ನಿನ್ನೆ ನಾವು ಮನಸ್ಸನ್ನು ಏಕಾಗ್ರಗೊಳಿಸಲು ಅಭ್ಯಾಸವೇ ಪ್ರಧಾನ ಸಾಧನ ಎಂದು ತಿಳಿದುಕೊಂಡೆವು . ಇವತ್ತು ಮನಸ್ಸು ಏಕಾಗ್ರವಾಗಳು ಅತ್ಯಂತ ಮುಖ್ಯಾಂಶ ವೆಂದರೆ ಪ್ರೀತಿ ವೆಂಬ ವಿಷಯದ ಬಗ್ಗೆ ತಿಳಿದು ಕೊಳ್ಳೋಣ.ನೀನು ಯಾವುದನ್ನೂ ಪ್ರೀತಿಸುತ್ತೀಯೋ ಅದರಲ್ಲಿ ನಿನ್ನ ಮನಸ್ಸು ಏಕಾಗ್ರಗೊಂಡಿರುತ್ತದೆ. ಇದು ನಿಯಮ. ಆದ್ದರಿಂದ ನೀನು ನಿನ್ನ ಪಟ್ಯ ವಿಷಯಗಳಲ್ಲಿ ಪ್ರೀತಿಯಿಡಬೇಕು.ಆಗ ಅವುಗಳಲ್ಲಿ ಮನಸ್ಸನ್ನು ಏಕಾಗ್ರಗೊಳಿಸಿಕೊಂಡು ಅಧ್ಯಯನ ಮಾಡಲು ಸಾಧ್ಯವಾಗುತ್ತದೆ.
ಇವಿಷ್ಟು ನಿನ್ನ ಅಧ್ಯಯನಕ್ಕೆ ನೇರವಾಗಿ ಸಂಬಂಧಪಟ್ಟ ವಿಚಾರಗಳಾಯಿತು. ಇನ್ನು ಕೆಲವು ಅಂಶಗಳಕಡೆಗೆ ನೀನು ಗಮನಹರಿಸಬೇಕಾದದ್ದಿದೆ . ಮೊದಲನೆಯದಾಗಿ ನಿನ್ನ ಊಟ ತಿಂಡಿಯ ವಿಷಯ, ಹಿತವಾಗಿ ಮಿತವಾಗಿ ಕಾಲಕ್ಕೆ ಸರಿಯಾಗಿ ಊಟಮಾಡುವುದರಿಂದ ಮನಸ್ಥಿತಿ ಸದಾ ಹದವಾಗಿರುತ್ತದೆ. ಅತಿಯಾಗಿ ಉಂಡರೆ ನಿದ್ರೆ,ಅತಿ ಕಡಿಮೆ ಉಂಡರೆ ನಿತ್ರಾಣ ಕಾಲಕಾಲಕ್ಕೆಸರಿಯಾಗಿ ಊಟ ಮಾಡದಿದ್ದರೆ ಮನಸ್ಸು ಏರಿಳಿತಗಳಿಗೆ ಒಳಗಾಗುತ್ತದೆ.
ಇನ್ನು ವ್ಯಾಯಾಮದ ವಿಷಯ. ಆಟಗಳನ್ನಾಡುವವರು ಆಡಿಕೊಳ್ಳಲಿ , ನೀನು ಮಾತ್ರ ಒಂದೋ ಯೋಗಾಸನಗಳನ್ನು ಅಭ್ಯಾಸಮಾಡು. ಅಥವಾ ಅಂಗಸಾಧನೆ ಮಾಡು. ಕೇವಲ ಮುಕ್ಕಾಲು ಗಂಟೆಯಲ್ಲಿ ನಿನ್ನ ಶರೀರದ ಪ್ರತಿಯೊಂದು ಅಂಗಕ್ಕೂ ವ್ಯಾಯಾಮಸಿಗುವಂತಿದ್ದರಾಯಿತು . ಈ ವ್ಯಾಯಾಮದ ವಿಷಯದಲ್ಲಿ 'ಹೆಚ್ಚಿಗೆ ಮಾಡಬೇಡ , ಮಾಡುವುದನ್ನು ಬಿಡಬೇಡ' ಎಂಬನಿಯಮಾವನ್ನಿಟ್ಟುಕೊಂಡರೆ ಕ್ಷೇಮ .
ಯಾವಾಗಲೂ ಕುದಿಸಿ ಆರಿದ ನೀರನ್ನೇ ಕುಡಿಯುವ ಅಭ್ಯಾಸವಿಟ್ಟುಕೊಂಡರೆ ಎಷ್ಟೋ ಕಾಯಿಲೆಗಳು ಹತ್ತಿರವೇ ಸುಳಿಯದಂತೆಮಾಡಬಹುದು.ನಿನ್ನೆಲ್ಲ ಪ್ರಗತಿಗೆ ದೊಡ್ಡ ಪ್ರತಿಬಂಧಕವೆಂದರೆ ಕಾಯಿಲೆಗಳು. ಶರೀರ-ಮನಸ್ಸುಗಳ ಹುಮ್ಮಸ್ಸ್ನ್ನೆಅಪಹರಿಸಿಬಿದುತ್ತವೆ
ಅವುಗಳು. ಆದ್ದರಿಂದ ಎಚ್ಚರ!.
ಇನ್ನೊಂದು ವಿಚಾರ. ಇದನ್ನು ಅತ್ಯಂತ ಮುಖ್ಯ ವಿಚಾರವೆಂದೇ ಭಾವಿಸಬಹುದು . ಅದೇನೆಂದು ಹೇಳಲೇ? ಉತ್ಸಾಹ ! ನಿನ್ನಲ್ಲಿ ಸದಾ ಉತ್ಸಾಹ ತುಂಬಿಕೊಂಡಿರಲಿ-ಅಚ್ಚಳಿಯದ ಉತ್ಸಾಹ!ನಿತ್ಯೋತ್ಸಾಹ! ಜೀವನದ ಎಲ್ಲ ಕ್ಷೇತ್ರಗಳಲ್ಲೂ ನಮ್ಮನುಜಯಶಾಲಿಯಾಗಿಸುವ ಕೀಲಿಕೈ ಈ ಉತ್ಸಾಹ. ನೀನೊಂದು ಉತ್ಸಾಹದ ಬುಗ್ಗೆಯೇ ಆಗಬೇಕು. ಸಂಸ್ಕೃತ ಪದವಾದ ಈಉತ್ಸಾಹಕ್ಕೆ ಕನ್ನಡದಲ್ಲಿ ಹುಮ್ಮಸ್ಸು.ಹುರುಪು ಎನ್ನಬಹುದು. ನಿನ್ನ ಹಿರಿಯರು ನಿನ್ನನ್ನು ಹುರಿದುಂಬಿಸುವುದರ ಮುಲಕ ಈ ಉತ್ಸಾಹವನ್ನು ನಿನ್ನಲ್ಲಿ ಮೂಡಿಸಬೇಕು.ಆದರೆ ಹೆಚ್ಚಿನ ಹಿರಿಯರು ತಮ್ಮ ತಮ್ಮ ತಾಪತ್ರಯಗಲ್ಲೇ ಮುಳುಗಿ ಅವರೇ ಇತರರಿಂದಪ್ರೋತ್ಸಾಹವನ್ನು ನಿರೀಕ್ಷಿಸುತ್ತಿರುವಾಗ ನಿನಗಾರು ನೀಡುತ್ತಾರೆ ಉತ್ಸಾಹವನ್ನು? ಆದ್ದರಿಂದ ನೀನೆ ಅದನ್ನು ನಿನ್ನೋಳಗಿನಿಂದಲೇ ಹೊರ ಹೊಮ್ಮಿಸಿಕೊಳ್ಳಬೇಕು.
ಎ.ಟಿ.ನಾಗರಾಜ
ಡಬ್ಲ್ಯು ಡಬ್ಲ್ಯು ಡಬ್ಲ್ಯು ಸನ್ ನ್ಯಾಚುರಲ್ ಫ್ಲಾಶ್.ಕಂ/
+೯೧-9632172486
ಬುಧವಾರ, ಜೂನ್ 9, 2010
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ