ವೇಳಾಪಟ್ಟಿಯ ತಂತ್ರವನ್ನು ವಿವರಿಸಿ ಸಮಯವನ್ನು ಸದುಪಯೋಗ ಪಡಿಸಿಕೊಳ್ಳುವ ವಿಧಾನವನ್ನು ತಿಳಿಸಿರುವಿರಿ. ಆದರೆಸಾಕಷ್ಟು ಅಧ್ಯಯನ ಮಾಡಿದ ಮೇಲೂ ಮಿಗುವ ಸಮಯವನ್ನು ಬಳಸಿ ಕೊಳ್ಳುವುದು ಹೇಗೆ? ಎಂದು ಇಲ್ಲೊಬ್ಬ ವಿಧ್ಯಾರ್ಥಿಬರೆದಿದ್ದಾರೆ
ಇದು ಬುದ್ಧಿವಂತ -ವಿದ್ಯಾರ್ಥಿಗಳ ಸಮಸ್ಯೆ . ಏಕೆಂದರೆ ಅವರು ಮಾತ್ರ ಕಡಿಮೆ ಸಮಯದಲ್ಲಿ ಹೆಚ್ಚು ಓದಬಲ್ಲರಲ್ಲದೆ ಓದಿದ್ದನ್ನುನೆನಪಿಟ್ಟು ಕೊಳ್ಳಬಲ್ಲರು .ಅಂಥವರು ಚಿತ್ರಕಲೆ ,ಸಂಗೀತ, ನೃತ್ಯ,ಕೈಗಾರಿಕೆ, ಸಾಹಿತ್ಯವೇ ಮೊದಲಾದ ವಿಷಯಗಳಲ್ಲಿತಮಗಿಷ್ಟವಾದುದನ್ನು ಆರಿಸಿಕೊಂಡು ಅಭ್ಯಸಿಸಬಹುದು.ಆದರೆ, ಮೂರನೇ ಶ್ರೇಣಿಯಲ್ಲಿ ಉತ್ತಿರ್ಣರಾಗುವ ಅಥವಾ ನಪಾಸೇಆಗಬಹುದಾದ ವಿದ್ಯಾರ್ಥಿಗಳು ತಮ್ಮ ಪಾಠವಿಷಯಗಳಲ್ಲೇ ಹೆಚ್ಚು ಮಗ್ನರಾಗಿರುವುದು ಒಳ್ಳೆಯದು.ಹೀಗೆ ಮಾಡಿದರೆ , ನಪಾಸಾಗುವವರು ಮೂರನೇ ಶ್ರೇಣಿಯಲ್ಲಿ ಆದರು ಉತ್ತೀರ್ಣರಾದರು;ಮೂರನೇ ಶ್ರೇಣಿಯಲ್ಲಿ ಪಾಸಾಗುವವರು ಎರಡನೇಶ್ರೇಣಿಯಲ್ಲಿ ಪಾಸಾದಾರು.ಎರಡನೇ ಶ್ರೇಣಿಯಲ್ಲಿ ಪಾಸಾಗುವವರು ಪ್ರಥಮ ಶ್ರೇಣಿಯಲ್ಲಿ ಪಾಸಾದಾರು. ಕನಿಷ್ಠ ಪಕ್ಷ ಪ್ರಥಮಶ್ರೇಣಿಯಲ್ಲಾದರು ಪಾಸಾದರೆ ಮುಂದೆ ಕಾಲೇಜು ವಿದ್ಯಾಭ್ಯಾಸ -ಸುಲಭ ಸುಗಮವಾಗಲು ಸಾಧ್ಯವಾಗುತ್ತದೆ.ಎಸ್ಸೇಸ್ಸಲ್ಸಿ ಯಲ್ಲೇಮೂರನೇ ಶ್ರೇಣಿಯಲ್ಲಿ ಪಾಸಾಗುವವರು ಕಾಲೇಜಿನಲ್ಲಿ ಡುಮ್ಕಿ ಹೊಡಿಯುವುದು ಖಂಡಿತ.
ನಿಮ್ಮ ನಡುವೆ ನಗುನಗುತ್ತ ಓಡಾಡುವವರಿಗೆ ಯಾವುದೇ ಸಮಸ್ಯೆಗಳು ಇರಲಾರದು ಎಂದು ಭಾವಿಸಬೇಡಿಅವರಿಗೂ ಸಮಸ್ಯೆಗಳಿವೆ . ಆದರೆ ಅಂತಹ ಸಮಸ್ಯೆಗಳನ್ನು ಎದುರಿಸುವ ಸಾಮಾರ್ಥ್ಯ ಅವರಿಗಿದೆ . ತೊಂದರೆಗಳ ನಡುವೆಯೂನಗುವುದನ್ನು ಕಲಿಯಿರಿ.
-ಶುಭದಿನದೊಂದಿಗೆ
ನೆಟ್ ನಾಗ
ಎ.ಟಿ.ನಾಗರಾಜ
ಡಬ್ಲ್ಯು ಡಬ್ಲ್ಯು ಡಬ್ಲ್ಯು ಸನ್ ನ್ಯಾಚುರಲ್ ಫ್ಲಾಶ್ .ಕಂ/
+೯೧-9632172486
.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ