ಇದಕ್ಕೆ ಇನ್ನೊಂದು ಉಪಾಯವನ್ನು ಅನುಸರಿಸಬಹುದು-"ಈ ಸಲದ ಪರೀಕ್ಷೆಯಲ್ಲಿ ನನ್ನ ಸ್ನೇಹಿತರಿಗಿಂತಲೂ ಹೆಚ್ಚಿನಅಂಕಗಳನ್ನು ಪಡೆದು ಉತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದುತ್ತೇನೆ"ಎಂದು ನಿನಗೆ ನೀನೆ ಶಪಥ ಮಾಡಿಕೊ. ಇದುನಿಶ್ಚಯವಾಗಿಯೂ ನಿನ್ನೊಳಗಿರುವ ಛಲವನ್ನು ಬಡಿದೆಬ್ಬಿಸುತ್ತದೆ.
ಒಟ್ಟಿನಲ್ಲಿ ನೀನು ಉತ್ಸಾಹದಿಂದ ಪುಟಿಯುವ ಚಂಡಿನಂತಿರಬೇಕೆ ಹೊರತು ನೆನೆಸಿದ ನಸೆ ನಸೆ ಅವಲಕ್ಕಿಯಂತೆಇರಬಾರದು.ಸದಾ ಪ್ರಸನ್ನನಾಗಿರು. ಅಳುಮೋರೆ ಅಥವಾ ಗಂಟು ಮುಖ ಹಾಕಿಕೊಂಡಿದ್ದರೆ ಆದು ಇರುವ ಅಲ್ಪ ಉತ್ಸಾಹವನ್ನುವರ್ಧಿಸುತ್ತ ಅದಮ್ಯ ಚೈತನ್ಯದ ಪ್ರತಿರೂಪವೇ ನೀನಾಗುವೆ. ಹೀಗೆ , ಯಾವಾಗ ಈ ಉತ್ಸಾಹವನ್ನು ನೀನುಕಾಪಾದಿಕೊಳ್ಳುತ್ತಿಯೋ ಆಗ ನಿನ್ನ ಅಧ್ಯಯನವೆಲ್ಲ ಆನಂದಮಯವಾಗುತ್ತದೆ.ಯಶಸ್ವಿಯಾಗುತ್ತದೆ. ಆದ್ದರಿಂದ ದಿನೇ ದಿನೇ ನಿನ್ನಉತ್ಸಾಹದ ಚಿಲುಮೆ ಇನ್ನಷ್ಟು ಹೆಚ್ಚು ಚಿಮ್ಮುವಂತೆ ನೋಡಿಕೊ.
ಈ ಉತ್ಸಾಹಕ್ಕೆ ಸಂಬಂಧಿಸಿದಂತೆ ಇನ್ನೊಂದು ಅಂಶವನ್ನು ತಿಳಿದುಕೊಳ್ಳಲೇ ಬೇಕುನೀನು .ಮನಸ್ಸು ನಿದ್ರೆಯ ಜಾಡ್ಯವನ್ನುಕಳೆದುಕೊಂಡು ಸಂಪೂರ್ಣ ಎಚ್ಚತ್ತುಕೊಂಡಿರುವಾಗ ಅದು ಚಟುವಟಿಕೆಯಿಂದ ಕೂಡಿ ಚುರುಕಾಗಿರುತ್ತದೆ. ಆದ್ದರಿಂದ ಸಹಜವಾಗಿಉತ್ಸಾಹಪೂರ್ಣವಾಗಿರುತ್ತದೆ. ಹಾಗೆಯೇ ಉತ್ಸಾಹಪೂರ್ಣ ವಾತಾವರಣದಲ್ಲಿ ಮನಸ್ಸು ತನ್ನ ನಿದ್ರೆಯ ಜಾಡ್ಯವನ್ನು ತ್ಯಜಿಸಿಎಚ್ಚರವಾಗಿರುತ್ತದೆ. ಈ ಅಂಶವನ್ನು ಗಮನಿಸಿದಾಗ ನೀನು ನಿನ್ನ ಉತ್ಸಾಹವನ್ನು ಕಾಪಾಡಿಕೊಂಡರೆ ಅದರ ಪರಿಣಾಮವಾಗಿ ನಿನ್ನಮನಸ್ಸು ಸದಾ ಜಾಗೃತವಾಗಿರುತ್ತದೆ ಎಂಬುದು ತಿಳಿಯುವುದಿಲ್ಲವೇ?
ಈ ಮನಸ್ಸನ್ನು ಎಚ್ಚರವಾಗಿಡುವುದಕ್ಕಾಗಿಯೇ ಎಷ್ಟೋ ವಿದ್ಯಾರ್ಥಿಗಳು ಗಂಟೆ ಗಂಟೆಗೂ ಟೀ-ಕಾಫಿ ಕುಡಿಯುವುದನ್ನು ನೀನುನೋಡಿರಬಹುದು.ಆದರೆ ಈ ಕಾಫಿ-ಟೀ ಕ್ರಮೇಣ ಮೈಗೆ ಒಗ್ಗಿ ಅದನ್ನು ಕುಡಿದೇ ಗಾಢ ನಿದ್ರೆ ಮಾಡಿಬಿಡುತ್ತಾರೆ ಅವರು! ಆದ್ದರಿಂದಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದುವ ಮಹದಾಕಾಂಕ್ಷೆಯನ್ನು ಇಟ್ಟುಕೊಳ್ಳುವುದೇ ಉತ್ಸಾಹವನ್ನು ಕಾಪಾಡಿಕೊಳ್ಳಲು ಉತ್ತಮಉಪಾಯ. ನಿನ್ನ ವಿಷಯದಲ್ಲಿ ಮಹದಾಕಾಂಕ್ಷೆ ಎಂದರೇನು? ಇತರರಿಗಿಂತ ಅಧಿಕ ಅಂಕಗಳನ್ನು ಪಡೆದು ಅತ್ಯುತ್ತಮ ಶ್ರೇಣಿಯಲ್ಲಿತೇರ್ಗಡೆಹೊಂದುವ ಅಭಿಲಾಷೆ.
ಎ.ಟಿ.ನಾಗರಾಜ
ಡಬ್ಲ್ಯು ಡಬ್ಲ್ಯು ಡಬ್ಲ್ಯು ಸನ್ ನ್ಯಾಚುರಲ್ ಫ್ಲಾಶ್.ಕಂ/
+೯೧-9632172486
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ