ಯಜಮಾನನ ಹಟಮಾರಿತನಕ್ಕೆ ಕೆಲಸಗಾರರು ಕೊಟ್ಟ ಉತ್ತಮ ಮರೆಯಲಾರದ ಶಿಕ್ಷೆ !
ಇದು ನಡೆದ ಘಟನೆ . ಇತ್ತೀಚಿಗೆ ಒಂದು ಪ್ರಸಿದ್ದ ಕಂಪನಿಯ ಬಟ್ಟೆ ಅಂಗಡಿಗೆ ಅದೇ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ಕೆಲಸಗಾರನನ್ನು ಮ್ಯಾನೇಜರ್ ಅನ್ನಾಗಿ ನೇಮಕ ಮಾಡಿದ ಆ ಅಂಗಡಿಯ ಮಾಲೀಕ.. ಆ ಹೊಸ ಮ್ಯಾನೇಜರ್ ನಿಗೆ ಸಂಭಳದ ಜತೆಗೆ ಸ್ವಲ್ಪ ಹಣವನ್ನು ಕೊಡುತ್ತಾ ಬಂದ. ಆ ಹೊಸ ಮ್ಯಾನೇಜರ್ ಅಂಗಡಿಯಲ್ಲಿ ಏನೇನನ್ನೋ ಬದಲಾಯಿಸಿದ. ಅದು ಬದಲಾಯಿಸಿ ಇದು ಬದಲಾಯಿಸಿ. ಕೆಲಸ ಗಾರರಿಗೆ ಕೊಡುವ ಕಮಿಷನ್ ಗೂ ಕಡಿತ ಗೊಳಿಸಿದ. ಆ ಅಂಗಡಿಯ ಕೆಲಸಗಾರರೆಲ್ಲರೂ ತಮ್ಮಲ್ಲಿ ವಿಚಾರ ವಿನಿಮಯ ನಡೆಸಿ. ಅವರು ತಿಂಗಳಲ್ಲಿ ಎಷ್ಟು ಹಣವನ್ನು ಕಮಿಷನ್ ರೂಪದಲ್ಲಿ ತೆಗೆದುಕೊಳ್ಳುತ್ತಿದ್ದರೋ ಅದರ ಎರಡರಷ್ಟು ಬಟ್ಟೆಯನ್ನು ಗ್ರಾಹಕರಿಗೆ ಮಾರಾಟ ಮಾಡಿ ಗಳಿಸಲು ಪ್ರಾರಂಭಿಸಿದರು. ಇದು ಒಂದು ವರ್ಷದ ವರೆವಿಗೆ ನಡೆಯಿತು. ಇವರು ಯಜಮಾನನ ಹತ್ತಿರ ಕಮೀಶನ್ ಬಗ್ಗೆ ಕೇಳಲೇ ಇಲ್ಲ. ಎಪ್ರಿಲ್ ತಿಂಗಳಲ್ಲಿ ಬೋನಸ್ ಕೊಡುವ ಮುನ್ನ ತನ್ನ ಅಂಗಡಿಯ ವ್ಯವಹಾರವನ್ನು ಪರೀಕ್ಷಿಸಲು ಆಡಿಟ್ ವಿಭಾಗಕ್ಕೆ ಒಪ್ಪಿಸಿದ. ಆಗ ಸುಮಾರು ಒಂದೂವರೆ ಸಾವಿರ ಮೀಟರ್ ಬಟ್ಟೆ ಅಂಗಡಿಯಿಂದ ಕಣ್ಮರೆ ಆಗಿತ್ತು. ನಾನು ಬೋನಸ್ ಕೊಡುವುದಿಲ್ಲ ಎಂದ. ನಿಮ್ಮ ಸಂಭಳದಲ್ಲಿ ಹಣ ಕಟ್ ಮಾಡಿ ನನ್ನ ಹಣ ಗಿಟ್ಟಿಸಿ ಕೊಳ್ಳುತ್ತೇನೆ ಎಂದ. ಯಾವುದು ಕಾರ್ಯರೂಪಕ್ಕೆ ಬರಲೇ ಇಲ್ಲ. ಕೆಲಸಗಾರರು ಜಗ್ಗಲೇ ಇಲ್ಲ. ಏನಾದರೂ ಮಾಡಿಕೊಳ್ಳಲಿ ಅವರ ಬೋನಸ್ ಅವರಿಗೆ ಕೊಡುತ್ತೇನೆ ಎಂದು ಒಂದು ದಿನ ಬೋನಸ್ ಕೊಟ್ಟೆ ಬಿಟ್ಟ ಯಜಮಾನ. ಆದರೂ ಇವತ್ತಿಗೂ ಕೂಡ ಕೆಲಸಗಾರರು ತಮಗೆ ಬರಬೇಕಾದ ಕಮೀಶನ್ ಗಾಗಿ ಬಟ್ಟೆ ಮಾರಿಕೊಂಡು ಎರಡರಷ್ಟು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಈ ರೀತಿಯ ಶಿಕ್ಷೆ ಕೊಡದೆ ಯಜಮಾನನ ಹಟಮಾರಿತನಕ್ಕೆ ಯಾವ ರೀತಿ ಶಿಕ್ಷೆ ಕೊಟ್ಟಾರು ಕೆಲಸಗಾರರು.!
ವಂದನೆಗಳೊಂದಿಗೆ
ಎ.ಟಿ.ನಾಗರಾಜ
ನೇರ ಮಾರುಕಟ್ಟೆ ಪ್ರತಿನಿಧಿ ಮತ್ತು ವ್ಯಕ್ತಿತ್ವ ವಿಕಾಸನ ತರಭೇತಿಗಾರ
ನಿಮ್ಮ ಕೆಲವು ಸಮಸ್ಯೆಗಳಿಗೆ ಪರಿಹಾರ ಕೆಳಗಿನ ಲಿಂಕ್ ನಲ್ಲಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ