ಎಷ್ಟೋ ವೇಳೆ ನನ್ನ ಆಲೋಚನೆ ತುಂಬಾ ಮಹತ್ವದ್ದಾಗಿರುತ್ತದೆ ಎಂದು ಮೊನ್ನೆ ಯಾರೋ ಒಬ್ಬ ಓದುಗರು ಬರೆದಿದ್ದರು. ನಾನು ಹೇಳುವ ಮಾತುಗಳು ಸರ್ವ ಕಾಲಿಕ ಸತ್ಯ ಎಂದು , ಅರ್ಥ ಪೂರ್ಣ ಎಂದೂ ಬರೆದಿದ್ದರು . ಅವರ ಪ್ರಕಾರ ನಾನು ಹೇಳುವ ಮೂವತ್ತೈದು ವರ್ಷ ಪೂರೈಸಿದ ಒಬ್ಬ ಉದ್ಯೋಗಿಯಲ್ಲಿ ಮೂವತ್ತೈದು ವರ್ಷ ಕಾಲ ಕೆಲಸ ಮಾಡಿದ್ದು ಬರೆ ಬೋರ್ . ಅದುವೇ ಒಬ್ಬ ಕೆಲಸ ಕೊಟ್ಟ ಉದ್ಯೋಗ ದಾತನಿಗೆ ಏನೇನೋ ಅನುಭವ ಆಗಿರುತ್ತದೆ. ಹಣ ಸಂಪಾದಿಸಿರುತ್ತಾನೆ, ಜನ ಸಂಪಾದಿಸಿರುತ್ತಾನೆ, ಬೇಕಾದಷ್ಟು ಸಂಪತ್ತು. ಆಳು , ಕಾಳು,ಬಂಗಲೆ , ಐಶಾರಾಮದ ಕಾರು, ವಿದೇಶಿ ಪ್ರಯಾಣ ಇತ್ಯಾಧಿ........
ಆದರೆ ಈ ಎಲ್ಲ ಸಂಪತ್ತುಗಳನ್ನು ಪಡೆಯಲು ಶ್ರಮಿಸಿದ ನೌಕರ ಕೇವಲ ಬರಿ ಗೈ ದಾಸನಾಗಿ ಕೆಲಸದಿಂದ ಬೇಸರದಿಂದ ಹೇಗೆ ಹೊರಬಂದ ?. ಇವನು ಗಳಿಸಿದ ಅನುಭವ ಬೇರೆ ಕಡೆ ಉಪಯೋಗಕ್ಕೆ ಬರುತ್ತದೆಯೇ ?. ಗಾಣದ ಸುತ್ತ ಸುತ್ತುವ ಎತ್ತಿಗೆ ಗಾಣದಿಂದ ಏನಾದರೂ ಪ್ರಯೋಜನ ವಿದೆಯೇ ?. ಹಾಗೆಯೇ ಇಲ್ಲಿಯೂ ಕೂಡ ಗಾಣದ ಎತ್ತಿನ ರೀತಿ ನೌಕರ ಬರಿ ಸಂಬಳಕ್ಕಾಗಿ ದುಡಿದ ಹೊರತೂ ಬೇರೆ ಏನೂ ಈತನಿಗೆ ಪ್ರಯೋಜನ ಕಾರಿಯಾದದ್ದನ್ನು ಮಾಡಲಿಲ್ಲ.
ವಿಷಯ ಏನೇ ಇರಲಿ ಯಾವುದೇ ವ್ಯಕ್ತಿ ಸರಕಾರೀ ನೌಕರ ಇರಬಹುದು . ಖಾಸಗಿ ಉದ್ಯೋಗಿ ಇರಬಹುದು. ಜವಾನನಿರಬಹುದು ,ದಿವಾನ ನಿರಬಹುದು. ಆದಷ್ಟು ಸ್ವತಂತ್ರ ರಾಗುವುದನ್ನು ಕಲಿಯಬೇಕು. ತಮ್ಮಲ್ಲಿ ಲಕ್ಷ ರೂಪಾಯಿ ಬಂಡವಾಳ ಹೂಡಿಕೆ ಮಾಡಲು ಆಗದಿದ್ದರೂ ಇದ್ದುದ್ದರಲ್ಲಿ ಸ್ವಲ್ಪ ಸ್ವತಂತ್ರ ವಾಗಲೂ ಹೂಡಿಕೆಮಾಡಿ ವ್ಯವಹಾರಕ್ಕೆ ದುಮುಕಿ ಕೊನೆಯ ಪಕ್ಷ ಅನುಭವವನ್ನಾದರೂ ಗಳಿಸಿಕೊಂಡರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು.
ರಾಷ್ಟ್ರಕವಿ ಕುವೆಂಪು ತಮ್ಮ ಕೆಲಸದ ಜತೆಗೆ ಓದುತ್ತಲೇ , ಪರೀಕ್ಷೆ ಬರೆಯುತ್ತಲೇ ಮೇಲೆಬಂದರು. ವಿಶ್ವದ ಆಘ್ರ ಮಾನ್ಯ ಕಾರ್ ಕಂಪನಿಯ ಒಡೆಯನಾದದ್ದು ಕೆಲಸದ ಜತೆಗೆ ಸ್ವಂತ ಉದ್ಯೋಗ ಮಾಡಿ, ಆಂಡ್ರೋ ಕಾರ್ಲೆಗಿ , ಅವರು ಕೂಡ ಕೆಲಸದ ಜತೆಗೆ ಹೂಡಿಕೆ ಮಾಡಿ ಮೇಲೆ ಬಂದರು. ಸಿ, ವಿ, ರಾಮನ್ ರಾಷ್ಟ್ರಪತಿಯಾದದ್ದು ಶಿಕ್ಷಕ ವೃತ್ತಿಯಿಂದ ಮೇಲೆ ಏರುತ್ತ ಹೋಗಿಯೇ ಆದರೆ ನೀವೂ ಯಾಕೆ ಇದ್ದಲ್ಲಿಯೇ ಇದ್ದೀರಿ ! . ಇಂದೇ ಮೊದಲ ಹೆಜ್ಜೆ ಇಡಿ .
ವಂದನೆಗಳೊಂದಿಗೆ
ಎ.ಟಿ,ನಾಗರಾಜ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ