ಮನುಷ್ಯ ಬೆಳೆದಂತೆ ಅಂದರೆ ಶ್ರೀಮಂತಿಕೆ , ಅಧಿಕಾರ ಆತನ ಕೈವಸವಾದಂತೆ ಆತ ಮ್ರುಗವಾಗುತ್ತಾನೆ. ಆತ ತಾನು ಬಂದ ಜನರನ್ನು , ತಾಯಿತಂದೆಯನ್ನು , ಅಕ್ಕ -ತಮ್ಮ , ಅಣ್ಣ -ತಂಗಿ , ಸಹೋದ್ಯೋಗಿ ಗಳನ್ನೂ ಕಡೆಗಣಿ -ಸತೊಡಗುತ್ತಾನೆ . ಇಂತಹ ಮೂರ್ಖರನ್ನು ನಾನು ನನ್ನ ವೃತ್ತಿ ಜೀವನದ ಉದ್ದಕ್ಕೂ ನೋಡಿ ಬೇಸರವಾಗಿಯೇ ಜೆ ,ಓ ,ಬಿ (ಜಾಬ್ ) ನ ಕಡೆ ವಾಲಿದ್ದು. ನೀವು ತಿಳಿದಂತೆ ನಾನು ಜೆ ,ಓ. ಬಿ .ಜಾಬ್ ಎಂದರೆ ಕೆಲಸವೆನ್ದರ್ಥವಲ್ಲ. ಜರ್ನಿ ಆನ್ ಬಿಸಿನೆಸ್. ಅಂದರೆ ವ್ಯವಹಾರದ ಮೇಲೆ ಪ್ರಯಾಣ ವೆಂದರ್ಥ. ನಾವು ಕೈಕಾಲು ಗಟ್ಟಿ ಇದ್ದು. ಅವರಿಗಿಂತಲೂ ವಿಧ್ಯಭ್ಯಾಸದಲ್ಲಿ , ಮಾತಿನಲ್ಲಿ , ಆಲೋಚನೆಯಲ್ಲಿ , ಎಲ್ಲದರಲ್ಲೂ ಒಂದು ಹೆಜ್ಜೆ ಮುಂದೆ ಇದ್ದು , ಕೇವಲ ಅವಕಾಸ ಸಿಗದೇ ಇರುವುದಕ್ಕೆ ಇನ್ನೊಬ್ಬನ ಆಳಾಗಿಯೇ ಸಾಯಬೇಕೆ ? ಎಂದು ನನಗೆ ನಾನೇ ಪ್ರಶ್ನೆ ಹಾಕಿಕೊಂಡು ಉದ್ಯೋಗದ ಜತೆ ಸಹ ಉದ್ಯೋಗ ನೇರಮಾರುಕಟ್ಟೆ ಗೆ ದುಮುಕಿದೆ. ಕೈಯಲ್ಲಿ ಕಾಸಿರಲಿಲ್ಲ ! ಕೇವಲ ಧೈರ್ಯವಿತ್ತು. ಆಲೋಚನೆಯಿತ್ತು. ಇಂದು ನಿಮ್ಮ ಮುಂದೆ ನಿಂತು ನನ್ನ ಅನುಭವವನ್ನು ಹೇಳುವವನಾಗಿದ್ದೇನೆ. ಇದಕ್ಕೆಲಾ ಕಾರಣ ಮೇಲೆ ಬರಲೇ ಬೇಕೆಂಬ ಹಠ,! ಅವಮಾನ , ಮರ್ಯಾದೆ ಹರಾಜು, ಟೀಕೆ , ಟಿಪ್ಪಣಿ , ಗೆಳೆಯರೆಲ್ಲ -ವೈರಿಗಳೆಲ್ಲ ನನ್ನ ನೋಡಿ ಬಿದ್ದು ಬಿದ್ದು ನಗುತ್ತಲಿದ್ದಾರೆ. ಆದರೆ ಇಂದು ಎಲ್ಲರೂ ನನ್ನನ್ನು ನೋಡಿ ಹೊಟ್ಟೆ ಕಿಚ್ಚು ಪಡುತ್ತಲಿದ್ದಾರೆ. ಹಾಗಾಗಿ ಜೀವನದಲ್ಲಿ ಸಿಟ್ಟು, ಅವಮಾನ, ದು;ಖ , ಹಠ ,ಸಾಧನೆ ತುಂಬಾ ಮುಖ್ಯ .
ಒಡೆದು ಆಳುವ ಮುಟ್ಟಾ ಳರು ಕೊಡಬೇಕಾದ ಹಣಕ್ಕಾಗಿ ಮಾತ್ರ ಒಡೆದು ಆಳುತ್ತಾರೆ . ಆದರೆ ಕೆಲಸ ಮಾತ್ರಎಲ್ಲರೊಡನೆಯೂ ಕಾಲೋ ,ಕೈಯೋ, ಹಿಡಿಯಲು ಸಿಕ್ಕಿದ ಕಡೆ ಹಿಡಿದುಕೊಂಡು ಕೆಲಸಮಾಡಿ ಜೈ ಎನಿಸುತ್ತಾರೆ. ಇಂತವರ ಬಗ್ಗೆ ನನಗೆ ಇಂದಿಗೂ ಒಳ್ಳೆ ಮಾತಿಲ್ಲ. ಇದರಲ್ಲಿ ಒಂದು ಕಂಪನಿಯ ಅಧ್ಯಕ್ಷ ನಾಗಲಿ, ಮುಖ್ಯಸ್ತನಾಗಲಿ ಬೇರೆ ಅಲ್ಲ. ಎಲ್ಲರೂ ಅವರೇ ಮನೆಮುರುಕರು. ಹೇಗಿದೆ ನನ್ನ ಲೆಕ್ಕಾಚಾರ. ತಪ್ಪಿದ್ದರೆ ಬರೆದು ತಿಳಿಸಿ ನಿಮ್ಮ ಅಭಿಪ್ರಾಯ. ಸರಿಯಿದ್ದರೆ ಯಾಕೆ ಸರಿಯಿದೆ ಎಂದು ಕಳುಹಿಸಿ. ಆದರೆ ಬದುಕಿ ಸತ್ತಂತೆ ಇರಬೇಡಿ.
ವಂದನೆಗಳೊಂದಿಗೆ
ಎ.ಟಿ.ನಾಗರಾಜ
ಭಾನುವಾರ, ಮಾರ್ಚ್ 6, 2011
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ