ನೀನೆ ಓದಿಕೊಳ್ಳುವಾಗ ನಿನಗೆ ಯಾವ ಅಂಶ ಅರ್ಥವಾಗಿರಲಿಲ್ಲವೋ ಅದು ನಿನಗೆ ತರಗತಿಯಲ್ಲಿ ಸ್ವಷ್ಟವಾಗುತ್ತದೆ.ಬಳಿಕ,ಮನೆಗೆಹಿಂದಿರುಗಿದ ಮೇಲೆ ರಾತ್ರಿ ಅಧ್ಯಯನದ ವೇಳೆಯಲ್ಲಿ.ಅಂದು ಮಾಡಿದ ಪಾಠ ಪ್ರವಚನಗಳನ್ನೊಮ್ಮೆ ಪುನರಾವರ್ತನೆಮಾಡಬೇಕು.ಹೀಗೆ ಪೂರ್ವತಯಾರಿ ಮಾಡಿಕೊಂಡು ಹೋಗುವುದು . ಮನೆಗೆ ಬಂದು ಪುನರಾವರ್ತನೆ ಮಾಡುವುದು -ಇದನ್ನುಕೇವಲ ೩ ತಿಂಗಳು ನಡೆಸಿಕೊಂಡು ಬಾ. ಆಮೇಲೆ , ಅಷ್ಟಕ್ಕೇ ಅದೆಷ್ಟು ಪ್ರಯೋಜನವನ್ನು ಪಡೆದಿರುವೆ ಎಂಬುದನ್ನು ಕಂಡು ನೀನುಬೆರಗಾಗದಿರಲಾರೆ . ಸ್ವಲ್ಪ ಎಚ್ಹ್ಹಾಶಕ್ತಿಯನ್ನುಪಯೋಗಿಸಿ , ಎಂದರೆ ಸ್ವಲ್ಪ ಹಟ ತಂದುಕೊಂಡು ವರ್ಷವಿಡಿ ಈ ಕ್ರಮವನ್ನುಅನುಸರಿಸಿದಿಯಾದರೆ ಪಾಠ ಗಳೂ 'ಬೋರ್ 'ಆಗುವುದಿಲ್ಲ.ಪರೀಕ್ಷೆಗಳು ಭಾರವಾಗುವುದಿಲ್ಲ.
ಆದರೆ, ಹೀಗೆ ಪ್ರತಿದಿನ ಪೂರ್ವ ತಯಾರಿ-ಪುನರಾವರ್ತನೆಯ ವೃತ ತೊಟ್ಟರೆ ಅಲ್ಲಿ ಇಲ್ಲಿ ಅಲೆದಾಡುವಂತಿಲ್ಲ.ಗಂಟೆಗಟ್ಟಲೆಟಿವಿಯ ಮುಂದೆ ಕುಳಿತಿರುವಂತಿಲ್ಲ.ಸ್ನೇಹಿತರನ್ನು ಕಟ್ಟಿಕೊಂಡು ಹರಟುತ್ತ ಕಾಲಕಳೆಯುವಂತಿಲ್ಲ. ವಾರ್ಷಿಕ ಪರೀಕ್ಷೆಮುಗಿಯುವವರೆಗೂ ವ್ರತ ಧಾರಕನಂತೆ ಇರಬೇಕಾಗುತ್ತದೆ.ನಿಜಕ್ಕೂ ವಿದ್ಯಾಭ್ಯಾಸವೆಂದರೆ ಒಂದು ವ್ರತವೇ ಸರಿ. ಆದ್ದರಿಂದನೀನೊಬ್ಬ 'ವ್ರತಧಾರಕನೆಂದೇ ತಿಳಿದುಕೋ .ಸತ್ಯವಾಗಿ ಹೇಳುವುದಾದರೆ ಅಧ್ಯಾಪಕರು ವಿದ್ಯಾದಾನದ ವ್ರತಧಾರಕರು.ವಿದ್ಯಾರ್ಥಿಗಳು ವಿದ್ಯಾಭ್ಯಾಸದ ವ್ರತ ಧಾರಕರು . ದೃಢ ಮನಸ್ಸಿನಿಂದ ವ್ರುತಧಾರಣೆ ಮಾಡದಿದ್ದರೆ ಯಾವಮಹಾಕಾರ್ಯವೂ ಕೈಗೂಡದು .
ವೇಳಾಪಟ್ಟಿಗೆ ಸಂಬಂಧಿಸಿದಂತೆ ಇನ್ನೊಂದು ಮಾತು; ಸಾಮಾನ್ಯ ದಿನಚರಿಯ ವೇಳಾಪಟ್ಟಿಯಲ್ಲದೆ ವಿಶೇಷ ರಜಾದಿನಗಳಲ್ಲಿದೊರೆಯುವ ಅಧಿಕ ಸಮಯವನ್ನು ಸದುಪಯೋಗಪಡಿಸಿಕೊಳ್ಳಲು ವಿಶೇಷ ವೇಳಾ ಪಟ್ಟಿಯನ್ನು ಆಗಾಗ ಹಾಕಿಕೊಳ್ಳುತ್ತಿರಬೇಕು
-ಎ.ಟಿ.ನಾಗರಾಜ
+೯೧-೯೬೩೨೧೭೨೪೮೬
ಡಬ್ಲು ಡಬ್ಲು ಡಬ್ಲು . ಸನ್ ನಚ್ಯುರಲ್ ಫ್ಲಾಶ್.ಕಂ/
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ