ನಿನ್ನೆ ಅಷ್ಟೇ ನನ್ನ ಬಹುದಿನದ ಆಸೆ ಹಾಗೂ ನನ್ನ ಆಪ್ತ ಸ್ನೇಹಿತರು , ಬಂಧುಗಳು , ಓದುಗರ ಕೋರಿಕೆಯ ಮೇಲೆ ನೆಟ್ ನಾಗ ದಲ್ಲಿ ಸನ್ ನ್ಯಾಚು ರಲ್ ಪ್ಲಾಸ್ ನ ಹೆಸರಿನಲ್ಲಿ ಯು ಟ್ಯೂಬ್ ನಲ್ಲಿ ವಿಡಿಯೋ ಪ್ರಕಟಗೊಂಡಿತ್ತು. ದೇಶ ,ವಿದೇಶ ದಿಂದ ಹಲವಾರು ಪರಿಚಯಸ್ತರು ನನಗೆ ಫೋನ್ ಮಾಡಿದರು . ಇ -ಮೇಲ್ ಕಳುಹಿಸಿದರು. ಆದರೆ ಎಲ್ಲರ ದೂರವಾಣಿ ಕರೆಗಳನ್ನು ಸ್ವೀಕರಿಸಲು ಆಗಲಿಲ್ಲ . ಕಾರಣ ನನಗೆ ಮೊದಲಿನಿಂದಲೂ ದೂರವಾಣಿಯ ಮೂಲಕ ಮಾತನಾಡುವುದರಿಂದ ದಣಿವು ಹಾಗೂ ತಲೆ ನೋವೂ ಆಗುತ್ತಿದ್ದು , ತಡೆಯುವುದು ಕಷ್ಟವಾಗುತ್ತಿತ್ತು. ಹಾಗಾಗಿ ಮಾನ್ಯ ಓದುಗರು -ಹಿತೈಷಿಗಳು ನಿಮ್ಮ ಮೇಲೆ ಕೋಪದಿಂದ ಮಾತನಾಡಲಿಲ್ಲ ಎಂದು ಅಂದುಕೊಳ್ಳಬೇಡಿ. ನನ್ನ ಈ ಒಂದು ಚಿಕ್ಕ ಸಮಸ್ಯೆಗೆ ದಯವಿಟ್ಟು ಸ್ಪಂದಿಸಿ.
ಹಲವಾರು ಇ -ಮೇಲ್ ಗಳಿಗೆ ಆದಷ್ಟು ಉತ್ತರ ನನ್ನ ಆಟೋ ರೆಸ್ಪೇನ್ ಡರ್ ನಿಂದ ಉತ್ತರ ತನ್ನಿಂದ ತಾನೇ ಹೋಗುತ್ತಿತ್ತು. ಆದರೂ ಕೆಲವರ ಪ್ರಶ್ನೆಗಳಿಗೆ ಉತ್ತರ ಕೊಡಬೇಕಾದದ್ದು ನನ್ನ ಕರ್ತವ್ಯ ಆಗಿದೆ. "ನಾಗರಾಜ್ . ಎ.ಟಿ. ಯವರೇ ನೀವೂ ಇಷ್ಟೊಂದು ಸಹಾಯ ನಿಮ್ಮ ಯುವಜನತೆಗೆ -ವಿದ್ಯಾರ್ಥಿಗಳಿಗೆ ಮಾಡುತ್ತಿದ್ದಿರಲ್ಲ ಅವರಿಂದ ನಿಮಗೇನು ಪ್ರಯೋಜನ ವಿದೆಯೇ ?". ಈ ಜನಕ್ಕೆ ಎಷ್ಟು ಉಪಕಾರ ಮಾಡಿದರೆ ಅಷ್ಟೇ ಎಂದು ಒಬ್ಬ ಓದುಗ ಮಿತ್ರರು ಬರೆದಿದ್ದರು. ಅದಕ್ಕೆ ನನ್ನ ಉತ್ತರ ಈ ರೀತಿ ಇದೆ.
ನಾನು ಹುಟ್ಟಿದ್ದು ಮಧ್ಯಮ ವರ್ಗದ ಕುಟುಂಬದಲ್ಲಿ , ಬೆಳೆದದ್ದು ಗ್ರಾಮೀಣ ಪ್ರದೇಶದಲ್ಲಿ, ನಮ್ಮ ತಂದೆ ತಾಯಿ ಅನಕ್ಸರಸ್ತರು, ನಮ್ಮ ಕುಟುಂಬದಲ್ಲಿ ನನ್ನನ್ನು ಈ ಮಟ್ಟಕ್ಕೆ ಬೆಳೆಸಲು ಸಹಕರಿಸಿದ್ದು ನನ್ನ ಅಕ್ಕ ನಾಗರತ್ನಕ್ಕ, ಹಾಗೆಯೇ ನಮ್ಮ ತಾಯಿ,ಅಣ್ಣ, ಅಕ್ಕಂದಿರರು. ಜತೆಗೆ ನಮ್ಮ ಊರಿನವರು . ಈ ಸಮಾಜದವರು ನನ್ನ ಓದಿಗೆ ಬಹಳಷ್ಟು ಸಹಾಯ ಮಾಡಿದ್ದಾರೆ. ಆದರೆ ಸಹಾಯ ಮಾಡಿದವರಿಗೆ ನನ್ನಿಂದ ಸಹಾಯ ಮಾಡಲು ಆಗಲಿಲ್ಲ ಎಂಬ ಕೊರಗು ಇದೆ. ಕಾರಣ ಕೆಲವರು ಈಗಾಗಲೇ ಸಾವನ್ನಪ್ಪಿದ್ದಾರೆ. ಆದರೂ ಅವರ ಮಕ್ಕಳು -ಮೊಮ್ಮಕ್ಕಳಿಗಾದರೂ ನನ್ನ ಚಿಕ್ಕ ಸಹಾಯ ತೀರಲೆಂದು ಬರೆಯುತ್ತಿದ್ದೇನೆ. ಕೆರೆಯ ನೀರನ್ನು ಕೆರೆಗೆ ಚೆಲ್ಲುವುದರಲ್ಲಿ ಏನೋ ಒಂದು ರೀತಿಯ ಸಂತಸ ಇದೆ ಎಂದೆನಿಸುತ್ತದೆ. ನಿಮಗೆ ಅದೇ ರೀತಿ ಏನೂ ?
ವಂದನೆಗಳೊಂದಿಗೆ
ಎ.ಟಿ,ನಾಗರಾಜ
ಮಂಗಳವಾರ, ಫೆಬ್ರವರಿ 22, 2011
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ