ಮಾನ್ಯರೇ ನೀವು ನಂಬುತ್ತೀರೋ ಇಲ್ಲವೋ ಗೊತ್ತಿಲ್ಲ ನಾನು ದಿನದಲ್ಲಿ ಹದಿನೆಂಟು ಗಂಟೆ ದುಡಿಯುತ್ತೇನೆ. ಕೆಲವರಿಗೆ ಇದು ಕಷ್ಟ ಎಂದು ಕಾಣಬಹುದು. ಆದರೆ ಅಭ್ಯಾಸವಾದರೆ ಇದಕ್ಕಿಂತ ಉತ್ತಮೆ ಹಾದಿ ಬೇರೆ ಯಾವುದು ಇಲ್ಲ. ನಾನಾಯಿತು ನನ್ನ ಕೆಲಸವಾಯಿತು ನನಗೆ ನನ್ನ ಕೆಲಸ ವಾಗ ಬೇಕಷ್ಟೇ.!
ನೀವು ನೋಡಿರಬಹುದು ಎಷ್ಟೋ ಜನ ಬಿಸಿನೆಸ್ ಪ್ರಾರಂಭಿಸುತ್ತಾರೆ. ಬಿಸಿನೆಸ್ ಸರಿಯಾಗಿ ನಡೆದರೆ ಸಂತೋಷಕ್ಕಾಗಿ ಕುಡಿಯುತ್ತಾರೆ. ಬಿಸಿನೆಸ್ ನಷ್ಟವಾದರೆ ಚಿಂತೆಗಾಗಿ ಕುಡಿಯುವುದು ಮಾಡುತ್ತಾರೆ. ಆದರೆ ಇವೆರಡು ಸರಿಯಾದ ಹವ್ಯಾಸಗಳಲ್ಲ.
ಓದಿನಲ್ಲಿ ಪೇಲಾಗಲಿ, ವ್ಯವಹಾರದಲ್ಲಿ ನಷ್ಟ ಉಂಟಾಗಲಿ ನಾವು ಕೆಟ್ಟ ಚಟಗಳಿಗೆ ಬಲಿಯಾಗಬಾರದು. ನಮಗಿಂತ ನಮ್ಮ ಕುಟುಂಬದ ಜನಗಳಿಗೆ ಅಂದರೆ ಅಣ್ಣನಿರಬಹುದು, ಅಕ್ಕ -ತಮ್ಮ -ತಂಗಿ -ತಂದೆ -ತಾಯಿ - ಹೆಂಡತಿ -ಮಕ್ಕಳಿಗೆ . ಆ ಒಂದು ಪರಿಸ್ಥಿತಿ ಬಂದಾಗ ಹೆಚ್ಚು ಓದಲು ಕುಳಿತರೆ ಒಳ್ಳೆಯದು. ಇಲ್ಲವೇ ಕೆಲಸದಲ್ಲಿ ತಲ್ಲೀನರಾದರೆ ಒಳ್ಳೆಯದು. ಯಾವುದೇ ಕಾರಣಕ್ಕೆ ನಮ್ಮ ಜತೆಗಿರುವ ಜನರ ಜತೆ ಸೇರಬಾರದು.
ಕೆಲಸವೇ ನಮ್ಮ ಮೂಲ ಮಂತ್ರ ವಾಗಬೇಕು. ನೀವು ಎಷ್ಟೋ ಕಂಪನಿಯ ನಿರ್ಧೆಶಕರನ್ನು ನೋಡಿದ್ದೀರಿ, ಆದರೆ ಅವರು ಯಾವಾಗಲಾದರೂ ಹರಟೆ ಹೊಡೆಯುವುದು. ಸುಮ್ಮನೆ ತಿರುಗುವುದು ನೋಡಿದ್ದೀರಾ ? ಇಲ್ಲ . ಆತ ತನ್ನ ಕೆಲಸವಾಯಿತು , ತಾನಾಯಿತು. ಆ ರೀತಿ ಒಬ್ಬ ವಿಧ್ಯಾರ್ಥಿ ಓದಿನಲ್ಲಿ ಪೇಲಾಗಲಿ -ವ್ಯವಹಾರದಲ್ಲಿ ನಷ್ಟವಾದಾಗ ಮತ್ತೆ ಪ್ರಯತ್ನ ಪಟ್ಟು ಯಶಸ್ಸನ್ನು ಗಳಿಸಿಕೊಳ್ಳಬೇಕು. ಬೇರೆಯವರು ಸಿಗರೆಟ್ ಬೀಡಿಗೆ ,ಮಧ್ಯ ಜೂಜೂಗಾರಿಕೆಗೆ ದಾಸರಾದರೆ ನೀವು ಮಾಡುವ ಕೆಲಸಕ್ಕೆ ದಾಸರಾಗಬೇಕು. ಇದುವೇ ಯಶಸ್ಸಿನ ಗುಟ್ಟು.!
ನಿಮ್ಮ ಸನ್ ನ್ಯಾಚುರಲ್ ಪ್ಲಾಶ್ ಈಗ ಯು ಟ್ಯುಬಿ ನಲ್ಲಿ ನೋಡಲು ಮರೆಯದಿರಿ . ಇಂದೇ ನೋಡಿ
ವಂದನೆಗಳೊಂದಿಗೆ
ಎ.ಟಿ.ನಾಗರಾಜ
ಸೋಮವಾರ, ಫೆಬ್ರವರಿ 21, 2011
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ