ಶಿಸ್ತುಬದ್ಧ ಅಧ್ಯಯನದೊಂದಿಗೆ , ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳುವುದರ ಮೂಲಕ , ಮನದ ಮೂಲೆಯಲ್ಲಿ ಮನೆಮಾಡಿಕೊಂಡಿರುವ ಭಯದ ಮನೋವೃತ್ತಿಯನ್ನು ನಿವಾರಿಸಿಕೊಳ್ಳಬೇಕಾದುದು ಮುಖ್ಯವಾಗುತ್ತದೆ. ನೋಡಿದೆಯಾ,ಇಲ್ಲಿ ನೀನುಇನ್ನೊಂದು ಹೊಸ ಶಬ್ದವನ್ನು ಕೇಳುತ್ತಿರುವೆ ! ಆತ್ಮವಿಶ್ವಾಸ!ಎಂದರೇನು?ನಿನ್ನ ಶಕ್ತಿಯಲ್ಲಿ ನಿನಗೆ ನಂಬಿಕೆ;ನೀನು ಮಾಡಿದಅಧ್ಯಯನದಲ್ಲಿ ನಿನಗೆ ನಂಬಿಕೆ !ಪರೀಕ್ಷೆಯಲ್ಲಿ ಶಾಂತ ಮನಸ್ಕನಾಗಿ ಸರಿಯಾದ ಉತ್ತರವನ್ನೇ ಬರೆಯುತ್ತೇನೆ ಎಂಬ ದೃಢವಿಶ್ವಾಸಇದೇ ಆತ್ಮವಿಶ್ವಾಸ.ಈ ಆತ್ಮವಿಶ್ವಾಸವನ್ನು ಬೆಳೆಸಿಕೊಂಡೆಯಾದರೆ ಉತ್ಸಾಹ ಬರುತ್ತದೆ. ಹೆದರಿಕೆ ಹೋಗುತ್ತದೆ.
ಸರಿ. ನೀನೀಗ ಹಲವಾರು ವಿಚಾರಗಳನ್ನು ತಿಳಿದಂತಾಯಿತು. ಇಷ್ಟು ವಿಚಾರಗಳನ್ನು ತಿಳಿದ ನಿನಗೆ ಯಶಸ್ಸು ಕಟ್ಟಿಟ್ಟದ್ದು . ಆದರೆಅಷ್ಟೇ ಅಲ್ಲ; ಇನ್ನು ಒಂದು ವಿಚಾರವನ್ನು ತಿಳಿಯುವುದು ಬಾಕಿಯಿದೆ.ನೀನು ಈ ಪತ್ರವನ್ನು ಆಗಾಗ ಓದಿಕೊಳ್ಳಬೇಕೆಂಬುದೇ ಆವಿಚಾರ. ನೀನು ನಿನ ಪಟ್ಯಾಪುಸ್ತಕಗಳನ್ನು ಅಹ್ಯಯನ ಮಾಡಲು ಆರಂಭಿಸುವುದಕ್ಕಿಂತ ಮೊದಲು ಈ ಪತ್ರವನ್ನು ಅಧ್ಯಯನಮಾಡಿ ಇದರಲ್ಲಿ ನೀಡಿರುವ ಸಲಹೆಗಳಂತೆ ದಿನಂಪ್ರತಿಯು ನಡೆದು ಕೊಳ್ಳುತ್ತಿರುವೆಯೋ ಇಲ್ಲವೋ ಎಂಬುದನ್ನೂ ಆಗಾಗನೋಡಿಕೊಳ್ಳುತ್ತಿರಬೇಕು.
ಮುಂದಿನ ಪರೀಕ್ಷೆಯಲ್ಲಿ ನೀನು ಉನ್ನತ ಶ್ರೇಣಿಯಲ್ಲಿ ಉತ್ತಿರ್ಣನಾಗುವಂತೆ ದೇವರು ನಿನಗೆ ಅನುಗ್ರಹ ಮಾಡಲಿ!
ಹೃತ್ಪೂರ್ವಕ ಶುಭಾಶಯಗಳೊಂದಿಗೆ .
ಆತ್ಮೀಯ ಸ್ನೇಹಿತರೆ ಈ ಹಿಂದೆ ಸೋಮಶೇಖರ ಎನ್ನುವ ವಿದ್ಯಾರ್ಥಿ ತನ್ನ ಮನದಲ್ಲಿ ಮೂಡಿದ ಅನುಮಾನವನ್ನು ಪ್ರಶ್ನೆಕೇಳುವುದರ ಮೂಲಕ ಹೇಗೆ ಬಗೆ ಹರಿಸಿಕೊಂಡ ಎನ್ನುವುದನ್ನು ನೋಡಿದ್ದೀರಿ . ಹಾಗೇ ನಿಮ್ಮ ಮನದಲ್ಲಿ ಮೂಡಿದ ಪ್ರಶ್ನೆಗಳನ್ನು ನನಗೆಬರೆದು ಕಳುಹಿಸಿ. ಏಕೆಂದರೆ ಇಲ್ಲಿ ಸೋಮಶೇಖರ ಎನ್ನುವ ವಿದ್ಯಾರ್ಥಿ ಕೇಳಿದ ಪ್ರಶ್ನೆ ಎಲ್ಲರ ಮನದ ಪ್ರಶ್ನೆ ಆಗಿತ್ತು. ಹಾಗೆಯೇಲೇಖಕರು ಕೊಟ್ಟ ಉತ್ತರ ಎಲ್ಲ ವಿದ್ಯಾರ್ಥಿಗಳಿಗೂ ಅನುಕೂಲಕರವಾಗಿತ್ತು. ಹಾಗಾಗಿ ಯಾವಾಗಲು ನಿಮ್ಮ ಅನುಮಾನಗಳನ್ನು
ನಿಮ್ಮ ಗುರುಗಳ ಹತ್ತಿರ ಕೇಳಿ ಪರಿಹರಿಸಿಕೊಳ್ಳಿ,ಎಂದೂ ಗುರುಗಳನ್ನು ಪರೀಕ್ಷಿಸುವ ಒಂದು ಅಭ್ಯಾಸ ಕ್ಕೆ ಹೋಗಬೇಡಿ. ಏಕೆಂದರೆಎಲ್ಲವನ್ನು ಮನುಷ್ಯ ನಾದವನು ನೆನಪಿನಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ.ಹಾಗೆಯೇ ಎಲ್ಲ ವಿಷಯಗಳನ್ನು ಒಬ್ಬನೇ ಒಬ್ಬವ್ಯಕ್ತಿ ತಿಳಿದುಕೊಂಡಿರುವುದು ಅಸಾಧ್ಯ.
ಜೀವನ ಅಂದ್ರೆ ಪುಟ್ಬಾಲ್ ಆಟವಿದ್ದಂತೆ , ನಾವು ಕಾಲ್ಚೆಂಡುಗಳು ,ಜನರಿಂದ ಆಗಾಗ ಒದೆ ತಿನ್ನಬೇಕಾಗುತ್ತದೆ . ಒದೆ ತಿನ್ನದೇ ಕಷ್ಟ,ಅವಮಾನಅನುಭವಿಸದೆ )ಯಶಸ್ಸು (ಗೋಲ್ )ತಲುಪಲು ಆಗುವುದಿಲ್ಲ.
ಶುಭಾದಿನದೊಂದಿಗೆ
ನೆಟ್ನಾಗ
ಎ.ಟಿ.ನಾಗರಾಜ
ಡಬ್ಲ್ಯು ,ಡಬ್ಲ್ಯು,ಡಬ್ಲ್ಯು ಸನ್ ನ್ಯಾಚುರಲ್ ಫ್ಲಾಶ್.ಕಂ/
+೯೧-9632172486
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ