ತುಂಬಾ ಯೋಚಿಸಿದ್ದೇನೆ ಆದರೂ ಉತ್ತರ ಹೊಳೆದಿಲ್ಲ . ಒಂದು ವೇಳೆ ನಿಮಗೆ ಉತ್ತರ ಗೊತ್ತಿದ್ದರೆ ನನಗೆ ತಿಳಿಸಿ. ನೀವು ಯಾವುದೇ ದೇವರ ಪೂಜೆ ಮಾಡುವಾಗ ಶ್ರೀಗಂಧ ಉಪಯೋಗಿಸಿಯೇ ಉಪಯೋಗಿಸುತ್ತೀರಿ. ಆದರೆ ಅದಕ್ಕೆ ನೊಣಗಳು ಮುತ್ತುವುದು ತುಂಬಾ ವಿರಳ. ಅದೇ ಹೇಸಿಗೆಗೆ ನೊಣಗಳು ಜಾಸ್ತಿ ಮುತ್ತುತ್ತವೆ. ಅದರಿಂದ ಖಾಯಿಲೆ ಬರುತ್ತದೆ. ಅದೇ ರೀತಿ ಒಂದು ಒಳ್ಳೆಯ ವಿಚಾರಕ್ಕೆ ಜನ ಬಂದು ಸೇರುವುದು ತುಂಬಾ ಕಡಿಮೆ. ಆದರೆ ಯಾವುದಾದರೂ ಕೆಟ್ಟ ವಿಚಾರಕ್ಕೆ ಜನರು ಬಂದು ಸೇರುವುದು ಜಾಸ್ತಿ. ಮನೆ ಮುರಿಯಲು , ಗಂಡ ಹೆಂಡರ ಬೇರೆ ಮಾಡಲು, ಅಪ್ಪ ಮಕ್ಕಳಿಗೆ ಹೊಡೆದಾಟಕ್ಕೆ ಹಚ್ಚಿ ಮೋಜು ಮಾಡಲು, ಸುಳ್ಳು ಅಪವಾದ ಕೊಟ್ಟು ಪೋಲಿಸ್ ಸ್ಟೇಶನ್ ಗೆ ಕಳುಹಿಸಲು ಮುಂದಾಗುವವರು ಜಾಸ್ತಿ . ನನಗಂತೂ ಇದಕ್ಕೆ ಉತ್ತರ ಗೊತ್ತಿಲ್ಲ . ನಿಮಗೆ ಗೊತ್ತಿದ್ದರೆ ತಿಳಿಸಿ.
ವಂದನೆಗಳೊಂದಿಗೆ
ಎ.ಟಿ.ನಾಗರಾಜ
ಬುಧವಾರ, ಮಾರ್ಚ್ 16, 2011
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ