ಮೊನ್ನೆ ತಾನೇ ಸುಮಾರು ರಾತ್ರಿ ಹತ್ತು ಗಂಟೆಯ ವೇಳೆಗೆ ನಾನು ನಮ್ಮ ಅಕ್ಕನ ಮನೆಗೆ ಫೋನ್ ಮಾಡಿದೆ. ಉಭಯ ಕುಸಲೋಪರಿ ವಿಚಾರಿಸಿದೆ. ಆದರೆ ಅಕ್ಕನ ಮಗ ನವೀನ್ ಕುಮಾರ್ ಇನ್ನೂ ಎಚ್ಚರವಾಗಿರುವುದು ತಿಳಿಯಿತು. ಇನ್ನೂ ಎಲ್ .ಕೆ.ಜಿ,
ಗೆ ಹೋಗುವ ಹುಡುಗ ಇಷ್ಟು ಹೊತ್ತು ಮಲಗಿಲ್ಲ ಏಕೆ ಎಂದು ವಿಚಾರಿಸಿದೆ. ಅದಕ್ಕೆ ಅಕ್ಕ ಇವತ್ತು ಭಾನುವಾರ ಬೆಳಿಗ್ಗೆಯಿಂದ ಗಡಿಯಾರದ ಮುಂದೆ ಪೆನ್ಸಿಲ್ ಹಾಗೂ ನೋಟ್ ಬುಕ್ ಹಿಡಿದು ಗಡಿಯಾರದ ಚಿತ್ರ ಬರೆಯುತ್ತೇನೆಂದು ಕುಳಿತಿದ್ದಾನೆ. ಆದರೆ ಇನ್ನೂ ಆತನಿಗೆ ಗಡಿಯಾರದ ಚಿತ್ರ ಬರೆಯಲು ಆಗಲಿಲ್ಲವಂತೆ . ಯಾಕೆ ಎಂದು ವಿಚಾರಿಸು ಎಂದು ಫೋನ್ ಮಗನ ಹತ್ತಿರ ಕೊಟ್ಟಳು ಅಕ್ಕ. ನಾನು ಆತನನ್ನು ವಿಚಾರಿಸಿದಾಗ ನನಗೆ ತುಂಬಾ ಅಚ್ಚರಿಯಾಯಿತು. ಯಾಕೆಂದರೆ ಈತ ಗಡಿಯಾರದ ಚಿತ್ರ ಬರೆದು ಮುಗಿಸುವಷ್ಟರೊಳಗೆ ಅದು ಐದು ಹತ್ತು ನಿಮಿಷ ಮುಂದಿನ ವೇಳೆ ತೋರಿಸುತ್ತಿತ್ತು. ಹಾಗಾಗಿ ಈತ ನೈಜ ಗಡಿಯಾರದ ವೇಳೆ ಬರೆಯುವುದರಲ್ಲಿ ಸೋತು ಹೋಗಿದ್ದ. ಅದಕ್ಕೆ ನಾನು ಹೇಳಿದೆ ನೀನು ಗಡಿಯಾರದ ಬ್ಯಾಟರಿ ತೆಗೆದಿಟ್ಟು ಈಗ ಅದರ ಚಿತ್ರ ಬರೆ ಸರಿಯಾಗಿ ಬರೆಯುತ್ತಿ ಎಂದು ! ಆತ ಅದೇ ರೀತಿ ಮಾಡಿ ಚಿತ್ರ ಬರೆದು ಮುಗಿಸಿದ. ಮಗುವಿನ ಮುಗ್ಧ ಮನಸ್ಸಿನ ಮುಂದೆ ನಾನು ತುಂಬಾ ಚಿಕ್ಕವನಾಗಿ ಹೋಗಿದ್ದೆ.
ವಂದನೆಗಳೊಂದಿಗೆ
ಎ.ಟಿ,ನಾಗರಾಜ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ