ನಿನ್ನೆ ನಮ್ಮ ಪರಿಚಯಸ್ಥ ಭಾಷಾ ಬಾಯಿ ಒಂದು ಕಥೆ ಹೇಳಿದರು. ಒಮ್ಮೆ ನಗರ ಪ್ರದೇಶದ ಉಪನ್ಯಾಶಕರಿಬ್ಬರೂ ಒಂದು ಗ್ರಾಮೀಣ ಪ್ರದೇಶಕ್ಕೆ ಕಾರಿನಲ್ಲಿ ಹೋಗುತ್ತಾರೆ. ಆ ವೇಳೆ ಬೇಸಿಗೆ ಕಾಲ ಆಗಿರುವುದರಿಂದ ಇವರಿಗೆ ನೀರಡಿಕೆ ಆಗುತ್ತದೆ. ಹಳ್ಳಿಗಾಡಿನಲ್ಲಿ ರಸ್ತೆಗೆ ಹತ್ತಿರವಾಗಿರುವ ಮನೆಗೆ ಹೋಗಿ ನೀರು ಕೇಳುತ್ತಾರೆ. ಆ ಮನೆಯವರು ಒಂದು ಚೆಂಬು ನೀರು ಒಬ್ಬೊಬ್ಬರಿಗೆ ಕೊಟ್ಟು ಮೊದಲು ಮುಖ ತೊಳೆಯಿರಿ ನಂತರ ಕುಡಿಯಲು ಕೊಡುತ್ತೇವೆ ಎಂದರು. ಇವರು ಮೊದಲು ಮುಖ ತೊಳೆದರು. ನಂತರ ಆ ಹಳ್ಳಿಯವನ ಮನೆಯ ಒಳಗಡೆ ಹೋದರು. ಹಳ್ಳಿಯವರು ಇವರಿಗೆ ಕೂರಲು ಚಾಪೆ ಹಾಕಿ , ಕುಡಿಯಲು ಮಜ್ಜಿಗೆ ಕೊಟ್ಟರು. ಅವರ ಮನೆಯಲ್ಲಿ ಸುಮಾರು ಐದು ಗಂಡು ಮಕ್ಕಳನ್ನು ನೋಡಿದರು. ಈ ಮಕ್ಕಳನ್ನು ಶಾಲೆಗೇ ಕಳುಹಿಸಿಲ್ಲ ಯಾಕೆ ಎಂದು ಕೇಳಿದರು. ಅದಕ್ಕೆ ಹಳ್ಳಿಯವರು ಕೊಟ್ಟ ಉತ್ತರ ಸೋಜಿಗವಾಗಿತ್ತು. "ಶಾಲೆಗೇ ಹೋಗಿ ವಿಧ್ಯವನ್ತರಾದರೆ ಇವರು ಸಮಾಜಕ್ಕೆ ತೊಂದರೆ ಮಾಡುತ್ತಾರೆ, ಓದದೆ ಇದ್ದರೆ ಮನೆಯಲ್ಲಿರುವ ಕೆಲಸ ಮಾಡಿಕೊಂಡು ಆರಾಮವಾಗಿ ಯಾರ ತಂಟೆಗೂ ಹೋಗದೆ ತಮ್ಮಷ್ಟಕ್ಕೆ ತಾವೂ ಇರುತ್ತಾರೆ.". ಎಂದರಂತೆ . ಇದನ್ನು ಕೇಳಿದ ಉಪನ್ಯಾಷಕರಿಗೆ ಏನೋ ಹಳ್ಳಿಯವರು ಹೇಳುತ್ತಿರುವುದು ಸರಿ ಎನಿಸಿ ಬಂದರಂತೆ.!
ವಂದನೆಗಳೊಂದಿಗೆ
ಎ.ಟಿ.ನಾಗರಾಜ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ