ಎಚ್ಚರಗೇಡಿತನವನ್ನು ಹೋಗಲಾಡಿಸಿಕೊಳ್ಳುವುದು ಹೇಗೆ? ನಮಗೆ ನಾವೇ ಬುದ್ಧಿ ಹೇಳಿಕೊಳ್ಳುವುದರ ಮೂಲಕ, ಏನೆಂದು ಬುದ್ಧಿಹೇಳಬೇಕು?"ನೋಡು ನೀನು ಹೀಗೆ ಮರೆಯುತ್ತ ಹೋದರೆ ನಿನಗೆ ಕಷ್ಟ -ನಷ್ಟ-ಭ್ರಷ್ಟ ಕಟ್ಟಿಟ್ಟಿದ್ದು. ಆದ್ದರಿಂದ ಪ್ರತಿಯೊಂದುವಿಷಯದಲ್ಲೂ ಎಚ್ಚರವಹಿಸುವುದನ್ನು ಅಭ್ಯಾಸಮಾಡಿಕೋ.ಸ್ವಲ್ಪ ಎಚ್ಚರಿಕೆಯಿಂದಿದ್ದರೆ ಎಷ್ಟು ಲಾಭವಿದೆ ಗೊತ್ತೇ?" ಎಂದು.
ಒಮ್ಮೆ ಒಬ್ಬ ಬೆಂಗಳೂರಿನಿಂದ ಬೊಂಬಾಯಿಗೆ ಹೊರಟ-ಬಹುಮುಖ್ಯ ಸಮ್ಮೇಳನವೊಂದರಲ್ಲಿ ಭಾಗವಹಿಸಲು,ಜೊತೆಯಲ್ಲಿತೆಗೆದುಕೊಂಡು ಹೋಗಬೇಕಾದ ಸಾಮಾನು ಸರಂಜಾಮೂಗಳನ್ನೆಲ್ಲ ಎಣಿಸಿ ನೋಡಿದ -ಪೆಟ್ಟಿಗೆ,ಹಣ್ಣಿನ ಬುಟ್ಟಿ,ಕೈಚೀಲ , ರೈಳುತಂಬಿಗೆ ಎಲ್ಲ ಸರಿಯಾಗಿದೆ,ಎಲ್ಲವನ್ನು ತೆಗೆದುಕೊಂಡು ದಡದಡ ನಡೆದ, ರೈಲು ಹತ್ತಿ ಕಿಟಕಿಯ ಬಳಿಯಿದ್ದ ತನ್ನ ಸ್ಥಾನದಲ್ಲಿಆರಾಮವಾಗಿ ಕುಳಿತ. ರೈಲು ಹೊರಟಿತು.ಇವನು ಕಿಟಕಿಯ ಹೊರಗೆ ಕಣ್ಣು ಹಾಯಿಸಿದ . ಓಡುವ ಗಾಡಿ ಕ್ಷಣಕ್ಷಣಕ್ಕೂ ಹೊಸ ಹೊಸದೃಶ್ಯಗಳನ್ನು ಒದಗಿಸಿ ಕೊಡುತ್ತಿತ್ತು.ನಗರದ ಕಟ್ಟಡಗಳನ್ನೇ ,ಕಟ್ಟಡಗಳ ಗೋಡೆಗಳನ್ನೇ ನೋಡಿದ್ದ ಅವನ ಕಣ್ಣುಗಳಿಗೆ ಹಬ್ಬ.ಅವನಮನಸ್ಸು ಪ್ರಕೃತಿಯ ಆನಂತತೆಯನ್ನು ಅನುಭವಿಸುತ್ತ,, ಅದರಲ್ಲೇ ಲೀನವಾಯಿತು . ಆಗ ಇದ್ದಕ್ಕಿದ್ದಂತೆ ಒಂದು ಧ್ವನಿ ಕೇಳಿಸಿತು;
"ಟಿಕೆಟ್ ತೋರಿಸ್ರಿ"
ಟಿಕೆಟ್ ಕಲೆಕ್ಟರ್ ನ ಗೊಗ್ಗರು ಧ್ವನಿ ಅದು .ಈತ ವಾಸ್ತವಿಕ ಸ್ಥಿತಿಗೆ ಇಳಿದು ಜೇಬಿಗೆ ಕೈಹಾಕಿದ ಟಿಕೆಟ್ ತೆಗೆಯುವುದಕ್ಕೆ .ಆದರೆಆದರೆ!ಜೇಬಿನಲ್ಲಿ ಟಿಕೆಟ್ ಇಲ್ಲ! ಎಲ್ಲಿ ?ಟಿಕೆಟ್ ಎಲ್ಲಿ ?
"ಓಹ್ ! ಮರೆತೇಬಿಟ್ಟೆ . ಟಿಕೇಟು ಮನೆಯಲ್ಲೇ ಉಳಿದುಬಿಟ್ಟಿದೆ ಸರ್ ! ಭದ್ರವಾಗಿರಲಿ ಅಂತ ಬೀರುವಿನಲ್ಲಿಟ್ಟಿದ್ದೆ . ಹೊರಡುವಗಡಿಬಿಡಿಯಲ್ಲಿ ಮರೆತುಬಿಟ್ಟೆ .ಸಾರಿ ಸರ್ !"
"ಸಾರೀನೂ ಇಲ್ಲ ಗೀರೀನು ಇಲ್ಲ . ಏನ್ರಿ , ನನ್ನಹತ್ರ ನಾಟಕ ಆಡ್ತಿದ್ದೀರೆನ್ರಿ ?"
"ಇಲ್ಲ ಸರ್ ! ಖಂಡಿತವಾಗಿಯೂ ಟಿಕೆಟ್ ಮನೆಲಿದೆ ಸರ್ !"
"ನೋಡಿ, ಅದೆಲ್ಲ ಆಗೋದಿಲ್ಲ. ಒಂದೋ ನೀವು ದಂಡ ತೆರಬೇಕು . ಇಲ್ಲವಾದರೆ ಮುಂದಿನ ನಿಲ್ದಾಣದಲ್ಲಿ ಇಳಿಯಿರಿ ."
ಆತನ ಬಳಿ ದಂಡ ತರುವಷ್ಟು ಹಣ ಇಲ್ಲದ್ದರಿಂದ ಮುಂದಿನ ನಿಲ್ದಾಣದಲ್ಲಿ ಇಳಿದ. ಆದರೂ ಸ್ವಲ್ಪ ದಂಡವನ್ನಂತುತೆರಲೆಬೇಕಾಯಿತು.ಬಳಿಕ ಹೊಸದಾಗಿ ಟಿಕೆಟ್ ಕೊಂದು ಮುಂದಿನ ರೈಲಿನಲ್ಲಿ ಮುಂದುವರಿದ. ಆದರೆ ಬೊಂಬಾಯಿಗೆತಲುಪುವಷ್ಟರಲ್ಲಿ ಸಮ್ಮೇಳನದ ಬಹುಭಾಗ ಮುಗಿದು ಹೋಗಿತ್ತು. ಒಂದು ಸಣ್ಣ ಮರವೆಯಿಂದಾಗಿ ಈ ಕಷ್ಟ-ನಷ್ಟ -ಭ್ರಷ್ಟ ! ಸಮ್ಮೇಳನಕ್ಕೂ ಸಮಯಕ್ಕೆ ಸರಿಯಾಗಿ ಬರಲಾಗಲಿಲ್ಲ.
ಶುಭದಿನದ ಶುಭಾಶಯಗಳೊಂದಿಗೆ ನೆಟ್ ನಾಗ
ಎ.ಟಿ.ನಾಗರಾಜ
ಡಬ್ಲ್ಯು ಡಬ್ಲ್ಯು ಡಬ್ಲ್ಯು ಸನ್ ನ್ಯಾಚುರಲ್ ಫ್ಲಾಶ್.ಕಂ /
+೯೧-9632172486
!
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ