ಸಮಯವನ್ನು ಸದುಪಯೋಗಪಡಿಸಿಕೊಳ್ಳಬೇಕೆಂಬವರಿಗೆ ಕೆಲವು ಸಲಹೆಗಳು;
೧. ಸಮಯವು ಅತ್ಯಂತ ಮಹತ್ವ ಪೂರ್ಣವಾದದ್ದು ಎಂಬ ಅರಿವಿರಲಿ.
೨. ಕಳೆದುಹೋದ ಕಾಲ ಮರಳಿ ಬಾರದು ಎಂಬ ಕಟುಸತ್ಯ ತಿಳಿದಿರಲಿ.
೩. 'ಯಾವಯಾವ ಸಮಯದಲ್ಲಿ ಏನೇನನ್ನು ಮಾಡಬೇಕೆಂದು ಕೊಂಡಿರುವೆನೋ ಅದನ್ನು ಮಾಡಿಯೇ ತೀರುತ್ತೇನೆ 'ಎಂಬ ದೃಢತೆಯಿರಲಿ.
೪. ನಿರ್ದಿಷ್ಟ ಕಾಲದಲ್ಲಿ ನಿರ್ದಿಷ್ಟ ಕಾರ್ಯವನ್ನು ಮಾಡುವ ಅಭ್ಯಾಸವಿದ್ದರೆ 'ಈಗೇನು ಮಾಡಲಿ, ಇನ್ನೇನು ಮಾಡಲಿ'ಎಂದು ತಲೆಕೆರೆದುಕೊಳ್ಳುವುದು ತಪ್ಪುತ್ತದೆ. ಸಮಯ ಉಳಿಯುತ್ತದೆ.
೫. ಕೈಗೊಳ್ಳುವ ಪುಟ್ಟ ಕಾರ್ಯದ ವಿಷಯದಲ್ಲೂ ಸ್ಪಷ್ಟ ಕಲ್ಪನೆಯಿರಲಿ .
೬. ಯಾವುದೇ ಕಾರ್ಯವನ್ನು ಉತ್ಸಾಹದಿಂದಲೂ ಎಚ್ಚರಿಕೆಯಿಂದಲೂ ಮಾಡದಿದ್ದರೆ ಸಮಯ ನಷ್ಟವಾಗುತ್ತದೆ.ಎಂಬ ಸೂಕ್ಷ್ಮ ತಿಳಿದಿರಲಿ.
೭. ಮಾಡಿದ ಕೆಲಸವೊಂದು ಕೆಟ್ಟುಹೋದಾಗ ತಲೆಗೆ ಕೈಕೊಟ್ಟು ಚಿಂತಿಸುತ್ತಾ ಕುಳಿತುಕೊಳ್ಳುವುದರ ಬದಲು ಅದನ್ನು ಸರಿಪಡಿಸುವುದರ ಬಗ್ಗೆ ಆಲೋಚಿಸುವುದು ಅಥವಾ ಮುಂದಿನ ಕಾರ್ಯಕ್ಕೆ ಗಮನಹರಿಸುವುದು ಲಾಭದಾಯಕ.
೮. ಸಮಯೋಚಿತವಾಗಿ ಯೋಚಿಸಬಲ್ಲವನು ಎಲ್ಲ ವಿಷಯಗಳಲ್ಲೂ ಜಯಶಾಲಿಯಾಗುತ್ತಾನೆ.
ಶುಭ ದಿನದ ಶುಭಾಶಯಗಳೊಂದಿಗೆ
ನೆಟ್ ನಾಗ
ಎಬ್ಬೋಡಿ ತಿಮ್ಮಪ್ಪ ನಾಗರಾಜ
ಸನ್ ನ್ಯಾಚುರಲ್ ಫ್ಲಾಶ್.ಕಂ/
+೯೧-9632172486 -
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ