆಯಲು ಶುರುಹಚ್ಚಿದರು.
ಹಾಗೆಯೇ ನಮ್ಮ ಈಗಿನ ಜೀವನದಲ್ಲಿ ನೋಡುತ್ತೇವೆ. ಕೆಲವು ಕಂಪನಿಯ ಕ್ಯಾಷಿಯರ್ , ಮ್ಯಾನೇಜರ್ , ಕೆಲವು ಅಧಿಕಾರಿಗಳು ತಮ್ಮ ನಾಲ್ಕು ಅಂಕೆಯ ಸಂಬಳದಲ್ಲಿ ಸುಮಾರು ಆರು ಅಂಕೆಯ ಜೀವನ ನಡೆಸುತ್ತಾರೆ. ಜನರಿಗೆ ಒಳ್ಳೆಯ ಭೋಧನೆ ಮಾಡುತ್ತಾರೆ. ಒಳ್ಳೆಯ ಐಶಾರಾಮದ ಜೀವನ ನಡೆಸುತ್ತಾರೆ. ಕಳ್ಳರ ಜೀವನ ನಡೆಸುತ್ತಾರೆ . ಅಂಥವರ ಬೋಧನೆಗೆ ಕಿವಿಗೊಡಬೇಡಿ. ನಿಮ್ಮನ್ನು ಸಾಲದ ಲೋಕಕ್ಕೆ ತಳ್ಳಿ ಇವರು ನಗುತ್ತ ಇರುತ್ತಾರೆ.
ಪ್ರೀತಿ ಹಾಗೂ ವಿಶ್ವಾಶಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ
ಎ.ಟಿ.ನಾಗರಾಜ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ