ನಾನು ತುಂಬಾ ದೊಡ್ಡ ಕುಟುಂಬದಿಂದ ಬಂದವನು. ನಮ್ಮ ತಂದೆ ದಕ್ಷಿಣಕನ್ನಡ ಜಿಲ್ಲೆಯವರು. ತಾಯಿಯು ಕೂಡ ಅದೇ ಜಿಲ್ಲೆಯವರು. ಆದರೆ ನಮ್ಮ ತಂದೆ ಆಸ್ತಿ-ಮನೆ ಮಾರು ಮಾಡಿದ್ದೆಲ್ಲ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರಂ ಹೋಬಳಿಯ ಹೆಬ್ಬೋಡಿ ಗ್ರಾಮದಲ್ಲಿ. ಮಧ್ಯಮ ವರ್ಗದ ಕುಟುಂಬ. ಆದರೂ ಸಂತೋಷಕ್ಕೆ ಏನೂ ಕಮ್ಮಿ ಇರಲಿಲ್ಲ. ನಮ್ಮ ತಂದೆ ಸ್ವಲ್ಪ ಶಿಸ್ತಿನ ಶಿಪಾಯಿ ಅಂತಲೇ ಹೇಳಬಹುದು. ನಮ್ಮ ತಂದೆಯ ಏಳು ಜನ ಮಕ್ಕಳಲ್ಲಿ ನಾನು ಆರನೆಯವನು . ನನ್ನ ನಂತರ ನನ್ನ ತಂಗಿ . ಒಟ್ಟಾರೆ ಐದು ಹೆಣ್ಣು ಎರಡು ಗಂಡು.
ನಮ್ಮ ತಂದೆಗೆ ದಮ್ಮು ಕಮ್ಮಿನ ಖಾಯಿಲೆ ಯಾವಾಗಲೂ ಅವರನ್ನು ಕಾಡುತ್ತಿತ್ತು. ಆದರೂ ಅವರು ಅದನ್ನು ಓಡಿಸಲು ಹಲವಾರು ಪ್ರಯತ್ನ ಮಾಡುತ್ತಿದ್ದರು. ಹೀಗೆ ನಡೆಯುತ್ತಿತ್ತು. ನಮ್ಮ ತಂದೆ ಹಾಗೂ ಖಾಯಿಲೆಯ ಆರ್ಭಟ. ಏನೇ ಇರಲಿ ವಿಷಯ ವಿಷಯಾಂತರ ವಾಗುತ್ತಲಿದೆ.
ಇತ್ತೀಚಿನ ರಾಜಕೀಯ ಬೆಳವಣಿಗೆ ನೋಡಿದರೆ ನಮಗೆ ನಮ್ಮ ತಂದೆಯ ನೆನಪಾಗುತ್ತದೆ. ನಮ್ಮ ತಂದೆಯ ಸ್ಥಾನದಲ್ಲಿ ಬೇರೆ ಯಾರೂ ಇದ್ದಾರೆ . ಅದೇ ಖಾಯಿಲೆ ಅವರನ್ನು ಕಾಡುತ್ತಿದೆ. ಹಾಗೆಯೇ ಹಳೆ ಹಳೆ ರಾಜಕೀಯ ಮುಖಂಡರು ಹಲವಾರು ಹೊಸ ಹೆಸರಲ್ಲ್ಲಿ ಪಕ್ಷ ಗಳನ್ನೂ ಕಟ್ಟಿದರೂ ಅವರ ಮೂಲ ಉದ್ದೇಶದಲ್ಲಿ ಬದಲಾವಣೆ ತರಲು ಆಗುತ್ತದೆಯೇ. ಹಳೆ ಮನೆಗೆ ಹೊಸ ಯಜಮಾನ ನಾದರೆ ಆತನೂ ಮಾಡುವುದು ಹಿಂದಿನ ಯಜಮಾನ ನ ಚಾಳಿಯಲ್ಲದೆ ಮತ್ತೇನೂ.
ಯಾರೂ ಹಲವರ ದುಡ್ಡು ನುಂಗಿ ಆಸ್ತಿ ಮಾಡಿ ನಾಶವಾಗಿ ಹೋಗುವಾಗ ಅವರು ದುಡಿದುಕೊಂಡಿರುವುದು ತೆಗೆದುಕೊಂಡು ಹೋಗಿಲ್ಲ. ಆ ರೀತಿ ದುಡಿದ ಹಣವನ್ನು ಅವರ ಮಕ್ಕಳು ಮೊಮ್ಮಕ್ಕಳು ರೂಡಿಸಿಕೊಂಡು ಬಂದಿಲ್ಲ ಇದು ಬೇರೆ ಮಾತು.
ವಂದನೆಗಳೊಂದಿಗೆ
ಎ.ಟಿ.ನಾಗರಾಜ
ನೆಟ್ ವರ್ಕ್ ಮಾರ್ಕೆಟಿಂಗ್ ಟ್ರೈನೆರ್
ಬುಧವಾರ, ಫೆಬ್ರವರಿ 2, 2011
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ