ಒಬ್ಬ ವ್ಯಕ್ತಿ ಅಂದ ಮೇಲೆ ಎಲ್ಲರಿಗೂ ಒಂದೇ ರೀತಿ ಇರುತ್ತಾರೆ ಎಂದು ಹೇಳಲು ಬರುವುದಿಲ್ಲ. ಕೆಲವರಿಗೆಒಳ್ಳೆಯವರಾಗಿರಬಹುದು , ಇನ್ನೂ ಕೆಲವರಿಗೆ ಕೆಟ್ಟವರಾಗಿರಬಹುದು ಅದು ಬೇರೆ ಮಾತು !. ಸುಮಾರು ಆರು ತಿಂಗಳುಗಳ ಹಿಂದೆ ನಾನು ದಿ ರೆಮೆಂಡ್ ಸಾಪ್ ಗೆ ಹೋಗಿದ್ದೆ. ಅವತ್ತು ಸಂಜೆ ಆರು ಗಂಟೆಯ ಸಮಯ ವಿರಬಹುದು. ಒಬ್ಬ ಸೂಟು ಧರಿಸಿದ, ಕೈಯಲ್ಲಿ ಛತ್ರಿ ಹಿಡಿದು ಕೊಂಡ ವ್ಯಕ್ತಿ ಅಂಗಡಿಯ ಒಳಗೆ ಬಂದರು. ಮಳೆ ಹೊರಗೆ ಹನಿ ಹಾಕುತ್ತಿತ್ತು. ಆ ವ್ಯಕ್ತಿಗೆ ಬ್ಲಾಂಕೆಟ್ ಬೇಕಾಗಿತ್ತು. ಬ್ಲಾಂಕೆಟ್ ಖರೀದಿಸಿದರು. ತಾವೇ ಬ್ಲಾಂಕೆಟ್ ತೆಗೆದುಕೊಂಡು ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಹೋದರು. ಅವರ ಜತೆಗೆ ಸಹಾಯಕರಾಗಲಿ , ಕಾವಲು ಗಾರರಾಗಲಿ ಇರಲಿಲ್ಲ. ಅಂಗಡಿಯ ಮ್ಯಾನೇಜರ್ ಹುಡುಗರನ್ನು ಬ್ಲಾಂಕೆಟ್ ಹಿಡಿದುಕೊಂಡು ಬರಲು ಕಳಿಸುತ್ತೇವೆ ಎಂದರೆ ನೋ ಥ್ಯಾಂಕ್ಸ್ ಎಂದರು. ಒಬ್ಬ ಎತ್ತರ ಹೋದ ವ್ಯಕ್ತಿ ತಾನೂ ಸಾಮಾನ್ಯ ಮನುಷ್ಯನಂತೆ ಇರಬಯಸುವುದು ಅಜಯ್ ಕುಮಾರ್ ಸಿಂಗ್ ರವರನ್ನು ನೋಡಿ ಕಲಿಯಬೇಕು.
ವಂದನೆಗಳೊಂದಿಗೆ
ಎ.ಟಿ.ನಾಗರಾಜ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ