ನಾವು ಗ್ರಾಮೀಣ ವಾಸಿಗಳು. ನಮಗೂ ಪ್ರಕೃತಿಗೂ ಹತ್ತಿರದ ಸಂಭಂದ , ನಾವು ಮರಗಳಿಗೆ ಒಂದೊಂದು ಹೆಸರನ್ನು ಇಟ್ಟವರು. ಗದ್ದೆಗಳಿಗೆ ಒಂದೊಂದು ಹೆಸರನ್ನು ಇಟ್ಟವರು . ಹಾಗೆಯೇ ಗ್ರಾಮೀಣ ಪ್ರದೇಶದಲ್ಲಿ ಬಾವಿಗಳಿಗೂ ಹಲವಾರು ಹೆಸರನ್ನು ಇಟ್ಟಿರುತ್ತೇವೆ. ಹೊಳೆ ಪಕ್ಕದ ಬಾವಿ, ರಸ್ತೆ ಪಕ್ಕದ ಬಾವಿ, ಕೆರೆ ಪಕ್ಕದ ಬಾವಿ, ಗದ್ದೆ ಬಾವಿ . ತೋಟದ ಬಾವಿ ಇತ್ಯಾದಿ,
ನಾವು ಹೊಂಡವನ್ನು ಅಥವಾ ಬಾವಿಯನ್ನು ನೀರಿಗಾಗಿ ತೋಡುತ್ತೇವೆ. ಒಮ್ಮೊಮ್ಮೆ ನೀರು ಸಿಗುತ್ತದೆ. ಇನ್ನೊಮ್ಮೆ ಕಲ್ಲು ಸಿಗುತ್ತದೆ. ಮತ್ತೊಮ್ಮೆ ಹಿಸ್ತು ಹೋಗುವ ಬಿಳಿ ಮಣ್ಣು ಸಿಗುತ್ತದೆ. ಆದರೆ ನಮಗೆ ನೀರಿನ ಅನಿವಾರ್ಯತೆ ಇರುವುದರಿಂದ ಹಾಗೆಯೇ ಬಿಡುವುದಿಲ್ಲ . ನೀರು ಸಿಗುವ ವರೆಗೂ ಶತ ಪ್ರಯತ್ನ ಮಾಡಿ ನೀರನ್ನು ಪಡೆಯುತ್ತೇವೆ. ಹಾಗೆಯೇ ನೀವು ಯಾವುದೇ ನೆಟ್ ವರ್ಕ್ ಮಾರ್ಕೆಟಿಂಗ್ ಅಥವಾ ಸ್ವಂತ ವ್ಯವಹಾರ ಪ್ರಾರಂಭಿಸಿ ಆದರೆ ಪ್ರಾರಂಭದಲ್ಲೇ ಹಣ ಮಾಡುತ್ತೇನೆ ಎನ್ನುವುದನ್ನು ಮನಸ್ಸಿನ್ನಿಂದ ದೂರವಿಡಿ. ಮೊದಲು ಅನುಭವ ಪಡೆಯಿರಿ. ನಂತರ ಹಣ ತನ್ನಿಂದ ತಾನಾಗಿಯೇ ನಿಮ್ಮ ಬಳಿ ಬರುತ್ತದೆ.
ಬಾವಿ ತೋಡದೆ ನೀರು ಬಂದ ಮೇಲೆ ಬಾವಿ ತೋಡುತ್ತೇನೆ ಎನ್ನುವುದು . ಕೆಲಸ ಸಿಕ್ಕಿದ ಮೇಲೆ ಓದುತ್ತೇನೆ ಎನ್ನುವುದು. ಮಕ್ಕಳಾದ ಮೇಲೆ ಮದುವೆ ಆಗುತ್ತೇನೆ ಎನ್ನುವುದು ನಗೆಯಾಟದ ಮಾತು.
ಮೊದಲು ಸ್ಟೆಪ್ ಇಡಿ. ನಂತರ ಮುಂದಿನದು.
ವಂದನೆಗಳೊಂದಿಗೆ
ಎ.ಟಿ.ನಾಗರಾಜ
ಶುಕ್ರವಾರ, ಫೆಬ್ರವರಿ 18, 2011
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ