ನಮ್ಮ ಹಳ್ಳಿಗಳು ಅವನತಿಯತ್ತ ಸಾಗುತ್ತಿವೆ ಎನ್ನುತ್ತಿವೆ ಎನ್ನುವುದಕ್ಕೆ ಹಲವಾರು ಅನುಭವಿಗಳಲ್ಲದ ಮೇಧಾವಿಗಳು ನೈಜ ಉತ್ತರವನ್ನು ಬಿಟ್ಟು ಉಳಿದೆಲ್ಲ ಉತ್ತರಗಳನ್ನು, ಉದ್ದುದ್ದದ ಪುಟಗಳಲ್ಲಿ ಸಂಶೋಧನಾ ಪ್ರತಿಗಳನ್ನು ಪತ್ರಿಕೆಗಳಿಗೆ , ಬೇರೆ ಯಾರ್ಯಾರಿಗೋ ರವಾನಿಸಿದ್ದಾಯ್ತು . ಹಾಗೆಯೇ ಅದಕ್ಕೆ ತಕ್ಕೋ ತಕ್ಕಲ್ಲದೆಯೋ ಪ್ರತಿಫಲವನ್ನು ಕಬಳಿಸಿದ್ದಾಯ್ತು. ಮುಖ್ಯವಾಗಿ ಗಾಮೀಣ ಪ್ರದೇಶದಿಂದ ನಗರ ಪ್ರದೇಶಗಳಿಗೆ ಯುವಕರು ಅದರಲ್ಲೂ ಜಮೀನು ಹೊಂದಿರುವ ಜಮೀನುಧಾರರ ಮಕ್ಕಳು ಬರುವುದು ಸರ್ವೇ ಸಾಮಾನ್ಯ ವಾಗಿಬಿಟ್ಟಿದೆ.
ಇದಕ್ಕೆ ಮುಖ್ಯ ಕಾರಣ ಹಲವಾರು ಜನ ಹಲವಾರು ರೀತಿ ಕೊಡಬಹುದು. ಆದರೆ ನಿಜವಾದ ಕಾರಣ ಸಾಮರಸ್ಯ ವಿಲ್ಲದಿರುವುದು. ಆದರೂ ನಗರ ಪ್ರದೇಶಗಳನ್ನು ಸೇರಿದ ಕೆಲವು ಉತ್ಸಾಹಿ ತರುಣರು ತಮ್ಮ ಮನೆಯನ್ನು , ತಮ್ಮ ಗ್ರಾಮವನ್ನು ಅಭಿವೃದ್ಧಿ ಪಡಿಸಲು ಪ್ರಯತ್ನಿಸಿ ತಮ್ಮಲ್ಲಿರುವ ಹಣವನ್ನು , ಶಕ್ತಿಯನ್ನು ವ್ಯಯಿಸಿ ಕೊನೆಗೆ ಎಲ್ಲವನ್ನು ಕಳೆದುಕೊಂಡು ಕಂಗಾಲಾಗಿ ಈ ಜನರ ಅಭಿವೃದ್ಧಿಯೇ ಬೇಡ ಎಂದು ತಮ್ಮ ಕೆಲಸವಾಯಿತು . ತಾವಾಯಿತು . ಈ ಒಂದು ಹಂತಕ್ಕೆ ಬಂದವರು ಸಾವಿರಾರು ಜನ.
ಗಾಮೀಣ ಪ್ರದೇಶದಲ್ಲಿ ತಂದೆಯ ನಂತರ ಅಣ್ಣ ನಾದವನು ಯಜಮಾನಿಕೆಯ ಭಾರ ಹೊರಲು ಸಮರ್ಥನಾದವನು ಕುಡುಕನಾದರೆ, ಮೂರ್ಖನಾದರೆ ಏನುಮಾಡಬೇಕು.?. ಆತನ ವಿರುದ್ಧ ಆತನು ಆಡುವ ಮಾತುಗಳ ವಿರುದ್ಧ ದಂಗೆ ಏಳಬೇಕೆ ?. ಪೋಲಿಸ್ ಗೆ ದೂರು ನೀಡಬೇಕೆ ? ಹೊಡೆದಾಟ ಆರಂಭಿಸಬೇಕೆ ?. ಆದರೆ ಎಷ್ಟೋ ಜೀವಂತ ಉದಾಹರಣೆಗಳು ನಮ್ಮ ಕಣ್ಮುಂದೆ ಇವೆ. ಆದರೆ ಶಾಂತಗುಣದ ಯುವಕರು ತಮ್ಮ ಅಣ್ಣನ ಮೇಲೆ ಹಗೆ ತೀರಿಸಲು ಹೋಗಲಿಲ್ಲ. ಪೋಲಿಸ್ ಗೆ ದೂರುನೀಡಲು ಹೋಗಲಿಲ್ಲ. ತಮ್ಮಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂಬ ನಂಬಿಕೆ ಪುಟಿದಿದ್ದರು ಕೋರ್ಟ್ ಕಚೇರಿಗಳಿಗೆ ಹೋಗಲಿಲ್ಲ. ತಮ್ಮ ಪಾಡಿಗೆ ತಾವು ನಗರ ಪ್ರದೇಶದಲ್ಲಿಯೇ ಜೀವನ ಕಟ್ಟಲು ಪ್ರಾರಂಭಿಸಿದರು. ದೊಡ್ಡ ಉದ್ದಿಮೆಧಾರರಾದರು. ಆದರೆ ತಾವು ಹುಟ್ಟಿ ಬೆಳೆದ ಮನೆ ಹಾಗೆಯೇ ಅವನತಿಯತ್ತ ಸಾಗುತ್ತ ಇರುವುದನ್ನು ನೋಡಿ ಮನಸ್ಸಿನಲ್ಲಿ ಬೇಸರವಿದ್ದರು ನಗುತ್ತ ಸುಮ್ಮನಾಗಿ ಕೊನೆಯ ಹಂತದಲ್ಲಿ ಅವನತಿಯತ್ತ ಸಾಗುತ್ತಿದ್ದ ಮನೆಯನ್ನು ಹಿಡಿದು ಉನ್ನತಿಯತ್ತ ನಡೆಸಿ ಬೆಳೆಸಿದರು. ಆದರೆ ಈ ತಾಳ್ಮೆ ಎನ್ನುವುದು ಈಗಿನ ನವ ಯುವಕರಲ್ಲಿ , ಯುವತಿಯರಲ್ಲಿ ಇರುವುದು ಒಂದು ರೀತಿಯ ಆಶ್ಚರ್ಯ ಅಲ್ಲದೆ ಇನ್ನೇನು. ಅಧಿಕಾರ , ಹಣ ಎಲ್ಲವೂ ಇದ್ದರೂ ಅವುಗಳನ್ನು ದುರುಪಯೋಗ ಪಡಿಸದೇ ತಾಳ್ಮೆಯಿಂದ , ಶಾಂತಿಯಿಂದ ಒಂದು ಸಂಘರ್ಷದ ಸಮಾಜದಲ್ಲಿ ಶಾಂತಿಯ ಧ್ವಜವನ್ನು ನೆಟ್ಟ ಯುವಕರಿಗೆ ವಂದನೆಗಳನ್ನು ಹೇಳೋಣವೇ ?
ವಂದನೆಗಳೊಂದಿಗೆ
ಎ.ಟಿ.ನಾಗರಾಜ
ವ್ಯಕ್ತಿತ್ವ ವಿಕಾಸನ ತರಭೆತಿಗಾರ ಮತ್ತು ನೇರ ಮಾರುಕಟ್ಟೆ ಪ್ರತಿನಿಧಿ
ನಿಮಗಾಗಿ ಒಂದು ವಿಡಿಯೋ ಇದೆ ವೀಕ್ಷಿಸಿ .
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ