ಸಮಯ ಮಿಗಿಸಿ ಏನು ಮಾಡಬೇಕಾಗಿದೆ ಎನ್ನುವ ಭೂಪರು ಇದ್ದಾರೆ , ಇರಲಿ ಆದರೆ ಮಿಗಿಸಿದ ಸಮಯವನ್ನುಸದುಪಯೋಗಪಡಿಸಿಕೊಳ್ಳಬೇಕೆನ್ನುವವರು ಮಾತ್ರ ಇಂಥವರಿಂದ ದೂರವಿರಬೇಕು!
ಸಮಯವನ್ನು ನಷ್ಟಗೊಳಿಸುವಲ್ಲಿ ಮರವೇ ವಹಿಸುವ ಪಾತ್ರ ಬಹಳ ದೊಡ್ಡದು . ತನ್ನ ಕೋಣೆಗೆ ಬೀಗ ಹಾಕಿಕೊಂಡು ದೂರದಸ್ನೇಹಿತನ ಮನೆಗೆ ಹೋದವನೊಬ್ಬ ಅಲ್ಲಿ ಕಾಫಿ-ತಿಂಡಿ ತಿಂದು ಮಾತುಕತೆ ಮುಗಿಸಿ ಕೋಣೆಗೆ ಹಿಂದಿರುಗಿದ ; ಬೀಗ ತೆಗೆಯಹೊರಟ, ಆದರೆ ಕೀಲಿಕೈಯೇ ಇಲ್ಲ !ಎಲ್ಲಿ ?....... ಕೀಲಿಕೈ ಎಲ್ಲಿ ? ಹಾ !ಸ್ನೇಹಿತನ ಮನೆಯಲ್ಲೇ ಬಿಟ್ಟು ಬಂದಿದ್ದಾನೆ! ಈ ಹಾಳಾದಮರವು! ಈಗ ಮತ್ತೆ ಅಷ್ಟು ದೂರ ಹೋಗಿ ಬರಬೇಕಾಯಿತು; ಸಮಯ ನಷ್ಟವಾಯಿತು.
ಎಷ್ಟೋ ಜನರಿಗೆ ಕುಳಿತರೆ-ನಿಂತರೆ ಮರವು, ಈಗತಾನೆ ಊಟ ಮಾಡಿದ್ದನ್ನು ಇನ್ನೊಂದು ಘಳಿಗೆಯಲ್ಲಿ ಮರೆಯುವವರುಉಂಟು.ಹಣದ ಅಗತ್ಯ ಬಿದ್ದಾಗ ಸ್ನೇಹಿತನ ನೆನಪಾಗಿ ಸಾಲ ತೆಗೆದುಕೊಂಡು ಹೋಗಿ, ಹಿಂದಿರುಗಿಸುವ ಸಮಯದಲ್ಲಿ ಮಾತ್ರಸುಲಭವಾಗಿ ಮರೆಯುವವರಿದ್ದಾರೆ. ಇದು ಮಾತ್ರ ಜಾಣತನದ ಮರವು! ಲಾಭದಾಯಕ ಮರುವು!
ಮರವಿಗೆ ಕಾರಣವೇನಿರಬಹುದು? ಕಾರಣಗಳು ಬಹಳ.ಅವುಗಳಲ್ಲಿ ಎಚ್ಚರಗೇಡಿತನವೇ ಮುಖ್ಯ ಕಾರಣ.
ಶುಭದಿನದ ಶುಭಾಶಯಗಳೊಂದಿಗೆ ನೆಟ್ ನಾಗ.
ಎ.ಟಿ.ನಾಗರಾಜ
ಡಬ್ಲ್ಯು ಡಬ್ಲ್ಯು ಡಬ್ಲ್ಯು ಸನ್ ನ್ಯಾಚುರಲ್ ಫ್ಲಾಶ್ .ಕಂ/
+9632172486
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ